ಕನ್ನಡಪ್ರಭ ವಾರ್ತೆ ದಾಬಸ್ಪೇಟೆ
ನೆಲಮಂಗಲ ವಲಯ ಅರಣ್ಯಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಬೆಂಗಳೂರು, ನೆಲಮಂಗಲ, ಬನ್ನೇರುಘಟ್ಟ, ತುಮಕೂರು ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ಅರಣ್ಯ ಕಾವಲುಗಾರರು ಬೆಟ್ಟದ ತಪ್ಪಲಿನಲ್ಲೇ ಮೊಕ್ಕಾಂ ಹೂಡಿ ಚಿರತೆಯ ಚಲನ ವಲನಗಳನ್ನು ಪತ್ತೆ ಹಚ್ಚಿ ಸೆರೆ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಆದರೆ ಚಿರತೆ ಮಾತ್ರ ಕಣ್ಣಿಗೆ ಕಂಡರೂ ಇಟ್ಟಿರುವ ಬೋನಿಗೆ ಬೀಳದೆ ತಪ್ಪಿಸಿಕೊಂಡು ಓಡಾಡುತ್ತಿದೆ.
ಬುಧವಾರ ಬೆಳಗ್ಗೆ ಚಿರತೆ ಪ್ರತ್ಯಕ್ಷ:ಚಿರತೆ ಬುಧವಾರ ಬೆಳಗ್ಗೆ ಶಿವಗಂಗೆ ತಪ್ಪಲಿನಲ್ಲಿ ಸ್ಥಳೀಯರ ಕಣ್ಣಿಗೆ ಪ್ರತ್ಯಕ್ಷವಾಗಿದ್ದು, ಅವರು ಅರಣ್ಯಾಧಿಕಾರಿಗಳಿಗೆ ತಿಳಿಸುವ ಹೊತ್ತಿಗೆ ಆ ಸ್ಥಳದಿಂದ ಬೇರೆಡೆಗೆ ಪರಾರಿಯಾಗಿದೆ.ಸಿಸಿ ಕ್ಯಾಮೆರಾದಲ್ಲಿ ಸೆರೆ: ಅರಣ್ಯಾಧಿಕಾರಿಗಳು ಸುಮಾರು ೨೦ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಚಿರತೆ ಸಂಚರಿಸುವ ಸ್ಥಳಗಳಲ್ಲಿ ಅಳವಡಿಸಿದ್ದು, ಆ ಕ್ಯಾಮೆರಾಗಳಲ್ಲಿ ಚಿರತೆ ಸಂಚರಿಸುವುದು ಸೆರೆಯಾಗಿದೆ.
ಇನ್ನೂ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಸಂಜೆ ಡ್ರೋನ್ ಮೂಲಕ ಚಿರತೆಯನ್ನು ಪತ್ತೆ ಹಚ್ಚಲು ಪ್ರಯತ್ನಿಸಿದಾಗ ಚಿರತೆಗಳು ಕಾಣದೆ ಡ್ರೋನ್ನಲ್ಲಿ ಕರಡಿಗಳು ಕಂಡಿದ್ದು, ಈ ಕಾಡಿನಲ್ಲಿ ಚಿರತೆಯ ಜೊತೆಗೆ ಕರಡಿಗಳು ಸಹ ವಾಸಿಸುತ್ತಿವೆ ಎಂದು ಅರಣ್ಯಾಧಿಕಾರಿಗಳು ದೃಢಪಡಿಸಿದ್ದಾರೆ.
ಈ ಹಿಂದೆ ಹಲವು ಚಿರತೆಗಳನ್ನು ಹಿಡಿಯಲು ಸಹಕರಿಸಿದ್ದ ತುಮಕೂರು ಜಿಲ್ಲಾ ಅರಣ್ಯಾಧಿಕಾರಿಗಳ ಸಹಕಾರದಿಂದ ತುಮಕೂರಿನಿಂದ ದೊಡ್ಡ ಬೋನ್ ತಂದಿದ್ದು ಈ ಬೋನ್ನಲ್ಲಿ ಚಿರತೆ ಬೀಳಬಹುದು.
---------
ಸೆರಿನಾ ಸೆಕ್ಕಲಿಗರ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ