ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ದಲಿತ- ಶೋಷಿತರ ಹಕ್ಕುಗಳಿಗೆ ಆಗ್ರಹಿಸಿ ಜಿಲ್ಲಾ ಮಟ್ಟದ ಜಗೃತಿ ಸಮಾವೇಶ
ಕೇಂದ್ರದಲ್ಲಿ ಅಧಿಕಾರದಲ್ಲಿದ್ದವರು ಈ ದೇಶದ ಸಂವಿಧಾನ ಬದಲು ಮಾಡುತ್ತೇವೆಂದು ಹೇಳುತ್ತಿದ್ದವರು, ಇದೀಗ ಬೇರೆ ರೀತಿಯಲ್ಲಿ ಯೋಚನೆ ಮಾಡುತ್ತಿದ್ದಾರೆ ಎಂದು ಹೇಳಿದರು. ಸ್ವಾತಂತ್ರ್ಯದ ನಂತರ ನೆಹರು ಆಡಳಿತದಲ್ಲಿ ದೇಶ ಕೈಗಾರಿಕರಣದತ್ತ ಮುಖ ಮಾಡಿತ್ತು. ದೊಡ್ಡ ದೊಡ್ಡ ಉದ್ದಿಮೆಗಳು ಆ ಸಂದರ್ಭದಲ್ಲಿ ಆರಂಭವಾದವೂ, ಉನ್ನತ ಶಿಕ್ಷಣ ಸಂಸ್ಥೆಗಳು ಬಂದವು. ಆದರೆ, 1990 ರ ನಂತರ ಬಂದ ಕೆಲ ಸರ್ಕಾರ ಬೇರೆ ದಿಕ್ಕನ್ನು ಹಿಡಿಯಿತು. ಇಂದು ರಾಷ್ಟ್ರೀಕರಣಕ್ಕೆ ಬದಲಾಗಿ ಖಾಸಗೀ ಕರಣವೇ ಮದ್ದು ಎಂದು ಹೇಳಿ, ಕೈಗಾರಿಕೆ, ಬ್ಯಾಂಕ್ ಸೇರಿದಂತೆ ಸರ್ಕಾರಿ ಸ್ವಾಮ್ಯದ ಸಂಸ್ಥೆಯನ್ನು ಸಂಪೂರ್ಣವಾಗಿ ಖಾಸಗಿ ಮಡಿಲಿಗೆ ಒಪ್ಪಿಸುವ ಕೆಲಸ ಕೇಂದ್ರದ ಮೋದಿ ಸರ್ಕಾರ ಅತ್ಯಂತ ವೇಗವಾಗಿ ಮಾಡುತ್ತಿದೆ ಎಂದು ಆರೋಪಿಸಿದರು. ಯುವಕರು, ವಿದ್ಯಾರ್ಥಿಗಳು ಈ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ನಾಡಿನಲ್ಲಿ ಶಾಂತಿ ಕಾಪಾಡುವ ವಾತಾವರಣವಿತ್ತು. ಆದರೆ, 2014 ರ ನಂತರ ದೇಶದಲ್ಲಿ ಸಂಪೂರ್ಣ ಕೋಮು ವಾದಿಗಳ ಮತ್ತು ಬ್ರಾಹ್ಮಣ್ಯದ ಪರ ನಿಲುವುಗಳನ್ನು ತೆಗೆದು ಕೊಳ್ಳಲಾಗುತ್ತಿದೆ. ದೇಶದ ಸಂವಿಧಾನದ ಆಶಯವಾದ ತಳ ಸಮುದಾಯಗಳನ್ನು ಸಬಲೀಕರಣ ಗೊಳಿಸಲು ಸಂವಿಧಾನದಲ್ಲಿ ಮೀಸಲಾತಿ ತರಲಾಯಿತು. ಆದರೆ, ಇದೀಗ ಮೀಸಲಾತಿ ನಿರ್ನಾಮಕ್ಕೆ ಕೇಂದ್ರ ಸರ್ಕಾರ ಕೈ ಹಾಕಿದೆ ಎಂದರು.
ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ದಲಿತ ಸಂಘಟನೆಗಳು ಬಲಗೊಳ್ಳಬೇಕು, ಸಾಹಿತಿ ದೇವನೂರು ಮಹಾದೇವರ ಮುಂದಾಳತ್ವದಲ್ಲಿ ದಲಿತ ಸಂಘಟನೆಗಳೆಲ್ಲ ಒಗ್ಗೂಡಿ, ಒಂದು ವೇದಿಕೆಗೆ ಬಂದು ಸಂಘಟನಾ ಶಕ್ತಿ ತೋರಿಸ ಬೇಕಾಗಿದೆ ಎಂದು ಸಲಹೆ ನೀಡಿದರು. ಮಾಜಿ ಸಚಿವ ಬಿ.ಬಿ. ನಿಂಗಯ್ಯ ಮಾತನಾಡಿ, ಸಂವಿಧಾನಕ್ಕೆ ಅಪಾಯ, ಸಮುದಾಯಕ್ಕೆ ಅನ್ಯಾಯವಾದಾಗ ಪ್ರತಿಭಟಿಸದಿದ್ದರೆ ನಾವೆಲ್ಲ ಸತ್ತು ಹೋದಂತೆ. ದಲಿತ ಸಂಘಟನೆ ಗಳು ಪ್ರತಿ ಶಾಸಕರ ಮನೆ ಮುಂದೆ ಧರಣಿ ಮಾಡುವ ಮೂಲಕ ಎಚ್ಚರಿಸುವ ಕೆಲಸ ಮಾಡಬೇಕಿದೆ ಎಂದರು. ದಸಂಸ (ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘಟನಾ ಸಂಚಾಲಕ ಮಹೇಂದ್ರಸ್ವಾಮಿ, ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಶ್ ಬಸಪ್ಪ, ವಾಲ್ಮೀಕಿ ಯುವಕ ಸಂಘದ ಅಧ್ಯಕ್ಷ ಕೋಟೆ ಜಗದೀಶ್, ಜಿಲ್ಲಾ ಸಂಘಟನಾ ಸಂಚಾಲಕ ಬಿ.ಕೆ. ವಸಂತಕುಮಾರ್, ರಾಮಚಂದ್ರಪ್ಪ, ಎಲ್.ಚಂದ್ರು, ಚಂದ್ರಶೇಖರ್ ಪುರ, ಸಂತೋಷ್ ಲಕ್ಯಾ, ಬೇಲೂರು ಲಕ್ಷ್ಮಣ್, ಹುಣಸೆಮಕ್ಕಿ ಲಕ್ಷ್ಮಣ್, ಹಾಲೇಶಪ್ಪ, ನಾಗರಾಜ, ಸಂದೇಶ, ವೆಂಕಟರಾಮಯ್ಯ, ರುದ್ರಸ್ವಾಮಿ ಉಪಸ್ಥಿತರಿದ್ದರು. 3 ಕೆಸಿಕೆಎಂ 1ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಭಾನುವಾರ ನಡೆದ ದಲಿತ- ಶೋಷಿತರ ಹಕ್ಕುಗಳಿಗಾಗಿ ಆಗ್ರಹಿಸಿ ಜಿಲ್ಲಾ ಮಟ್ಟದ ಜಗೃತಿ ಸಮಾವೇಶವನ್ನು ಮಾವಳ್ಳಿ ಶಂಕರ್ ಉದ್ಘಾಟಿಸಿದರು. ಮೋಟಮ್ಮ, ಬಿ.ಬಿ. ನಿಂಗಯ್ಯ ಇದ್ದರು.