ಜಾತಿ ಗಣತಿ ವರದಿಯಲ್ಲಿ ಇನ್ನಷ್ಟು ಕುತೂಹಲದ ಮಾಹಿತಿ- 27% ಒಕ್ಕಲಿಗರು, 25% ಲಿಂಗಾಯತರು, 18% ಕುರುಬರು ಸಿಟಿಗಳಲ್ಲಿ- ರಾಜ್ಯದ ಒಟ್ಟು ಜನಸಂಖ್ಯೆಯ 65% ಜನ ನೆಲೆಸಿರುವುದು ಹಳ್ಳಿಗಳಲ್ಲೇ
ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿ ಆಧಾರಿತ ಜನಗಣತಿ) ವರದಿಯಲ್ಲಿರುವಂತೆ, ಮುಸ್ಲಿಂ ಸಮುದಾಯ ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದೆ. ಇದೇ ವೇಳೆ ಪರಿಶಿಷ್ಟರು, ಒಕ್ಕಲಿಗರು, ಲಿಂಗಾಯತರು ಹಾಗೂ ಕುರುಬರ ಸಂಖ್ಯೆ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲೇ ಹೆಚ್ಚು ಎಂಬ ಅಂಶ ಬೆಳಕಿಗೆ ಬಂದಿದೆ.
ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ದಾಖಲಿಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಜಾತಿ ಆಧಾರಿತ ಜನಗಣತಿ ಸಿದ್ಧಪಡಿಸಿದೆ. ವರದಿಯಲ್ಲಿ ಯಾವ ಸಮುದಾಯದ ಜನರು ಯಾವ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನೂ ತಿಳಿಸಿದೆ. ರಾಜ್ಯದಲ್ಲಿ ಒಟ್ಟು 76.99 ಲಕ್ಷ ಮುಸಲ್ಮಾನರು ರಾಜ್ಯದಲ್ಲಿದ್ದಾರೆ. ಅದರಲ್ಲಿ 44.63 ಲಕ್ಷ ಜನರು (58%) ನಗರ ಪ್ರದೇಶದಲ್ಲಿ ವಾಸವಿದ್ದು, ಉಳಿದ 32.36 ಲಕ್ಷ ಜನರು (42%) ಗ್ರಾಮೀಣ ಭಾಗದಲ್ಲಿ ನೆಲೆಸಿದ್ದಾರೆ ಎಂದು ತಿಳಿಸಲಾಗಿದೆ. ಅಲ್ಲದೆ, ಒಟ್ಟು ಮುಸ್ಲಿಂ ಸಮುದಾಯವದರು 15.37 ಲಕ್ಷ ಮನೆಗಳಲ್ಲಿ ನೆಲೆಸಿದ್ದು, ನಗರ ಪ್ರದೇಶದಲ್ಲಿಯೇ 9.11 ಲಕ್ಷ ಮನೆಗಳಲ್ಲಿ ಅವರು ವಾಸವಿದ್ದಾರೆ ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ.ಲಿಂಗಾಯತರಿಗಿಂತ ಒಕ್ಕಲಿಗರು ನಗರದಲ್ಲಿ ಹೆಚ್ಚು:
---
ಹಳ್ಳಿಗಳಲ್ಲೇ ಅಧಿಕ
---
ಗ್ರಾಮಗಳಲ್ಲಿ ವಾಸ
---
ಅನುದಾನ ಹೆಚ್ಚಳ?
ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ರಾಜ್ಯದಲ್ಲಿ 5.98 ಕೋಟಿ ಒಟ್ಟು ಜನಸಂಖ್ಯೆಯಿದ್ದರೆ, ಅದರಲ್ಲಿ 1.51 ಕೋಟಿ ಜನರು ಎಸ್ಸಿ/ಎಸ್ಟಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅಲ್ಲದೆ ಒಟ್ಟು ಜನಸಂಖ್ಯೆಯಲ್ಲಿ ಎಸ್ಸಿಗಳ ಸಂಖ್ಯೆ ಶೇ. 18.27 ಮತ್ತು ಎಸ್ಟಿಗಳ ಸಂಖ್ಯೆ ಶೇ. 7.16ರಷ್ಟಿದೆ. ಒಟ್ಟು ಎಸ್ಸಿ/ಎಸ್ಟಿ ಸಮುದಾಯದವರ ಸಂಖ್ಯೆ ಶೇ. 25.43ರಷ್ಟಿದೆ.ಅಲ್ಲದೆ, ಸದ್ಯ ಜನಸಂಖ್ಯೆ ಆಧಾರದಲ್ಲಿ ಎಸ್ಸಿಎಸ್ಪಿ/ಟಿಎಸ್ಪಿ ಕಾಯ್ದೆ ಅಡಿಯಲ್ಲಿ ರಾಜ್ಯ ಬಜೆಟ್ನ ಶೇ. 24.1ರಷ್ಟು ಮೊತ್ತವನ್ನು ಎಸ್ಸಿ/ಎಸ್ಟಿ ಸಮುದಾಯಕ್ಕಾಗಿ ನಿಗದಿ ಮಾಡಲಾಗುತ್ತಿದೆ. ಆದರೆ, ಜಾತಿ ಆಧಾರಿತ ಜನಗಣತಿಯಲ್ಲಿ ಎಸ್ಸಿ/ಎಸ್ಟಿ ಸಮುದಾಯದವರ ಸಂಖ್ಯೆಯಲ್ಲಿ ಏರಿಕೆಯಾದ ಕಾರಣ ರಾಜ್ಯ ಬಜೆಟ್ನಲ್ಲಿ ಶೇ. 25.43ರಷ್ಟು ಮೊತ್ತವನ್ನು ಎಸ್ಸಿಎಸ್ಪಿ/ಟಿಎಸ್ಪಿ ಅನುದಾನ ಕಾಯ್ದಿರಿಸಬೇಕಾಗಲಿದೆ.