ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

1416 ಪ್ರಕರಣ ರಾಜಿ ಸಂಧಾನದ ಮೂಲಕ ಇತ್ಯರ್ಥ

KannadaprabhaNewsNetwork | Published : Mar 18, 2024 1:51 AM

ಎರಡು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಒಟ್ಟು ೬೫೫೬ ಬಾಕಿ ಇರುವ ಪ್ರಕರಣಗಳಲ್ಲಿ ೨೨೩೭ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಪೈಕಿ ಒಟ್ಟು ೧೪೧೬ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳತಾಲೂಕು ಕಾನೂನು ಸೇವಾ ಸಮಿತಿಯ ವತಿಯಿಂದ ಇಲ್ಲಿನ ನ್ಯಾಯಾಲಯಗಳ ಸಂಕೀರ್ಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ ಏರ್ಪಡಿಸಲಾಗಿತ್ತು.

ಎರಡು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಒಟ್ಟು ೬೫೫೬ ಬಾಕಿ ಇರುವ ಪ್ರಕರಣಗಳಲ್ಲಿ ೨೨೩೭ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಪೈಕಿ ಒಟ್ಟು ೧೪೧೬ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು. ಇದರಲ್ಲಿ ಅಪರಾಧ ಪ್ರಕರಣಗಳು, ಎಂವಿಸಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೆಂಟೇನೆನ್ಸ್ ಪ್ರಕರಣಗಳು, ಪಾಲುವಾಟ್ನಿ ದಾವೆಗಳು, ಎಲ್‌ಎಸಿ-ಇಪಿ ಪ್ರಕರಣಗಳು, ಎಂವಿಸಿ-ಇಪಿ ಪ್ರಕರಣಗಳು, ಅಪರಾಧ ದಂಡ ಪ್ರಕರಣಗಳು ಸೇರಿದಂತೆ ಅಬಕಾರಿ ಇಲಾಖೆಯ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಲಾಯಿತು. ಅಲ್ಲದೇ ಪೂರ್ವದಾವೆ ಪ್ರಕರಣಗಳಲ್ಲಿ, ಕಂದಾಯ ಇಲಾಖೆಯ ಕಂದಾಯ ಅದಾಲತ್ ಪ್ರಕರಣಗಳು ಹಾಗೂ ಬ್ಯಾಂಕಿನ ಪ್ರಕರಣಗಳು ಸೇರಿ ಒಟ್ಟು೨೮೮೧ ಪ್ರಕರಣಗಳಲ್ಲಿ ೧೩೮೮ ಪ್ರಕರಣಗಳನ್ನು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷೆ ಲಕ್ಷ್ಮೀ ನಿಂಗಪ್ಪ ಗರಗ ಹಾಗೂ ಸದಸ್ಯ ಕಾರ್ಯದರ್ಶಿ ಸಂಪತಕುಮಾರ ಬಳೂಲಗಿಡದ ಇವರುಗಳು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿದರು.

ನ್ಯಾಯಾಂಗ ಸಂಧಾನಕಾರರಾಗಿ ರೇಣುಕಾ ಪಾಟೀಲ ಹಾಗೂ ಶೋಭಾ ಪಾಟೀಲ, ಸರಕಾರಿ ವಕೀಲರಾದ ಬಸವರಾಜ ಆಹೇರಿ, ಅಪರ ಸರ್ಕಾರಿ ವಕೀಲ ಎಚ್.ಎಲ್.ಸರೂರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ, ತಾಲೂಕು ಕಾನೂನು ಸೇವಾ ಸಮಿತಿಯ ಆಡಳಿತ ಸಹಾಯಕ ಅರವಿಂದ ಕುಂಬಾರ, ಶಿರಸ್ತೇದಾರರಾದ ಎಸ್.ಎಸ್.ಚಕ್ರಮನಿ ಮತ್ತು ಸುರೇಶ ಬಳಗಾನೂರ, ನ್ಯಾಯಾಲಯದ ಸಿಬ್ಬಂದಿಗಳಾದ ಎಮ್.ಎಫ್.ಜೇವರಗಿ, ಎ.ಆರ್.ಮುಜಾವರ, ಪ್ರಸನ್ನ, ನರ್ಮದಾ ಮರೋಳ, ಅಮಿದಾ ನದಾಫ್, ಎಮ್.ಎಸ್.ಸಾಲಿಮಠ, ಪಿ.ಎಲ್.ಗಾಯಕವಾಡ, ಕಾವೇರಿ ರಾಠೋಡ, ಮಹಾಂತೇಶ ಹಚರೆಡ್ಡಿ, ರಾಜೇಶ್ವರಿ, ಮಧುಧರ್ಮಗಿರಿ, ಎಸ್.ಎಸ್.ಹರನಾಳ, ಮೀನಾಕ್ಷಿ ದೊಡಮನಿ, ಗೀತಾರಾಂಪುರ, ಚೆನ್ನಮ್ಮ ಬಾಗೇವಾಡಿ, ಮಂಜುಳಾ ಕಟ್ಟಿಮನಿ, ನೀಲಮ್ಮ ಬಡಿಗೇರ. ಶ್ರುತಿ ಜಾಯಿ, ನಾಗೇಶ ಮಾದಿಹಳ್ಳಿ, ಸುಷ್ಮಾ ಬಾನಿ ಹಾಗೂ ನ್ಯಾಯವಾದಿಗಳಾದ ಸಿ.ಆರ್.ಜೋಶಿ, ಜೆ.ಎ.ಚಿನಿವಾರ, ಎಸ್.ಆರ್.ಸಜ್ಜನ, ಎನ್.ಜಿ. ಕುಲಕರ್ಣಿ, ಎನ್.ಆರ್.ಮೋಕಾಶಿ, ಎಮ್.ಆರ್.ಪಾಟೀಲ, ಎಮ್.ಎಚ್.ಕ್ವಾರಿ,ಚೇತನ ಶಿವಶಿಂಪಿ, ಎಸ್.ಆರ್.ಜೋಗಿ, ಎಸ್.ಎಂ.ಕಿಣಗಿ, ಪಿ.ಎನ್.ಬಿರಾದಾರ, ಎಲ್.ಎಸ್.ಮೇಟಿ, ಬಿ.ಎಮ್.ಮುಂದಿನಮನಿ, ಆಯ್.ಎಸ್.ಹಗಟಗಿ, ಎಮ್.ಎ.ಲಿಂಗಸೂರ, ಎಲ್.ಆರ್.ನಾಲತವಾಡ, ಎನ್.ಬಿ.ಮುದ್ನಾಳ, ಎಸ್.ಎಚ್.ಚಳ್ಳಗಿ, ಎಸ್.ಆರ್.ಅಮರಣ್ಣವರ, ಎಚ್.ಟಿ.ಪೂಜಾರಿ, ಬಸವರಾಜ ಚಿನಿವಾರ, ಪಿ.ಎ.ಹಿರೇಮಠ, ಎಂ.ಆರ್.ಪಾಟೀಲ, ಎಸ್.ಸಿ.ಹಿರೇಮಠ ಸೇರಿದಂತೆ ಇದ್ದರು.