ಕನ್ನಡಪ್ರಭ ವಾರ್ತೆ, ಶಿರಾಳಕೊಪ್ಪ
ಶಿರಾಳಕೊಪ್ಪದಲ್ಲಿ ಬುಧವಾರ ನಡೆದ ಶಿಕಾರಿಪುರ ತಾಲೂಕಿನ ೬ನೇ ಶರಣ ಸಾಹಿತ್ಯ ಸಮ್ಮೇಳನವನ್ನು ಗಿಡಕ್ಕೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಶಿರಾಳಕೊಪ್ಪ ಶಿವ-ಶರಣರ ತವರುಭೂಮಿ. ಪ್ರಪಂಚದಲ್ಲಿ ಬೇರೆಲ್ಲೂ ನಡೆಯದ ಮಹಾ ಶರಣಕ್ರಾಂತಿ, ಕಲ್ಯಾಣ ಕ್ರಾಂತಿ ಆಗಿದೆ ಎಂದರು.
ಬಸವಣ್ಣನವರು ತಾವು ಏನು ಹೇಳುತ್ತಿದ್ದರೋ, ಅದನ್ನೇ ಮಾಡುತ್ತಿದ್ದ ಮಹಾನ್ ವ್ಯಕ್ತಿ ಆಗಿದ್ದರು. ೧೨ನೇ ಶತಮಾನದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಎಲ್ಲ ಶರಣರು ಕಲ್ಯಾಣದ ಕಡೆಗೆ ಹೊರಟುಬಂದು ಹೊಸ ಅಲೆ ಸೃಷ್ಠಿ ಮಾಡಿದರು. ಆದರೆ ನಮಗೆ ಅದರ ಕಲ್ಪನೆಯೇ ಇಲ್ಲ. ನಮಗೆ ಸಾಹಿತ್ಯವಿದೆ, ಸಂಸ್ಕೃತಿ ಇದೆ, ಪರಂಪರೆ ಇದೆ. ಉದಾಹರಣೆಗಳು ಸಹ ಇದ್ದರೂ ನಾವು ಬಳ್ಳಿಗೂಟದಂತೆ ಇರುವುದು ಬೇಸರದ ಸಂಗತಿ ಎಂದರು.ಸಮ್ಮೇಳನಾಧ್ಯಕ್ಷೆ ಮಧುರಾ ಅಶೋಕಕುಮಾರ ಮಾತನಾಡಿ, ಇಂದು ಜೀವನದ ವಿಶೇಷ ದಿನ. ಮುಂದಿನ ಸಮ್ಮೇಳನವರೆಗೆ ಅಧ್ಯಕ್ಷೆಯಾಗಿ ಎಲ್ಲ ಸಹಕಾರ ನೀಡುತ್ತೇನೆ. ನಾನು ಈ ಊರಿನ ಸೊಸೆ, ನಮ್ಮ ಮಾವ ಸ್ವಾತಂತ್ರ್ಯ ಹೋರಾಟಗಾರ ಮಂಗಲಿಗಿ ಶಿವಪ್ಪನವರ ಸೊಸೆ ಎಂಬ ಹೆಮ್ಮೆ ಇತ್ತು. ಈಗ ಆ ಹೆಮ್ಮೆ ಇಮ್ಮಡಿಗೊಂಡಿದೆ. ಇಂದು ನನ್ನನ್ನು ಮೆರವಣಿಗೆ ಮಾಡಿ, ವೇದಿಕೆಗೆ ಕರೆತಂದಿರುವ ಈ ಅವಿಸ್ಮರಣೀಯ ಕ್ಷಣವನ್ನು ಎಂದೂ ಮರೆಯದಂತೆ ಮಾಡಿದ್ದೀರಿ ಎಂದರು.
ಕಾರ್ಯಕ್ರಮದಲ್ಲಿ ವಿರಕ್ತ ಮಠದ ಸಿದ್ದೇಶ್ವರ ಸ್ವಾಮೀಜಿ, ೫ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಮುರಘರಾಜ್, ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಗೂ ವೇದಿಕೆ ಅಧ್ಯಕ್ಷತೆ ವಹಿಸಿದ್ದ ಎಂ.ಕೆ.ಶಶಿಧರಸ್ವಾಮಿ, ಶಿರಾಳಕೊಪ್ಪ ಘಟಕದ ಅಧ್ಯಕ್ಷ ಸುರಹೊನ್ನೆ ಚಂದ್ರಶೇಖರ, ಅಕ್ಕಮಹಾದೇವಿ ಪ್ರತಿಷ್ಠಾನದ ಅಧ್ಯಕ್ಷೆ ರೂಪ ಹಾಲೇಶ್, ಅಖಿಲ ಭಾರತ ವೀರಶೈವ ಸಮಾಜದ ಕಾಯರ್ದರ್ಶಿ ನಿವೇದಿತಾ ರಾಜು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಾರುದ್ರ, ತಾಲೂಕು ಮಾಜಿ ಅಧ್ಯಕ್ಷ ಸುಭಾಷ್ಚಂದ್ರ ಸ್ಥಾನಿಕ್, ಶಿವಾನಂದಸ್ವಾಮಿ, ಶಿರಾಳಕೊಪ್ಪ ವೀರಶೈವ ಸಮಾಜದ ಅಧ್ಯಕ್ಷ ಪ್ರಭುಸ್ವಾಮಿ, ಕಸಾಪ ಅಧ್ಯಕ್ಷ ಮಂಜುನಾಥ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.
ಶಿರಾಳಕೊಪ್ಪ ಹೊರವಲಯದ ನೇರಲಗಿ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ನಡೆದ ೬ನೇ ಶರಣ ಸಾಹಿತ್ಯ ಸಮ್ಮೇಳನವನ್ನು ಆನಂದಪುರ ಶ್ರೀಗಳು ಸಸಿಗೆ ನೀರು ಹಾಕುವ ಮೂಕ ಚಾಲನೆ ನೀಡಿದರು.