ಅಜೀಜಅಹ್ಮದ ಬಳಗಾನೂರ ಹುಬ್ಬಳ್ಳಿ
ಇದು ಕಂಡುಬಂದಿದ್ದು ನಗರದ ಕುಸುಗಲ್ಲ ರಸ್ತೆಯ ಆಕ್ಸಪರ್ಡ್ ಕಾಲೇಜು ಹತ್ತಿರ ಶನಿವಾರ ಹಾಗೂ ಭಾನುವಾರ 2 ದಿನಗಳ ಕಾಲ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತೃತ್ವದ ಅಂತಾರಾಷ್ಟ್ರೀಯ ಗಾಳಿಪಟ ಮತ್ತು ಸಾಂಸ್ಕೃತಿಕ ಮಹೋತ್ಸವದಲ್ಲಿ. ದೇಶ, ವಿದೇಶ, ಅನ್ಯರಾಜ್ಯಗಳಿಂದ ಸ್ಪರ್ಧಿಗಳು ಪಾಲ್ಗೊಂಡು ಗಾಳಿಪಟ ಹಾರಿಸಿ ನೋಡುಗರಿಗೆ ಮುದ ನೀಡಿದರು.
ಬಾನಂಗಳದಲ್ಲೂ ಶ್ರೀರಾಮ: ಉತ್ಸವದ ಪ್ರಮುಖ ಆಕರ್ಷಣೆ ಅಯೋಧ್ಯೆಯ ಶ್ರೀರಾಮ ಮಂದಿರ. ಬೆಂಗಳೂರಿನ ಗಾಳಿಪಟ ಸ್ಪರ್ಧಿ ವಿ.ಕೆ.ರಾವ್ ಹಾರಿಸಿದ ಶ್ರೀರಾಮಚಂದ್ರ ಹಾಗೂ ಅಯೋಧ್ಯೆಯ ಶ್ರೀರಾಮ ಮಂದಿರದ ಚಿತ್ರ ಹೊಂದಿದ ಗಾಳಿಪಟ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಬಾನಂಗಳದಲ್ಲಿ ಈ ಗಾಳಿಪಟ ಹಾರುತ್ತಿದ್ದಂತೆ ಪ್ರೇಕ್ಷಕರು ಜೈ ಶ್ರೀರಾಮ ಎಂಬ ಘೋಷಣೆ ಕೂಗಿದರು. ಈ ಮೂಲಕ ಗಾಳಿಪಟ ಸ್ಪರ್ಧಿಗಳಿಗೆ ಹುರಿದುಂಬಿಸಿದರು. ದೊಡ್ಡಬಳ್ಳಾಪುರದ ಗಾಳಿಪಟ ಕಲಾ ಸಂಘದ ಬಿ.ಪಿ. ಪ್ರಸನ್ನ ಹಾರಿಸಿದ 20 ಅಡಿಯ ಶ್ರೀರಾಮನ ಭಾವಚಿತ್ರ ಹಾಗೂ ಅಯೋಧ್ಯೆ ಮಂದಿರದ ಭಾವಚಿತ್ರ ಹೊತ್ತ ಬಾವುಟ ಎಲ್ಲರ ಗಮನ ಸೆಳೆಯಿತು.ಪಂಜಾಬ್ನಿಂದ ಆಗಮಿಸಿದ್ದ ವರುಣ ಛಡ್ಡಾ ಎಂಬುವರು 25 ಅಡಿ ಎತ್ತರದ ಹುಲಿ ಆಕೃತಿಯ ಗಾಳಿಪಟ ಮುದ ನೀಡಿತು.
ಚಂದ್ರಯಾನ-3, ಪ್ರಧಾನಿ ನರೇಂದ್ರ ಮೋದಿ, ಭಾರತದ ಧ್ವಜವುಳ್ಳ ಗಾಳಿಪಟದೊಂದಿಗೆ ಮೂರನೇ ಬಾರಿಗೆ ಪ್ರಧಾನಿಯಾಗಿ ಮೋದಿ ಎಂಬ ಸ್ಲೋಗನ್ ಹೊಂದಿದ ಗಾಳಿಪಟಗಳು ಹೆಚ್ಚಿನ ಆಕರ್ಷಣೆಗೆ ಕಾರಣವಾದವು.
ಪಂಜಾಬಿನ ವರುಣ ಛಡ್ಡಾ 76 ಮೀಟರ್ ಉದ್ದದ ಭಾರತದ ಬಾವುಟ, ಬೇಟಿ ಪಡಾವೋ ಬೇಟಿ ಬಚಾವೋ ಸ್ಲೋಗನ್ ಹೊಂದಿದ ಗಾಳಿಪಟ, ಮಹಾತ್ಮ ಗಾಂಧೀಜಿ, ವೋಟ್ ದೋ ಸ್ಲೋಗನ್ ಹೊಂದಿದ ಗಾಳಿಪಟ ಹಾರಿಸಿದರು. ಕಣ್ಣುಗಳಿಗೆ ಮುದ ನೀಡುವ ರೀತಿ ಬಗೆಬಗೆಯ ಬಣ್ಣ, ಆಕೃತಿಗಳಲ್ಲಿ ಬಾನಂಗಳದಲ್ಲಿ ಬಣ್ಣಬಣ್ಣದ ಚಿತ್ತಾರ ಮೂಡಿಸುತ್ತಾ ಹಾರಾಡುತ್ತಿರುವ ಗಾಳಿಪಟಗಳನ್ನು ನೋಡುವುದೇ ಚಂದ ಎನ್ನುವಂತಿದ್ದವು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಗಾಳಿಪಟ ಸ್ಪರ್ಧೆಗೆ ಉತ್ತಮ ಸ್ಪಂಧನೆ ದೊರೆಯುತ್ತಿದೆ. ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚಿನ ಗಾಳಿಪಟ ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ ಎಂದು