ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಇಲ್ಲಿನ ಪತ್ರಿಕಾಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 524.256 ಮೀ. ವರೆಗೆ ನೀರು ನಿಂತರೆ ಉತ್ತರ ಕರ್ನಾಟಕದ ಐದಾರು ಜಿಲ್ಲೆಯಲ್ಲಿ 15 ಲಕ್ಷ ಎಕರೆ ಭೂಮಿ ನೀರಾವರಿಯಾಗಲಿದೆ ಎಂದು ಕಾಯುತ್ತಿದ್ದ ರೈತರಿಗೆ ಸರ್ಕಾರ ದ್ರೋಹ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.
524.256 ಮೀ. ವರೆಗೆ ಆಲಮಟ್ಟಿ ಜಲಾಶಯ ಎತ್ತರಿಸಬೇಕು ಎಂದು 30 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗಿದೆ. ಈಗಿನ ರಾಜ್ಯ ಸರ್ಕಾರ 522 ಮೀ.ವರೆಗೆ ಮಾತ್ರ ಆಲಮಟ್ಟಿ ಜಲಾಶಯದಲ್ಲಿ ನೀರು ನಿಲ್ಲಿಸುತ್ತೇವೆ ಎಂಬುದರ ವಿರುದ್ಧ ಉತ್ತರ ಕರ್ನಾಟಕದ ಐದೂ ಜಿಲ್ಲೆಗಳ ರೈತರು ಸರ್ಕಾರದ ವಿರುದ್ಧ ಬಂಡೇಳಬೇಕು. ತಕ್ಷಣವೇ ಸರ್ಕಾರ ಕೋರ್ಟ್ನಲ್ಲಿ ಅಫಿಡವಿಟ್ ಹಾಕುವುದನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದರು.ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ನೀರಾವರಿ ಭೂಮಿಗೆ ₹24 ಲಕ್ಷ ಹಾಗೂ ಒಣಬೇಸಾಯಕ್ಕೆ ₹20 ಲಕ್ಷ ದರ ಘೋಷಿಸಿ ರೈತರ 18 ವರ್ಷದ ಬೇಡಿಕೆ ಈಡೇರಿಸಿದ್ದೆ. 20 ಹಳ್ಳಿಗಳ ಕಟ್ಟಡ ಭೂಸ್ವಾಧೀನಕ್ಕೂ ನ್ಯಾಯಯುತ ಬೆಲೆ ನಿಗದಿಪಡಿಸಿದ್ದೆ. ಆಗ ಎಕರೆಗೆ ₹40 ಲಕ್ಷ ನೀಡುವುದಾಗಿ ಕೆಲವರು ರಾಜಕೀಯ ಮಾಡಲು ಮುಂದಾದವರು ₹40 ಲಕ್ಷ ದೂರದ ಮಾತು ನಾವು ಘೋಷಿಸಿದ ಮೊತ್ತವನ್ನಾದರೂ ನೀಡಿ ರೈತರ ನೆರವಿಗೆ ಧಾವಿಸಿ ಎಂದರು.
ಮಾಜಿ ಶಾಸಕ ವೀರಣ್ಣ ಚರಂತಿಮಠ, ಮುಖಂಡರಾದ ಮುತ್ತಣ್ಣ ಬೆಣ್ಣೂರ, ಶಿವಾನಂದ ಟವಳಿ, ಯಲ್ಲಪ್ಪ ಬೆಂಡಿಗೇರಿ ಸೇರಿ ಇತರರಿದ್ದರು.
ಈಗಿನ ರಾಜ್ಯ ಸರ್ಕಾರ 522 ಮೀ.ವರೆಗೆ ಮಾತ್ರ ಆಲಮಟ್ಟಿ ಜಲಾಶಯದಲ್ಲಿ ನೀರು ನಿಲ್ಲಿಸುತ್ತೇವೆ ಎಂಬುದರ ವಿರುದ್ಧ ಉತ್ತರ ಕರ್ನಾಟಕದ ಐದೂ ಜಿಲ್ಲೆಗಳ ರೈತರು ಸರ್ಕಾರದ ವಿರುದ್ಧ ಬಂಡೇಳಬೇಕು. ತಕ್ಷಣವೇ ಸರ್ಕಾರ ಕೋರ್ಟ್ನಲ್ಲಿ ಅಫಿಡವಿಟ್ ಹಾಕುವುದನ್ನು ಹಿಂದಕ್ಕೆ ಪಡೆಯಲಿ.ಗೋವಿಂದ ಕಾರಜೋಳ ಸಂಸದ.