ಕನ್ನಡಪ್ರಭ ವಾರ್ತೆ ಶಿರಾ
ಬುಧವಾರ ರಂಗನಾಥ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಸಹಕಾರ ರತ್ನ ಎಸ್.ಎನ್. ಕೃಷ್ಣಯ್ಯ ಅವರ ತೃತೀಯ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಶಾಲೆಗೆ ಕೊಡುಗೆ ನೀಡಿದ್ದ ನೂತನ ಸ್ವಾಗತ ಕಮಾನು ಹಾಗೂ ಶಾಲಾ ಚಟುವಟಿಕೆ ಪುಸ್ತಕಗಳ ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶಿರಾ ತಾಲೂಕು ಮುಂಬರುವ ದಿನಗಳಲ್ಲಿ ಶಿಕ್ಷಣ, ಕೈಗಾರಿಕೆ, ಉದ್ಯೋಗ, ರಸ್ತೆ, ಕುಡಿಯುವ ನೀರು ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ಧಿ ಹೊಂದಲಿದ್ದು, ಇದಕ್ಕೆ ಬೇಕಾದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದ ಅವರು ದಿ. ಎಸ್.ಎನ್. ಕೃಷ್ಣಯ್ಯ ಅವರು ಸಮಾಜಮುಖೀಯಾಗಿದ್ದರು. ಅವರ ಮಾರ್ಗದರ್ಶನವನ್ನು ನಾವು ಅನುಸರಿಸಬೇಕು. ಶಿರಾ ತಾಲೂಕಿನ ಅಭಿವೃದ್ಧಿ ವಿಷಯದಲ್ಲಿ ಅನೇಕ ಸಲಹೆಗಳನ್ನು ನೀಡುತ್ತಿದ್ದರು. ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಸೇವೆ ಸಲ್ಲಿಸಿ ಸಹಕಾರಿ ರತ್ನ ಪ್ರಶಸ್ತಿ ಪಡೆದಿದ್ದರು. ಅವರ ಹೆಸರಿನಲ್ಲಿ ಸಮಾಜಮುಖಿ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.ನಾಡೋಜ ಬರಗೂರು ರಾಮಚಂದ್ರಪ್ಪ ಮಾತನಾಡಿ, ಈ ದೇಶದ ಹೆಣ್ಣು ಮಕ್ಕಳಿಗೆ ಅಕ್ಷರ ಕಲಿಸುವುದಕ್ಕಾಗಿ ಕಷ್ಟ ಅನುಭವಿಸಿದ ಮಹಾನ್ ಸಾಧಕಿ ಸಾವಿತ್ರ ಬಾಯಿ ಪುಲೆ ಅವರ ಜಯಂತಿ ದಿನವಾದ ಜನವರಿ ೩ ರನ್ನು ರಾಷ್ಟ್ರೀಯ ಮಹಿಳಾ ದಿನವನ್ನಾಗಿ ಘೋಷಿಸಬೇಕು ಎಂದು ಹೇಳಿ ಶಿಕ್ಷಣ ಸಂಸ್ಥೆ ಚಿಕ್ಕದು ದೊಡ್ಡದು ಎಂಬುದಕ್ಕಿಂತ ಹೇಗೆ ಶಿಕ್ಷಣ ದೊರಕುತ್ತಿದೆ ಎಂಬುದು ಮುಖ್ಯ. ಎಸ್.ಎನ್. ಕೃಷ್ಣಯ್ಯ ಅವರ ನೆನಪಿಗಾಗಿ ಸಮಾಜಮುಖಿ ಕಾರ್ಯವನ್ನು ಸಾವಿತ್ರ ಬಾಯಿಪುಲೆ ಜನ್ಮ ಜಯಂತಿಯಂದು ಮಾಡುತ್ತಿರುವುದು ವಿಶೇಷ. ಎಸ್.ಎನ್. ಕೃಷ್ಣಯ್ಯ ಅವರು ಸಹಕಾರಿ ಕ್ಷೇತ್ರದಲ್ಲಿ, ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅವರಿಗೆ ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಇತ್ತು. ಕಲೆ ಸಾಹಿತ್ಯಕ್ಕೆ ಸಂಬಂದಪಟ್ಟ ಕಾರ್ಯಕ್ರಮದಲ್ಲಿ ಎಸ್.ಎನ್. ಕೃಷ್ಣಯ್ಯನವರು ಹೆಚ್ಚು ಭಾಗವಹಿಸುತ್ತಿದ್ದರು. ಅಂತಹವರ ಸ್ಮರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಸಂತಷ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್. ಕೃಷ್ಣಪ್ಪ, ಬಿ.ಆರ್.ಸಿ. ಕುಮಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಗಂಗಾಧರ್, ನಗರಸಭಾ ಸದಸ್ಯೆ ಗಿರಿಜ ವಿಜಯಕುಮಾರ್, ಕಸಾಪ ಅಧ್ಯಕ್ಷ ಪಾಂಡುರಂಗಯ್ಯ, ಕನಕ ಬ್ಯಾಂಕ್ ಅಧ್ಯಕ್ಷ ಎಸ್.ಎಲ್. ರಂಗನಾಥ್, ಎಸ್.ಎಸ್. ಕೃಷ್ಣಯ್ಯ ಫೌಂಡೇಷನ ಎಸ್.ಬಿ. ವಿಜಯಕುಮಾರ್, , ನಿವೃತ್ತ ಪ್ರಾಂಶುಪಾಲ ಡಿ.ಎಸ್. ಕೃಷ್ಣಮೂರ್ತಿ, ನವೋದಯ ಯುವ ವೇದಿಕೆಯ ಜಯರಾಮಕೃಷ್ಣ, ಮುಖ್ಯ ಶಿಕ್ಷಕ ಬಿ.ಟಿ. ರಂಗನಾಥ್, ಶಿಕ್ಷಕರಾದ ಸುಮಾ, ದಸಂಸ ಸಂಚಾಲಕ ಟೈರ್ ರಂಗನಾಥ್, ಮಾಜಿ ನಗರಸಭಾ ಸದಸ್ಯ ಬಸವರಾಜು, ವಿ.ಎಸ್. ಚಲಪತಿ, ಅಶೋಕ್ ಕುಮಾರ್, ಪಿ.ಎಚ್. ಮಹೇಂದ್ರಪ್ಪ ಸೇರಿದಂತೆ ಹಲವರು ಹಾಜರಿದ್ದರು.