ಶರಣಬಸವ ವಿವಿಯ 11 ವಿದ್ಯಾರ್ಥಿಗಳಿಗೆ ರು.5.50 ಲಕ್ಷ ವಿದ್ಯಾರ್ಥಿ ವೇತನ

KannadaprabhaNewsNetwork |  
Published : Apr 12, 2024, 01:15 AM ISTUpdated : Apr 12, 2024, 10:37 AM IST
ಫೋಟೋ- ಶರಣಬಸವ ಯೂನಿವರ್ಸಿಟ | Kannada Prabha

ಸಾರಾಂಶ

ಶರಣಬಸವ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದ 11 ವಿದ್ಯಾರ್ಥಿಗಳಿಗೆ   ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್ (ಐಇಇಇ) ಇಂಡಿಯಾ ವತಿಯಿಂದ ಒಟ್ಟು ₹5.50 ಲಕ್ಷ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಿದೆ.

 ಕಲಬುರಗಿ :  ಶರಣಬಸವ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದ 11 ವಿದ್ಯಾರ್ಥಿಗಳಿಗೆ (ವಿಶೇಷವಾಗಿ ಮಹಿಳೆಯರಿಗೆ) ಪರೋಪಕಾರಿಯಾದ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್ (ಐಇಇಇ) ಇಂಡಿಯಾ ವತಿಯಿಂದ ಒಟ್ಟು ₹5.50 ಲಕ್ಷ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಿದೆ.

ಶರಣಬಸವ ವಿಶ್ವವಿದ್ಯಾಲಯದ ಡೀನ್ ಡಾ. ಲಕ್ಷ್ಮೀ ಪಾಟೀಲ್ ಮಾಕಾ ಹೇಳಿಕೆ ನೀಡಿದ್ದು, ವಿದ್ಯಾರ್ಥಿವೇತನದ ಜೊತೆಗೆ,ಸುಮಾರು 12 ಕಲಿಕಾ ಮತ್ತು ಮಾರ್ಗದರ್ಶನ ಅವಧಿಗಳನ್ನು ವಿದ್ಯಾರ್ಥಿಗಳು ಕೈಗಾರಿಕೆ ಮತ್ತು ಶೈಕ್ಷಣಿಕ, ವೃತ್ತಿಪರರು, ಐಇಇಇ ಯ ಲೋಕೋಪಕಾರ ಉಪಕ್ರಮಗಳಲ್ಲಿ ತೊಡಗಿಸಿಕೊಳ್ಳುವಿಕೆ, ವೃತ್ತಿಪರರೊಂದಿಗೆ ನೆಟ್‌ವರ್ಕಿಂಗ್ ಮತ್ತು ಪ್ಲೇಸ್ ಮೆಂಟ್ ನ ಬೆಂಬಲ ಹೀಗೆ ವಿದ್ಯಾರ್ಥಿಗಳು ಮಿಶ್ರಿತ ಕಲಿಕಾ ವೇದಿಕೆಗಳಲ್ಲಿ ಎರಡು ಕೋರ್ಸ್‌ಗಳಿಗೆ ಪ್ರವೇಶವನ್ನು ಹೊಂದಿರುತ್ತಾರೆಂದಿದ್ದಾರೆ.

ವಿದ್ಯಾರ್ಥಿ ವೇತನ ಮಂಜೂರಾದ 11 ವಿದ್ಯಾರ್ಥಿಗಳಲ್ಲಿ ವರ್ಷಾ ಹಂಗರಗಿ (ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್), ನಿಸರ್ಗ ಹೇರೂರಮಠ (ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್), ದಿವ್ಯ ಲಲಿತಾ ಎಂ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮೆಷಿನ್ ಲರ್ನಿಂಗ್), ವೈಷ್ಣವಿ ಸೋಮ (ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್)ಮಹಮ್ಮದೀ ಮಹೀನ ನಾಝ್(ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮೆಷಿನ್ ಲರ್ನಿಂಗ್), ನರ್ಮದಾ ಮೈಂಡೆ (ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್), ರಾಧಿಕಾ ಷಣ್ಮುಖ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮೆಷಿನ್ ಲರ್ನಿಂಗ್), ರಕ್ಷಿತಾ ಪಾಟೀಲ್ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮೆಷಿನ್ ಲರ್ನಿಂಗ್), ಐಶ್ವರ್ಯ ಸತ್ಯಪ್ರಕಾಶ್ ಕಟಕೆ (ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್), ಅಶ್ವಿನಿ ಬಿರಾದಾರ್ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮೆಷಿನ್ ಲರ್ನಿಂಗ್), ಮತ್ತು ಸೌಮ್ಯಶ್ರೀ ಕಲ್ಲೂರ(ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್) ಫಲಾನುಭವಿಗಳಗಿದ್ದಾರೆ.

ಇದರಿಂದ ಹರ್ಷ ವ್ಯಕ್ತಪಡಿಸಿದ ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಶರಣಬಸವಪ್ಪ ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ, ಕಾರ್ಯದರ್ಶಿ ಬಸವರಾಜ ದೇಶಮುಖ ಹಾಗೂ ವಿವಿ ಕುಲಸಚಿವ ಡಾ. ಅನಿಲಕುಮಾರ ಬಿಡವೆ ಅವರು ಐಇಇಇ ಯಿಂದ ವಿದ್ಯಾರ್ಥಿವೇತನಕ್ಕೆ ಅರ್ಹರಾದ ವಿದ್ಯಾರ್ಥಿಗಳಿಗೆ, ಮಾರ್ಗದರ್ಶಕರಿಗೆ ಹಾಗೂ ಶಿಕ್ಷಕ ವೃಂದಕ್ಕೆ ಅಭಿನಂದಿಸಿದ್ದಾರೆ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ