ಕನ್ನಡಪ್ರಭ ವಾರ್ತೆ ತುಮಕೂರು
ಸಿದ್ಧಗಂಗಾ ವಿದ್ಯಾಸಂಸ್ಥೆಯ ಶಾಖೆ ಕೋರಾದ ಶ್ರೀ ಮಹಾಲಿಂಗೇಶ್ವರ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ಪ್ರೊ. ಬಿ. ವೀರಭದ್ರಯ್ಯ ದತ್ತಿ, ಪ್ರೊ. ಸಿ.ಎಚ್. ಮರಿದೇವರು ದತ್ತಿ ಹಾಗೂ ಗೂಳೂರು ಚನ್ನವೀರಸ್ವಾಮಿ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾತೃಭಾಷೆಯ ಮೂಲಕ ಗ್ರಹಿಸುವ ವಿಷಯ ಎಷ್ಟೇ ಕಠಿಣವಾಗಿದ್ದರೂ ಸಹ ಸುಲಭವಾಗಿ ಅರ್ಥೈಸಿಕೊಳ್ಳುವುದರ ಜೊತೆಗೆ ವಿಮರ್ಶಿಸಲು ಸಾಧ್ಯವಾಗುವುದಲ್ಲದೆ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ ಎಂದು ತಿಳಿಸಿದರು.ಶೂನ್ಯ ಸಂಪಾದನೆ ಕುರಿತು ಉಪನ್ಯಾಸ ನೀಡಿದ ಎಂ. ಸುರೇಶ್ ವಿದ್ಯೆ ವಿನಯವನ್ನು, ಗೌರವವನ್ನು, ಧನವನ್ನು ಕೊಡುತ್ತದೆ. ಅದರ ಸದ್ವಿನಿಯೋಗದಿಂದ ಜೀವನದಲ್ಲಿ ಉನ್ನತ ಗುರಿಯನ್ನು ಸಾಧಿಸುವಂತೆ ಏನೂ ಇಲ್ಲ ಹಾಗೂ ಎಲ್ಲವೂ ಇದೆ ಎಂಬುದರ ಸಾಧನೆಯ ಸಾರವೇ ಶೂನ್ಯ ಸಂಪಾದನೆ ಎಂದು ತಿಳಿಸಿದರು.
ತುಮಕೂರು ಜಿಲ್ಲೆಯ ಕವಿಗಳ ಸಾಹಿತ್ಯ ಕುರಿತು ಡಾ. ಡಿ.ಎನ್. ಯೋಗೀಶ್ವರಪ್ಪ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಉತ್ತರ ಕರ್ನಾಟಕದ ಕಲ್ಯಾಣದಲ್ಲಿ ರಚನೆಯಾಗಿದ್ದ ವಚನ ಸಾಹಿತ್ಯ ಕಣ್ಮರೆಯಾಗಿದ್ದ ಸಂದರ್ಭದಲ್ಲಿ ಹದಿನೈದನೆಯ ಶತಮಾನದಲ್ಲಿ ತುಮಕೂರು ಜಿಲ್ಲೆಯ ಮೂಲಕ ಪುನರುತ್ಥಾನ ಕಂಡಿತು. ಇದಕ್ಕೆ ತುಮಕೂರಿನ ಅನೇಕ ಪ್ರಾಂತ್ಯಗಳನ್ನಾಳಿದ ಮಹಾನಾಡಪ್ರಭುಗಳ ಕಾಣಿಕೆ ಅಮೂಲ್ಯವಾದುದು ಎಂದು ತಿಳಿಸಿದರು.