ನ್ಯಾಯಾಂಗ ಕ್ಷೇತ್ರದಲ್ಲಿ ವಿಪುಲ ಅವಕಾಶ: ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಓಕಾ

KannadaprabhaNewsNetwork |  
Published : Dec 08, 2024, 01:17 AM IST
ಮಾತುಕತೆ | Kannada Prabha

ಸಾರಾಂಶ

ಕಾನೂನು ಪ​ದವಿ ಪೂ​ರ್ಣ​ಗೊ​ಳಿ​ಸಿದ ಯುವ ವಕೀಲರು ನೇರವಾಗಿ ಪರೀಕ್ಷೆ ಬರೆದು ಕೆಳಹಂತದ ನ್ಯಾಯಾಲಯಗಳಲ್ಲಿ ಸಿವಿಲ್‌ ನ್ಯಾಯಾಧೀಶರಾಗಿ ನೇಮಕವಾಗಬಹುದು. ಈಗಿನ ನೇಮಕಾತಿ ನಿಯಮಗಳಲ್ಲಿ ಇಂತಹ ಅನೇಕ ಅವಕಾಶಗ​ಳಿವೆ.

ಹುಬ್ಬಳ್ಳಿ:

ನ್ಯಾ​ಯಾಂಗ ಕ್ಷೇ​ತ್ರ​ದಲ್ಲಿ ಸೇವಾ ಭ​ದ್ರತೆ ಹಾಗೂ ಸೌ​ಲ​ಭ್ಯ ಸೇ​ರಿ​ದಂತೆ ಬ​ಹ​ಳಷ್ಟು ಅ​ವ​ಕಾಶಗಳಿವೆ. ಕಾ​ನೂ​ನು ಪದವೀಧರರು ಅವುಗಳನ್ನು ಸ​ದು​ಪ​ಯೋ​ಗ​ಪ​ಡಿ​ಸಿ​ಕೊಂಡು ಉ​ತ್ತಮ ವ​ಕೀ​ಲ​ರಾಗಿ ಹೊ​ರ​ಹೊ​ಮ್ಮ​ಬೇಕು. ನ್ಯಾಯಾಧೀಶರಾಗಲು ಸಾಕಷ್ಟು ಅವಕಾಶಗಳಿರುತ್ತವೆ ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಅಭಯ ಶ್ರೀನಿವಾಸ್‌ ಓಕಾ ಸ​ಲಹೆ ನೀ​ಡಿ​ದ​ರು.

ಇಲ್ಲಿನ ಕೆಎಲ್‌ಇ ಸಂಸ್ಥೆಯ ಗುರುಸಿದ್ದಪ್ಪ ಕೊತ್ತಂಬರಿ ಕಾನೂನು ಕಾಲೇಜಿನ ವ​ತಿ​ಯಿಂದ ನಗರದ ಬಿವಿಬಿ ಕ್ಯಾಂಪಸ್‌ನ ದೇಶಪಾಂಡೆ ಸಭಾಭವನದಲ್ಲಿ ಕಾ​ನೂನು ವಿ​ದ್ಯಾ​ರ್ಥಿ​ಗ​ಳಿಗೆ ಶನಿವಾರ ನ​ಡೆ​ದ ‘ನ್ಯಾಯಾಂಗದಲ್ಲಿ ವೃತ್ತಿಜೀವನ’ ಎಂಬ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾ​ತ​ನಾ​ಡಿ​ದ​ರು.

ಕಾನೂನು ಪ​ದವಿ ಪೂ​ರ್ಣ​ಗೊ​ಳಿ​ಸಿದ ಯುವ ವಕೀಲರು ನೇರವಾಗಿ ಪರೀಕ್ಷೆ ಬರೆದು ಕೆಳಹಂತದ ನ್ಯಾಯಾಲಯಗಳಲ್ಲಿ ಸಿವಿಲ್‌ ನ್ಯಾಯಾಧೀಶರಾಗಿ ನೇಮಕವಾಗಬಹುದು. ಈಗಿನ ನೇಮಕಾತಿ ನಿಯಮಗಳಲ್ಲಿ ಇಂತಹ ಅನೇಕ ಅವಕಾಶಗ​ಳಿವೆ. ಇತರೆ ಕ್ಷೇತ್ರಗಳಿಗಿಂತಲೂ ಹೆಚ್ಚಿನ ವೇತನ, ಸೌಲಭ್ಯವನ್ನು ಕಾ​ನೂನು ಪ​ದ​ವೀ​ಧ​ರ​ರು ಪಡೆಯಬಹುದಾ​ಗಿದೆ ಎಂದ​ರು.

ಇತ್ತೀಚಿನ ದಿನಗಳಲ್ಲಿ ಕಾನೂನು ಅಧ್ಯಯನ ಮಾಡಿದ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾಗುತ್ತಿ​ರು​ವುದು ಹೆ​ಮ್ಮೆಯ ಸಂಗ​ತಿ. ವಾದಿ, ಪ್ರತಿವಾದಿ ಹಾಗೂ ಕ್ಷಕ್ಷಿದಾರರನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನದ ಆಶಯ, ನಿಯಮಗಳಿಗೆ ಅನುಗುಣವಾಗಿ ನ್ಯಾಯದಾನ ಮಾಡಬೇಕು. ಇಲ್ಲಿ ಕಾನೂನಿನ ತಿಳಿವಳಿಕೆ, ಕೌಶಲ್ಯ, ಚಾಣಕ್ಷತನ ಎಲ್ಲವೂ ಅ​ಗ​ತ್ಯ​ವಾ​ಗಿ​ರು​ತ್ತದೆ ಎಂದು ಹೇಳಿದರು.

ವಕೀಲರಾಗಿ ಕಲಿಯುವುದಕ್ಕಿಂತ ನ್ಯಾಯಾಧೀಶರಾಗಿ ಹೆಚ್ಚು ಕಲಿಯುವ ಅವಕಾಶ ಇರುತ್ತದೆ. ಪ್ರತಿಯೊಂದು ವ್ಯಾಜ್ಯಕ್ಕೂ ಒಂದೊಂದು ರೂಪ ಇರುತ್ತದೆ. ಅಪರಾಧ ಪ್ರಕರಣಗಳಿಗೆ ವಿ​ವಿ​ಧ ಮುಖಗಳಿರುತ್ತವೆ. ನ್ಯಾಯಾಧೀಶ ಎಲ್ಲವನ್ನೂ ಅಧ್ಯಯನ ಮಾಡಿ, ಪ್ರಾಮಾಣಿಕವಾದ ನ್ಯಾಯ ನೀಡುತ್ತಾನೆ. ಇದರಿಂದ ಸಮಾಜದಲ್ಲಿ ಹೆಚ್ಚು ಗೌರವ ಪಡೆಯುವುದರ ಜತೆಗೆ ಆರೋಗ್ಯಕರ ರಾಷ್ಟ್ರ ನಿರ್ಮಾಣಕ್ಕೆ ಸ​ಹ​ಕಾ​ರಿ​ಯಾ​ಗು​ತ್ತಾರೆ ಎಂದ​ರು.

ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಎಂ.ಜಿ. ಉಮಾ, ಉಮೇಶ ಎಂ. ಅಡಿಗ, ವಿಜಯಕುಮಾರ ಎ. ಪಾಟೀಲ, ಸಿದ್ದಪ್ಪ ಸುನೀಲ್‌ ದತ್ತ ಯಾದವ, ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ, ಜಿ.ಕೆ. ಕಾನೂನು ಕಾಲೇಜಿನ ಪ್ರಾಚಾರ್ಯ ಜ್ಞಾನೇಶ್ವರ ಪಿ. ಚೌರಿ, ಪೊ. ಎಸ್‌.ಎಂ. ಹೊಳ್ಳೂರು ಸೇ​ರಿ​ದಂತೆ ಅ​ನೇ​ಕ​ರಿ​ದ್ದ​ರು.

ಮಾ​ನ​ವೀಯ ಮೌಲ್ಯ ಕು​ಸಿ​ಯು​ತ್ತಿ​ವೆ

ಇಂದಿನ ದಿ​ನ​ಗ​ಳಲ್ಲಿ ಮಾ​ನ​ವೀಯ ಮೌ​ಲ್ಯ ಕು​ಸಿ​ಯು​ತ್ತಿದ್ದು, ಅ​ದ​ರಿಂದ ಅ​ಪ​ರಾಧ ಪ್ರ​ಕ​ರ​ಣ​ಗಳ ಸಂಖ್ಯೆಯೂ ಹೆ​ಚ್ಚಾ​ಗು​ತ್ತಿ​ರು​ವುದು ಕ​ಳ​ವ​ಳ​ಕಾರಿ ಸಂಗ​ತಿ. ಕಾನೂನಿನ ಮೂಲಕ ಮರುಸ್ಥಾಪಿಸಿ ಸಮಾಜದ ಆರೋಗ್ಯವನ್ನು ಕಾಪಾಡುವಂತಹ ಜವಾಬ್ದಾರಿ ನಮ್ಮೇಲರ ಮೇಲಿದೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ವೇದವ್ಯಾಸಾರ್ಚಾ ​ಶ್ರೀಶಾನಂದ ಅ​ಭಿ​ಪ್ರಾಯ ವ್ಯ​ಕ್ತ​ಪ​ಡಿ​ಸಿ​ದ​ರು.

ಉ​ಪ​ನ್ಯಾ​ಸ ಕಾ​ರ್ಯ​ಕ್ರ​ಮ​ದಲ್ಲಿ ಮಾ​ತ​ನಾ​ಡಿದ ಅ​ವರು, ಸಹನೆ, ತಾಳ್ಮೆ, ಬದುಕಿನ ಮೌಲ್ಯವನ್ನು ತಿಳಿಯದೇ ಸಂವಹನ ಕೊರತೆಯಿಂದಾಗಿ ಯುವಕರು ಆತ್ಯಹತ್ಯೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ನಿತ್ಯ ಹೊಸ ಹೊಸ ಕಾನೂನುಗಳು ಬರುತ್ತಿವೆ. ಇವುಗಳ ಅಧ್ಯಯನದಿಂದ ಬುದ್ಧಿವಂತಿಕೆಯಿಂದ ಸತ್ಯಾನ್ವೇಷಣೆಯೊಂದಿಗೆ ಕಾನೂನಿನ ಚೌಕಟ್ಟು ಮೀರದಂತೆ ಪ್ರಕರಣ ಇತ್ಯರ್ಥ ಮಾಡಬೇಕು. ನ್ಯಾಯ ನಿರ್ಣಯ ಎನ್ನುವುದು ದೈವಿಕಾರ್ಯವಿದ್ದಂತೆ ಎಂದು ತಿ​ಳಿ​ಸಿ​ದ​ರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''