ಜಾಗತಿಕ ಮಟ್ಟದಲ್ಲಿ ಎಐಗೆ ಹೆಚ್ಚಿನ ಮನ್ನಣೆ: ಮನೀಶ ಜೋಶಿ

KannadaprabhaNewsNetwork | Published : Apr 13, 2025 2:08 AM

ಸಾರಾಂಶ

ಎಐ ತಂತ್ರಜ್ಞಾನದ ಕ್ಷೇತ್ರದಲ್ಲಿ ಹಲವಾರು ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತಿವೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಉದ್ಯೋಗಾವಕಾಶ ಪಡೆಯಬೇಕು ಎಂದು ಪ್ರೊ.ಮನೀಶ್‌ ಜೋಶಿ ಹೇಳಿದರು.

ಹು​ಬ್ಬಳ್ಳಿ: ಜಾಗತಿಕ ಮಟ್ಟದಲ್ಲಿ ಎಐ(ಕೃತಕ ಬುದ್ದಿಮತ್ತೆ) ತಂತ್ರ​ಜ್ಞಾ​ನಕ್ಕೆ ಹೆ​ಚ್ಚಿನ ಮ​ನ್ನಣೆ ದೊ​ರೆ​ಯು​ತ್ತಿದೆ. ತಾಂತ್ರಿಕ ವಿ​ಭಾ​ಗದ ವಿ​ದ್ಯಾ​ರ್ಥಿ​ಗಳು ಎಐ ತಂತ್ರ​ಜ್ಞಾ​ನದ ಬಗ್ಗೆ ಹೆ​ಚ್ಚಿನ ಅ​ಧ್ಯ​ಯನ ಮಾ​ಡು​ವಂತಾ​ಗ​ಬೇಕು ಎಂದು ಹೊ​ಸದೆಹಲಿ ವಿ​ಶ್ವ​ವಿ​ದ್ಯಾ​ಲಯ ಅ​ನು​ದಾನ ಆ​ಯೋ​ಗ​(​ಯು​ಜಿ​ಸಿ) ಕಾ​ರ್ಯ​ದ​ರ್ಶಿ ಪ್ರೊ.ಮ​ನೀಶ್‌ ಜೋಶಿ ಹೇ​ಳಿ​ದ​ರು.

ಇ​ಲ್ಲಿನ ಕೆಎಲ್‌ ಇ ತಾಂತ್ರಿಕ ವಿಶ್ವವಿದ್ಯಾಲಯದ ಬಿವಿಬಿ ಕಾಲೇಜ್‌ ಕ್ಯಾಂಪಸ್‌ ಸಿ​-ಲೈ​ಟ್‌ ಕ​ಟ್ಟ​ಡ​ದಲ್ಲಿ ಶ​ನಿ​ವಾರ ನ​ಡೆದ ​ಆ​ರ್ಟಿ​ಫಿ​ಶಿ​ಯಲ್‌ ಇಂಟ​ಲಿ​ಜ​ನ್ಸ್‌ (​ಎ​ಐ)ಸಂಶೋ​ಧನಾ ಕೇಂದ್ರ (​ಸಿ​ಎ​ಐ​ಆ​ರ್‌-ಲ್ಯಾಬ್‌) ಉದ್ಘಾಟಿಸಿ ಮಾತನಾಡಿದರು.

ಎಐ ತಂತ್ರ​ಜ್ಞಾ​ನದ ಕ್ಷೇ​ತ್ರ​ದಲ್ಲಿ ಹ​ಲ​ವಾರು ಉ​ದ್ಯೋ​ಗಾ​ವ​ಕಾ​ಶ​ಗಳು ತೆ​ರೆ​ದು​ಕೊ​ಳ್ಳು​ತ್ತಿವೆ. ಅ​ವು​ಗ​ಳನ್ನು ಸ​ದು​ಪ​ಯೋ​ಗ​ಪ​ಡಿ​ಸಿ​ಕೊಂಡು ಉ​ತ್ತಮ ಉ​ದ್ಯೋ​ಗಾ​ವ​ಕಾಶ ಪ​ಡೆ​ಯ​ಬೇಕು ಎಂದ​ರು.

ಯಾ​ವುದೇ ಒಂದು ವಸ್ತು ಮತ್ತು ಸೇ​ವೆ​ಯನ್ನು ಹೇಗೆ ಇನೋವೆಟಿವ್‌ ಆಗಿ ಬಳಸಬಹುದು ಎಂಬುದನ್ನು ಎಐ ತಂತ್ರಜ್ಞಾನ ಅ​ದ್ಭು​ತ​ವಾಗಿ ತಿ​ಳಿ​ಸಿ​ಕೊ​ಡು​ತ್ತದೆ. ಎ​ಲ್ಲಿಯೂ ದೂ​ರದ ಪ್ರ​ದೇ​ಶ​ದ​ಲ್ಲಿ​ರುವ ಮಾ​ವಿನ ಹ​ಣ್ಣಿನ ಸು​ವಾ​ಸ​ನೆ​ಯನ್ನು ಇ​ನ್ನೇ​ಲ್ಲಿಯೂ ಕು​ಳಿತು ಪ​ಡೆ​ಯು​ವಂತಹ ತಂತ್ರ​ಜ್ಞಾ​ನದ ಕ್ರಾಂತಿ ಐಐ ಹಾಗೂ ಜಿ​ಪಿ​ಟಿ​ಯಲ್ಲಿ ಆ​ಗಿದೆ ಎಂದ​ರು.

ದೇ​ಶ​ದಲ್ಲಿ ಲ​ಕ್ಷಾಂತರ ಸ್ಟಾರ್ಟ್‌ಅಪ್‌ಗಳು ಕಾ​ರ್ಯ​ನಿ​ರ್ವ​ಹಿ​ಸು​ತ್ತಿದ್ದು, ಅ​ವು​ಗ​ಳಿಗೆ ಎಐ ತಂತ್ರ​ಜ್ಞಾ​ನ ಬ​ಹ​ಳಷ್ಟು ಸ​ಹ​ಕಾ​ರಿ​ಯಾ​ಗಿದೆ. ವಿ​ದ್ಯಾ​ರ್ಥಿ​ಗ​ಳು ಕೇವಲ ತಂತ್ರಜ್ಞಾನದ ಬೆನ್ನು ಹತ್ತದೆ ಅ​ದರ ಜ​ತೆ​ಗೆ ನೈತಿಕ ಮೌಲ್ಯ ಹಾಗೂ ಸಾಮಾಜಿಕ ಕ​ಳ​ಕ​ಳಿ ಮೈ​ಗೂ​ಡಿ​ಸಿ​ಕೊಂಡಲ್ಲಿ ಉ​ತ್ತಮ ಸಾ​ಧನೆ ಸಾ​ಧ್ಯ​ವಾ​ಗ​ಲಿದೆ ಎಂದರು.

ಅ​ಧ್ಯ​ಕ್ಷತೆ ವ​ಹಿ​ಸಿದ್ದ ಕೆ​ಎಲ್‌ಇ ತಾಂತ್ರಿಕ ವಿ​ಶ್ವ​ವಿ​ದ್ಯಾ​ಲ​ಯದ ಕು​ಲ​ಪತಿ ಡಾ.​ ಪ್ರ​ಭಾ​ಕರ್‌ ಕೋರೆ ಮಾ​ತ​ನಾ​ಡಿ, ಕೆ​ಎಲ್‌ಇ ತಾಂತ್ರಿಕ ವಿ​ವಿ ವಿ​ದ್ಯಾ​ರ್ಥಿ​ಗ​ಳ ಪ್ರಾ​ಯೋ​ಗಿಕ ಕ​ಲಿ​ಕೆಗೆ ಅ​ನು​ಕೂ​ಲ​ವಾ​ಗಿ​ಸುವ ನಿ​ಟ್ಟಿ​ನಲ್ಲಿ ₹24 ಕೋಟಿ ವೆಚ್ಚದ ಎಐ ಲ್ಯಾಬ್‌ನ್ನು ಸ್ಥಾ​ಪಿ​ಸು​ತ್ತಿ​ರು​ವುದು ಹೆ​ಮ್ಮೆಯ ಸಂಗತಿ. ಹ​ಲ​ವಾರು ಮ​ಹಾನ ಶಿ​ಕ್ಷಣ ತ​ಜ್ಞರ ಪ​ರಿ​ಶ್ರಮ ಹಾಗೂ ದಾ​ನಿ​ಗಳ ಸ​ಹಾ​ಯ​ದಿಂದ ಆ​ರಂಭ​ವಾದ ಕೆ​ಎಲ್‌ಇ ಶಿ​ಕ್ಷಣ ಸಂಸ್ಥೆಯೂ ರಾ​ಜ್ಯಾ​ದ್ಯಂತ 311 ಶಿ​ಕ್ಷಣ ಸಂಸ್ಥೆ​ಗ​ಳನ್ನು ಹೊಂದಿದೆ ಎಂದರು.

ಚಾ​ನ್ಸ​ಲರ್‌ ಡಾ.​ ಅ​ಶೋಕ ಶೆ​ಟ್ಟರ್‌ ಹಾಗೂ ಉಪಕುಲಪತಿ ಡಾ. ಪ್ರಕಾಶ ತಿವಾರಿ ಮಾತನಾಡಿ, ಬೆ​ಳೆ​ಯು​ತ್ತಿರುವ ತಂತ್ರ​ಜ್ಞಾನ ಕ್ಷೇ​ತ್ರ​ದಲ್ಲಿ ಎಐ ತಂತ್ರ​ಜ್ಞಾನ ಹೇ​ಗೆಲ್ಲ ಸ​ಹ​ಕಾ​ರಿ​ಯಾ​ಗಿದೆ ಎಂಬು​ದನ್ನು ವಿ​ವ​ರಿ​ಸಿ​ದ​ರು.

ಬಳಿಕ ಹೊ​ಸದೆಹಲಿ ವಿ​ಶ್ವ​ವಿ​ದ್ಯಾ​ಲಯ ಅ​ನು​ದಾನ ಆ​ಯೋ​ಗ​(​ಯು​ಜಿ​ಸಿ) ಕಾ​ರ್ಯ​ದ​ರ್ಶಿ ಪ್ರೊ. ಮ​ನೀಶ್‌ ಜೋಶಿ ವಿ​ದ್ಯಾ​ರ್ಥಿ​ಗಳ ಜೊ​ತೆಗೆ ಸಂವಾದ ನ​ಡೆ​ಸಿ​ದ​ರು. ರ​ಜಿ​ಸ್ಟ್ರಾರ್‌ ಡಾ.​ಬ​ಸ​ವ​ರಾಜ ಅ​ನಾಮಿ, ತಾಂತ್ರಿಕ ವಿ​ವಿಯ ಕಂಪ್ಯೂ​ಟರ್‌ ಸೈನ್ಸ್‌ ವಿ​ಭಾ​ಗ​ದ ಪ್ಯಾ​ಕಲ್ಟಿಡೀನ್‌ ಡಾ.ಮೀನಾ ಮ​ರ​ಳ​ಪ್ಪ​ನ​ವ​ರ ಸೇ​ರಿ​ದಂತೆ ಅ​ನೇ​ಕರು ಉ​ಪ​ಸ್ಥಿ​ತ​ರಿ​ದ್ದ​ರು.

Share this article