ಕನ್ನಡಪ್ರಭ ವಾರ್ತೆ ಮುಧೋಳ
ಮುಧೋಳ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಪ್ರಾಚಾರ್ಯ ಕೊಠಡಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಸ್ಥಾನದ ಉದಯಪುರ ಮೋಹನಲಾಲ ಸುಖಾಧ್ಯಯ ವಿಶ್ವ ವಿದ್ಯಾಲಯದ ಕುಲಪತಿ ಡಾ.ಸುನಿತಾ ಮಿಶ್ರಾ ಅಧ್ಯಕ್ಷತೆಯಲ್ಲಿ ಗುಜರಾತ ಮಹಾರಾಜಾ ಕೃಷ್ಣ ಕುಮಾರಸ್ವಾಮಿಜಿ ಭಾವನ ನಗರ ವಿಶ್ವ ವಿದ್ಯಾಲಯದ ಪ್ರೊ.ಡಾ.ಕಿಶೋರ ಮಹೇಂದ್ರ ಜೋಶಿ, ಮಹಾರಾಷ್ಟ್ರ ಅಮರಾವತಿ ಸಂತ ಗಾಡಗೆ ಬಾಬಾ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ.ಮಹೇಂದ್ರ ಢೋರೆ ಇಬ್ಬರು ಸದಸ್ಯರೊಳಗೊಂಡ ನ್ಯಾಕ್ ಸಮಿತಿಯು ಕಾಲೇಜಿಗೆ ಭೇಟಿ ನೀಡಲಿದೆ ಎಂದರು.
ಕಾಲೇಜು ಆರಂಭದ ಬಳಿಕ ಮೂರು ಬಾರಿ ನ್ಯಾಕ್ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿ ಉತ್ತಮ ಗ್ರೇಡ್ ಒದಗಿಸಿದೆ. ಈಗ ನಾಲ್ಕನೇ ಬಾರಿಗೆ ಆಗಮಿಸುವ ತಂಡವು ಎರಡು ದಿನಗಳವರಿಗೂ ಮೌಲ್ಯಾಂಕನ ಪರಿಶೀಲನೆ ಮಾಡಲಿದ್ದಾರೆ. ಈ ಸಲ ಎ ಡಬಲ್ ಪ್ಲಸ್ ಗ್ರೇಡ್ ಸಿಗುವ ಸಾದ್ಯತೆ ಇದೆ ಎಂದು ತಿಳಿಸಿದರು.ಕವಿಚಕ್ರವರ್ತಿ ಬಿರುದಾಂಕಿತ ಕವಿ ರನ್ನನ ಜನ್ಮಸ್ಥಳವಾದ ಮುಧೋಳದಲ್ಲಿ ನಗರ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ನಮ್ಮ ಸಂಘವು ಮುಧೋಳ ತಾಲೂಕಿನ ಗ್ರಾಮೀಣ ಭಾಗದಿಂದ ಆಗಮಿಸುವ, ಓದಿನಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೈಟೆಕ್ ಸೌಲಭ್ಯ ಒದಗಿಸಿ ಸಹಸ್ರಾರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಿಎ, ಬಿಕಾಂ, ಬಿಎಸ್ಸಿ, ಬಿಸಿಎ, ಎಂಎ (ಇಂಗ್ಲಿಷ್), ಎಕಾಂ ಪದವಿ ಕಾಲೇಜು ಮಹಿಳೆಯರಿಗಾಗಿ ಪ್ರತ್ಯೇಕ ಪದವಿ ಕಾಲೇಜು, ಸಿಬಿಎಸ್ಇ, ಎಂಜನಿಯರಿಂಗ್ ಹಾಗೂ ಎಂಬಿಎ ಪದವಿ ಕಾಲೇಜುಗಳನ್ನು ಮುಧೋಳ ನಗರದಲ್ಲಿ ಆರಂಭಿಸಲಾಗಿದೆ ಎಂದರು.
ನಗರದ ಬಿವಿವಿ ಸಂಘದ 16.35 ಎಕರೆ ಜಮೀನುದಲ್ಲಿ ಎಲ್ಲಾ ಹಂತದ ಶಾಲಾ ಕಾಲೇಜ್ ಆರಂಭಿಸಲಾಗಿದೆ. ವಸತಿ ನಿಲಯಗಳು, ಕ್ಯಾಂಟಿನ್, ರನ್ನ ಬಯಲು ರಂಗಮಂದಿರ, ಕ್ರೀಡಾಂಗಣ, ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ, ವ್ಯಕ್ತಿತ್ವ ವಿಕಸನ, ಸಂವಹನ, ಕೌಶಲ್ಯ ಬೆಳೆಸುವುದರೊಂದಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾಲೇಜ್ ಪ್ರಯತ್ನ ನಡೆಸಿದೆ. ಲೈಂಗಿಕ ಕಿರುಕುಳ ನಿಗ್ರಹ ಘಟಕದಳ, ಶಿಸ್ತು ಪರಿಪಾಲನಾ ಸಮಿತಿ, ಸಾಂಸ್ಕೃತಿಕ ಚಟುವಟಿಕೆ, ಎಸ್ಸಿ/ಎಸ್ಟಿ ಸೆಲ್ ಇತರೆ ಸಮಿತಿ ರಚನೆ ಮಾಡಲಾಗಿದೆ. ಸಂಸ್ಥೆಯು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಪಣ ತೊಟ್ಟಿದೆ ಎಂದರು.
ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಸಿ. ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಎನ್.ಅಥಣಿ, ಸಂಸ್ಥೆಯ ಉನ್ನತ ಶಿಕ್ಷಣ ಗುಣಮಟ್ಟ ಭರವಸೆ ಮುಖ್ಯ ಸಲಹೆಗಾರ ಡಾ.ಮೀನಾ ಚಂದಾವರಕರ, ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಸದಸ್ಯ ರವೀಂದ್ರ ಸಾವಳಗಿಮಠ, ಕಾಲೇಜುಗಳ ಪದನಿಮಿತ್ತ ಕಾರ್ಯದರ್ಶಿ ಡಾ.ಎಸ್.ಎನ್.ಗಾಂವಕರ, ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎಂ.ವ್ಹಿ. ಜಿಗಬಡ್ಡಿ, ಐಕ್ಯೂಎಸಿ ಸಂಯೋಜಕಿ ಪ್ರೊ.ಎಸ್. ಎಸ್.ಬಿರಾದಾರ ಉಪಸ್ಥಿತರಿದ್ದರು.