ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಅವರು ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ೧೩೪ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತದಲ್ಲಿ ದಲಿತ ಬೌದ್ಧ ಚಳವಳಿಗಳ ಹಕ್ಕುಗಳ ಪರವಾಗಿ ನಿಂತರು. ಸಮಾನತೆಯನ್ನು ನಂಬಿದ್ದರು ಮತ್ತು ಜೀವನದಲ್ಲಿ ಮಹಿಳೆಯರು ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿತ್ವ ಹಕ್ಕಿಗಾಗಿ ಹೋರಾಡಿದರು ಎಂದರು.
ಶಿಕ್ಷಣದ ಮಹತ್ವ ಸಾರಿದರು:ಅಂಬೇಡ್ಕರ್ ಅವರ ಸಂಪೂರ್ಣ ಹೆಸರು ಭೀಮರಾವ್ ರಾಮ್ ಜಿ ಅಂಬೇಡ್ಕರ್ ಮತ್ತು ಅವರು ೧೮೯೧ರ ಏಪ್ರಿಲ್ ೧೪ರಂದು ಭಾರತದ ಮಧ್ಯಪ್ರದೇಶದ ಮಾವ್ ಪಟ್ಟಣದಲ್ಲಿ ಜನಿಸಿದರು. ಅವರ ತಂದೆ ರಾಮ್ ಜಿ ಮಾಲೋಜಿ ಸತ್ಪಾಲ್ ಮತ್ತು ತಾಯಿ ಭೀಮಾಬಾಯಿ. ಅವರನ್ನು ಜನಪ್ರಿಯವಾಗಿ ಬಾಬಾ ಸಾಹೇಬ್ ಎಂದು ಕರೆಯಲಾಗುತ್ತಿತ್ತು. ಅವರು ಐದು ವರ್ಷವಾಗಿದ್ದಾಗ ತನ್ನ ತಾಯಿಯನ್ನು ಕಳೆದುಕೊಂಡರು. ಅವರು ತಮ್ಮ ಶಿಕ್ಷಣವನ್ನ ಮುಂಬೈನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಮಾಡಿದರು. ಮತ್ತು ತಮ್ಮ ಉನ್ನತ ಶಿಕ್ಷಣವನ್ನ ಮುಂದುವರಿಸಲು ಅಮೆರಿಕಕ್ಕೆ ಹೋದರು. ನಂತರ ಇಂಗ್ಲೆಂಡ್ನಲ್ಲಿ ತಮ್ಮ ಪದವಿಯನ್ನು ಮುಗಿಸಿ ೧೯೨೩ರಲ್ಲಿ ಭಾರತಕ್ಕೆ ಮರಳಿದರು. ಭಾರತದಲ್ಲಿ ಅವರು ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ತಮ್ಮ ವಕೀಲಿ ವೃತ್ತಿಯನ್ನು ಪ್ರಾರಂಭಿಸಿದರು. ಜೊತೆಗೆ ಅವರ ಸಾಮಾಜಿಕ ಕಾರ್ಯವನ್ನು ಪ್ರಾರಂಭಿಸಿದರು ಹಾಗೂ ಶಿಕ್ಷಣದ ಮಹತ್ವವನ್ನು ಸಾರಿದರು. ಅವರು ತಮ್ಮ ಹಕ್ಕುಗಳಿಗಾಗಿ ಹೋರಾಡಲು ಮತ್ತು ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ನಿಟ್ಟಿನಲ್ಲಿ ಜನರಿಗೆ ಸಹಾಯ ಮಾಡಿದರು ಅಂಬೇಡ್ಕರ್ ಅವರು "ಜಾತಿ ವಿನಾಶ " ಎಂಬ ಪುಸ್ತಕವನ್ನು ಸಹ ಬರೆದರು. ಒಟ್ಟಾರೆ ಅವರು ಸಾಮಾಜಿಕ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರಿಂದ ಜನರು ಅವರನ್ನು ಬಾಬಾ ಸಾಹೇಬ್ ಎಂದು ಕರೆಯಲು ಪ್ರಾರಂಭಿಸಿದರು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ ಹರೀಶ್, ತಾಲೂಕು ಅಧಿಕಾರಿ ಗಿರೀಶ್, ಅನ್ನದಾಸೋ ಅಧಿಕಾರಿ ಉಮಾ ಶಂಕರ್, ಗ್ಯಾರಂಟಿ ಸಮಿತಿ ಸದಸ್ಯರಾದ ಜನಾರ್ಧನ್, ನಾಗೇಶ್ಕೆ, ಕೆಡಿಪಿ ಸದಸ್ಯರಾದ ಗುರುಪ್ರಸಾದ್, ತೇಜ ಬಾಳಗಂಚಿ, ಯೋಗೇಶ್, ತಾಲೂಕು ಪಂಚಾಯಿತಿ ಅಧಿಕಾರಿಗಳು ಹಾಜರಿದ್ದರು.