ಮಲ್ಲಯ್ಯನ ಭಕ್ತರಿಗೆ 19ನೇ ವರ್ಷದ ಮಹಾದಾಸೋಹ

KannadaprabhaNewsNetwork |  
Published : Apr 05, 2024, 01:03 AM IST
ಮಹಾಲಿಂಗಪುರ  | Kannada Prabha

ಸಾರಾಂಶ

ಶ್ರೀಶೈಲ ಪಾದಯಾತ್ರೆ ಕೈಗೊಂಡ ಸಕಲ ಭಕ್ತರಿಗಾಗಿ ಮಹಾಲಿಂಗಪುರದ ಭಕ್ತರಿಂದ 19ನೇ ವರ್ಷದ ಮಹಾದಾಸೋಹಕ್ಕಾಗಿ ಪಟ್ಟಣದ ದಾನಿಗಳು, ಭಕ್ತರು ನೀಡಿದ ಸಜ್ಜಕ ರವಾ, ಅಕ್ಕಿ, ಬೆಲ್ಲ, ಬೆಳೆಕಾಳುಗಳು, ಕಾರ, ತರಕಾರಿ ಸೇರಿದಂತೆ ದಾಸೋಹಕ್ಕೆ ಬೇಕಾದ ಸಕಲ ಸಾಮಗ್ರಿಗಳನ್ನು ದಾನರೂಪದಲ್ಲಿ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಯುಗಾದಿ ಜಾತ್ರಾ ಮಹೋತ್ಸವದ ನಿಮಿತ್ತ ಪಾದಯಾತ್ರೆಯ ಮೂಲಕ ಶ್ರೀಶೈಲಕ್ಕೆ ತೆರಳಿದ ಭಕ್ತರಿಗಾಗಿ ಮಹಾದಾಸೋಹ ನೇರವೇರಿಸುವುದಕ್ಕಾಗಿ ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆ ಸೇವಾ ಸಮಿತಿ ಹಿಟ್ಟಕ್ಕಿ ತುಂಬಿದ ವಾಹನದೊಂದಿಗೆ ಶ್ರೀಶೈಲಕ್ಕೆ ಪ್ರಯಾಣ ಬೆಳೆಸಿದರು.

ಶ್ರೀಶೈಲ ಪಾದಯಾತ್ರೆ ಕೈಗೊಂಡ ಸಕಲ ಭಕ್ತರಿಗಾಗಿ ಮಹಾಲಿಂಗಪುರದ ಭಕ್ತರಿಂದ 19ನೇ ವರ್ಷದ ಮಹಾದಾಸೋಹಕ್ಕಾಗಿ ಪಟ್ಟಣದ ದಾನಿಗಳು, ಭಕ್ತರು ನೀಡಿದ ಸಜ್ಜಕ ರವಾ, ಅಕ್ಕಿ, ಬೆಲ್ಲ, ಬೆಳೆಕಾಳುಗಳು, ಕಾರ, ತರಕಾರಿ ಸೇರಿದಂತೆ ದಾಸೋಹಕ್ಕೆ ಬೇಕಾದ ಸಕಲ ಸಾಮಗ್ರಿಗಳನ್ನು ದಾನರೂಪದಲ್ಲಿ ನೀಡಿದ್ದಾರೆ. ಅವಶ್ಯಕ ಸಾಮಗ್ರಿಗಳನ್ನು ಸೇವಾ ಸಮಿತಿಯಿಂದಲೂ ಖರೀದಿಸಲಾಗಿದೆ. ಶ್ರೀಶೈಲಂ ಮಹಾಕ್ಷೇತ್ರದ ಛತ್ರಪತಿ ಶಿವಾಜಿ ಭವನದ ಹತ್ತಿರ ಇದೇ ಏಪ್ರಿಲ್ 4ರಿಂದ ಯುಗಾದಿ ಪಾಡ್ಯೆಯ ಏ.9ರವರೆಗೆ 5 ದಿನಗಳ ಕಾಲ ನಿರಂತರ ಮಹಾಸೋಹ ಜರುಗಲಿದೆ. ಈ ಐದು ದಿನಗಳಲ್ಲಿ ಶ್ರೀಶೈಲ ಕ್ಷೇತ್ರಕ್ಕೆ ಬರುವ ಪಾದಯಾತ್ರಿಕರು, ಭಕ್ತರು ಪ್ರಸಾದ ಸ್ವೀಕರಿಸಬೇಕೆಂದು ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆಯ ಸೇವಾ ಸಮಿತಿ ಅಧ್ಯಕ್ಷ ವಿಜುಗೌಡ ಪಾಟೀಲ ತಿಳಿಸಿದರು.

ಮಹಾಲೀಂಗೇಶ್ವರ ದೇವಸ್ಥಾನದ ಈಶ್ವರ ಮಠಪತಿ, ಪುರಸಭೆ ಸದಸ್ಯರು, ಪುರದ ಹಿರಿಯರಾದ ಯಲ್ಲನಗೌಡ ಪಾಟೀಲ ಆಹಾರ ಸಾಮಗ್ರಿಯ ವಾಹನಕ್ಕೆ ಪೂಜೆ ಸಲ್ಲಿಸಿ ಅನ್ನದಾಸೋಹ ಸೇವಾ ಸಮಿತಿಯವರನ್ನು ಬೀಳ್ಕೊಟ್ಟರು.

ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆಯ ಸೇವಾ ಸಮಿತಿ ಉಪಾಧ್ಯಕ್ಷ ವಿಷ್ಣುಗೌಡ ಪಾಟೀಲ, ಕಾರ್ಯದರ್ಶಿ ಶಂಕರ ಮುರಗೋಡ, ಖಜಾಂಚಿ ಸಿದ್ರಾಮ ದಲಾಲ, ಸದಸ್ಯರಾದ ವಿಜಯ ಕಂಬಾರ, ಶಿವಾನಂದ ಮಠಪತಿ, ಮಹಾಲಿಂಗ ಗುರವ, ವೀರಭದ್ರಯ್ಯ ಮಠಪತಿ, ಮಹಾಲಿಂಗಪ್ಪ ಪರೀಟ, ಯಲ್ಲಪ್ಪ ಹಟ್ಟಿ, ಶೇಖರ ವಗ್ಗರ, ಸದ್ಭಕ್ತರಾದ ಮಹಾಲಿಂಗ ಕೋಟಿ, ಗುರುಲಿಂಗಯ್ಯಾ ಮಠಪತಿ, ರವಿ ಮುಂಡಗನೂರ, ರಮೇಶ ಸಬಕಾಳೆ, ಶಿವುಗೌಡ ಪಾಟೀಲ, ಕೇದಾರಿ ಬಾಳಿಕಾಯಿ, ಆನಂದ ಕಾಗಿ ಸೇರಿದಂತೆ 25ಕ್ಕೂ ಅಧಿಕ ಸದ್ಭಕ್ತರು ಮಹಾದಾಸೋಹದಲ್ಲಿ ಸೇವೆ ಸಲ್ಲಿಸುವದಕ್ಕಾಗಿ ಶ್ರೀಶೈಲಕ್ಕೆ ತೆರಳಿದರು.

ಬಾಕ್ಸ್ :

19ನೇ ವರ್ಷದ ದಾಸೋಹ

ಪ್ರತಿ ವರ್ಷ ಯುಗಾದಿಯಂದು ನಡೆಯುವ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆಗೆ ಈ ಭಾಗದಿಂದ ಲಕ್ಷಾಂತರ ಜನರು ಪಾದಯಾತ್ರೆ ಮೂಲಕ ಪ್ರಯಾಣ ಬೆಳೆಸುತ್ತಾರೆ. ಮಲ್ಲಯ್ಯನ ಕಂಬಿ, ಪಲ್ಲಕ್ಕಿ ಹೊತ್ತು ಸಾಗಿ ಶ್ರೀಶೈಲ ತಲಪುತ್ತಾರೆ. ಪಾದಯಾತ್ರೆಯಲ್ಲಿ ಹಿರಿಯರು, ಕಿರಿಯರು, ಮಹಿಳೆಯರು ಭಾಗಿಯಾಗುತ್ತಾರೆ. ಪ್ರತಿ ವರ್ಷ ಪಾದಯಾತ್ರೆ ಕೈಗೊಳ್ಳುವ ಮಲ್ಲಯ್ಯನ ಭಕ್ತರಿಗೆ ಅನ್ನದಾಸೋಹ ಕಲ್ಪಿಸುವ ಕಾರ್ಯವನ್ನು ಕಳೆದ 18 ವರ್ಷಗಳಿಂದ ಮಹಾಲಿಂಗಪುರ ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆ ಸೇವಾ ಸಮಿತಿ ಮಾಡಿಕೊಂಡು ಬರುತ್ತಿದೆ. ಪ್ರಸಕ್ತ ವರ್ಷ 19ನೇ ವರ್ಷದ ಸೇವೆಗೆ ಅಣಿಯಾಗಿದೆ. ಇವರಿಗೆ ಪಟ್ಟಣದ ಭಕ್ತರು, ಹಲವಾರು ದಾನಿಗಳು ಕೈ ಜೋಡಿಸಿದ್ದಾರೆ. ಬುಧವಾರ ಸಂಜೆ ಎಲ್ಲ ದವಸ-ದಾನ್ಯಗಳ ಮೂಲಕ ಶ್ರೀಶೈಲದತ್ತ ಸಮಿತಿಯವರು ಪ್ರಯಾಣ ಬೆಳೆಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ