ಕೃಷಿಮೇಳದಲ್ಲಿ ಗಮನಸೆಳೆದ ಬಿಸ್ಮಿಲ್ಲಾಹ ಅಗ್ರೋ ಇಂಪ್ಲಿಮೆಂಟ್ಸ್

KannadaprabhaNewsNetwork |  
Published : Sep 14, 2025, 02:00 AM IST
ಧಾರವಾಡದ ಕೃಷಿಮೇಳದಲ್ಲಿ ಬಿಸ್ಮಿಲ್ಲಾಹ ಅಗ್ರೋ ಇಂಪ್ಲಿಮೆಂಟ್ಸ್ ಮಳಿಗೆಗೆ ಆಗಮಿಸಿ ಮಾಹಿತಿ ಪಡೆಯುತ್ತಿರುವ ರೈತರು. | Kannada Prabha

ಸಾರಾಂಶ

ಕೃಷಿ ಉಪಕರಣಗಳಲ್ಲಿ ಹೊಸ ಆವಿಷ್ಕಾರ ಹಾಗೂ ಹೊಸ ತಂತ್ರಜ್ಞಾನ ಅಳವಡಿಸುವ ಮೊದಲು ಹೊಲಗಳಿಗೆ ತೆರಳಿ ತಾವು ಸಿದ್ಧಪಡಿಸಿದ ಕೃಷಿ ಯಂತ್ರೋಪಕರಣಗಳನ್ನು ಬಳಸಿ

ಹುಬ್ಬಳ್ಳಿ: ಧಾರವಾಡದಲ್ಲಿ ಶನಿವಾರದಿಂದ ಆರಂಭವಾಗಿರುವ ಕೃಷಿ ಮೇಳದಲ್ಲಿ ಅಣ್ಣಿಗೇರಿಯ ಬಿಸ್ಮಿಲ್ಲಾಹ ಅಗ್ರೋ ಇಂಪ್ಲಿಮೆಂಟ್ಸ್‌ನ ಕೂರಿಗೆಗಳು ರೈತರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.

ಮೇಳದಲ್ಲಿ ಸುಮಾರು 25ಕ್ಕೂ ಅಧಿಕ ಬಗೆಯ ಕೃಷಿ ಯಂತ್ರೋಪಕರಣಗಳ ಪ್ರದರ್ಶನದೊಂದಿಗೆ ಮಾರಾಟ ವ್ಯವಸ್ಥೆ ಕಲ್ಪಿಸಲಾಗಿದೆ. ಸಾವಿರಾರು ರೈತರು ಮಳಿಗೆಗೆ ಆಗಮಿಸಿ ಮಾಹಿತಿ ಪಡೆಯುವುದರೊಂದಿಗೆ ತಮಗೆ ಬೇಕಾದ ಕೂರಿಗೆ ಖರೀದಿಗೆ ಮುಂಗಡ ಹಣ ನೀಡಿ ಬುಕ್ಕಿಂಗ್‌ ಮಾಡುತ್ತಿದ್ದಾರೆ.

ಕೃಷಿ ಉಪಕರಣಗಳಲ್ಲಿ ಹೊಸ ಆವಿಷ್ಕಾರ ಹಾಗೂ ಹೊಸ ತಂತ್ರಜ್ಞಾನ ಅಳವಡಿಸುವ ಮೊದಲು ಹೊಲಗಳಿಗೆ ತೆರಳಿ ತಾವು ಸಿದ್ಧಪಡಿಸಿದ ಕೃಷಿ ಯಂತ್ರೋಪಕರಣಗಳನ್ನು ಬಳಸಿ ಮತ್ತು ರೈತರ ಅನಾನುಕೂಲತೆ ಆಲಿಸಿದ ಬಳಿಕ ರೈತರಿಗೆ ಹೊಸ ಯಂತ್ರೋಪಕರಣಗಳನ್ನು ಆವಿಷ್ಕರಿಸಿ ನೀಡುವುದು ಈ ಸಂಸ್ಥೆಯ ವಿಶೇಷತೆ.

ಮೊದಲು ರಬ್ಬರ್‌ ಮಾಡಲ್‌ ಕೂರಿಗೆ (ಡಬ್ಬಿ ಕೂರಿಗೆ) ಮೂಲಕ ಆರಂಭವಾಯಿತು. ಈ ವರೆಗೂ 25ಕ್ಕೂ ಅಧಿಕ ಮಾದರಿಯ ಕೂರಿಗೆಗಳನ್ನು ಸಿದ್ಧಪಡಿಸಿದೆ.

ಯಾವೆಲ್ಲ ಕೂರಿಗೆಗಳಿವೆ?:

6 ತಾಳಿನ ದುರ್ಗಾ (ಬ್ಯಾಡಗಿ) ಮಾಡೆಲ್ ಕೂರಿಗೆ, ಸ್ಟ್ರಿಂಗ್‌ ತಾಳಿನ ಕಿಸಾನ್ ಮಾಡೆಲ್‌ ಕೂರಿಗೆ, ಸಿಂಗಲ್‌ ಬಾಕ್ಸ್‌ನ ಮೆಕ್ಕೆಜೋಳ ಬಿತ್ತುವ ಬಲರಾಮ ತಾಳಿನ ಕೂರಿಗೆ, 6 ಮತ್ತು 8 ತಾಳಿನ ಮಾಡೆಲ್‌ ಕೂರಿಗೆ, 9 ತಾಳಿನ ಕಲ್ಟಿವೇಟರ್‌ (ಜಿಗ್‌ಜಾಗ್‌) ಮಾಡೆಲ್‌ ಕೂರಿಗೆ, ಬೀಜ ಸ್ವಚ್ಛ ಮಾಡುವ ಯಂತ್ರ ಸೇರಿದಂತೆ 25ಕ್ಕೂ ಹೆಚ್ಚು ಮಾಡಲ್‌ ಯಂತ್ರಗಳು ಇಲ್ಲಿ ಲಭ್ಯ.

ಗಮನ ಸೆಳೆದ ಸ್ಪೇಷಲ್‌ ಕೂರಿಗೆ:

ರೈತರ ಬಹುದಿನಗಳ ಬೇಡಿಕೆ ಮೇರೆಗೆ ತಯಾರಿಸಿದ ಬಿಎಂಡಿ26 ಮೆಕ್ಕೆಜೋಳ ಸ್ಪೇಷಲ್ ಕೂರಿಗೆ ಈ ಬಾರಿಯ ಕೃಷಿ ಮೇಳದಲ್ಲಿ ಗಮನ ಸೆಳಯುತ್ತಿದೆ. ಆಕರ್ಷಕ ವಿನ್ಯಾಸದೊಂದಿಗೆ ರೈತರ ಅನಾನೂಕೂಲತೆ ಗಮನದಲ್ಲಿಟ್ಟು ಈ ಕೂರಿಗೆ ಸಿದ್ಧಪಡಿಸಿದೆ. ಇದು ಪ್ರಪ್ರಥಮವಾಗಿ 5 ತಾಳುಗಳೊಂದಿಗೆ ಪ್ರಸ್ತುತಪಡಿಸಲಾಗಿದೆ.

ಇಲ್ಲಿಗೆ ಭೇಟಿ ನೀಡಿ:

ಬಿಸ್ಮಿಲ್ಲಾಹ ಅಗ್ರೋ ಇಂಪ್ಲಿಮೆಂಟ್ಸ್ ಅಣ್ಣಿಗೇರಿಯ ಗದಗ-ಹುಬ್ಬಳ್ಳಿ ರಸ್ತೆಯಲ್ಲಿದೆ. ಈ ಬಾರಿಯ ಕೃಷಿ ಮೇಳದಲ್ಲಿ 488, 489, 490 ಸಂಖ್ಯೆಯ ಮಳಿಗೆ ಸ್ಥಾಪಿಸಿದೆ. ಈ ಯಂತ್ರೋಪಕರಣಗಳು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸಹಾಯಧನದಲ್ಲಿ ರೈತರಿಗೆ ಲಭ್ಯ.ಹೆಚ್ಚಿನ ಮಾಹಿತಿಗೆ ಮೊ 90089 28615, 97392 31911, 9964436307 ಸಂಖ್ಯೆಗೆ ರೈತರು ಸಂಪರ್ಕಿಸಬಹುದಾಗಿದೆ.

ರೈತರಿಗೆ ಆರ್ಥಿಕ ಹೊರೆಯಾಗದಂತೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಕೃಷಿ ಯಂತ್ರೋಪಕರಣ ನೀಡುವ ಉದ್ದೇಶ ಹೊಂದಿದೆ. ರೈತರ ಅವಶ್ಯಕತೆಗಳಿಗೆ ಅನುಗುಣವಾಗಿ ವಿಶೇಷ ಕೂರಿಗೆ ಸಿದ್ಧಪಡಿಸಲಾಗುತ್ತಿದೆ. ಇದಕ್ಕೆ ರೈತರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೃಷಿ ಮೇಳದಲ್ಲಿ ಸಾವಿರಾರು ರೈತರು ಆಗಮಿಸಿ ಮಾಹಿತಿ ಪಡೆಯುತ್ತಿದ್ದಾರೆ ಎಂದು ಬಿಸ್ಮಿಲ್ಲಾಹ ಅಗ್ರೋ ಇಂಪ್ಲಿಮೆಂಟ್ಸ್ ಖಾಜಾಹುಸೇನ ಗುಳಗುಂದಿ ತಿಳಿಸಿದ್ದಾರೆ.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ