ಲೋಕಾಪುರ ಪಿಕೆಪಿಎಸ್ ಅಧಿಕಾರ ಬಿಜೆಪಿ ಪಾಲು

KannadaprabhaNewsNetwork |  
Published : Jan 29, 2024, 01:33 AM IST
೨೮-ಎಲ್.ಕೆ.ಪಿ-೧ : ಲೋಕಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ವಿಜಯಶಾಲೆಯಾದ ಪ್ರಯುಕ್ತ ಸಂಭ್ರಮಾಚರಣೆ ಮಾಡಿದರು. ಈ ವೇಳೆ ಲೋಕಣ್ಣ ಕತ್ತಿ, ವಸಂತಗೌಡ ಪಾಟೀಲ, ಹಣಮಂತಗೌಡ ಪಾಟೀಲ, ವ್ಹಿ.ಎಮ್.ತೆಗ್ಗಿ, ವಿರೇಶ ಪಂಚಕಟ್ಟಿಮಠ, ಆನಂದ ಹವಳಖೋಡ ಇತರರು ಇದ್ದರು. | Kannada Prabha

ಸಾರಾಂಶ

ಲೋಕಾಪುರ: ತೀವ್ರ ಜಿದ್ದಾ ಜಿದ್ದಿನಿಂದ ಕೂಡಿದ್ದ ಲೋಕಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಬಿಜೆಪಿ ಮೇಲುಗೈ ಸಾಧಿಸಿದೆ. ಡಿ.೧೭ರಂದು ಚುನಾವಣೆ ನಡೆದಿತ್ತು. ಮತ ಎಣಿಕೆಗೆ ಹೈಕೂರ್ಟಿನಿಂದ ತಡೆಯಾಜ್ಞೆ ತಂದ ಕಾರಣ ಫಲಿತಾಂಶ ವಿಳಂಬವಾಗಿತ್ತು. ಕಳೆದ ವಾರ ಮತ ಎಣಿಕೆಗೆ ಹೈಕೋರ್ಟ್‌ ಗ್ರೀನ್ ಸಿಗ್ನಲ್ ನೀಡಿದ್ದರಿಂದ ಭಾನುವಾರ ಮತ ಎಣಿಕೆ ನಡೆಯಿತು.

ಕನ್ನಡಪ್ರಭ ವಾರ್ತೆ ಲೋಕಾಪುರ

ತೀವ್ರ ಜಿದ್ದಾ ಜಿದ್ದಿನಿಂದ ಕೂಡಿದ್ದ ಲೋಕಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಬಿಜೆಪಿ ಮೇಲುಗೈ ಸಾಧಿಸಿದೆ.

ಡಿ.೧೭ರಂದು ಚುನಾವಣೆ ನಡೆದಿತ್ತು. ಮತ ಎಣಿಕೆಗೆ ಹೈಕೂರ್ಟಿನಿಂದ ತಡೆಯಾಜ್ಞೆ ತಂದ ಕಾರಣ ಫಲಿತಾಂಶ ವಿಳಂಬವಾಗಿತ್ತು. ಕಳೆದ ವಾರ ಮತ ಎಣಿಕೆಗೆ ಹೈಕೋರ್ಟ್‌ ಗ್ರೀನ್ ಸಿಗ್ನಲ್ ನೀಡಿದ್ದರಿಂದ ಭಾನುವಾರ ಮತ ಎಣಿಕೆ ನಡೆಯಿತು.

ಬಿಜೆಪಿ ಬೆಂಬಲಿತರಾದ ಸಾಮಾನ್ಯ ವರ್ಗದಿಂದ ವಿವೇಕಾನಂದ ಹವಳಖೋಡ(೫೧೦), ಚನ್ನಪ್ಪ ಮುದ್ದಾಪುರ(೫೦೪), ರಮೇಶ ಯರಗಟ್ಟಿ (ದೇವರಡ್ಡಿ) (೪೭೩), ಹಿಂದುಳಿದ ವರ್ಗ ‘ಅ’ ದಿಂದ ಯಮನಪ್ಪ ಹೊರಟ್ಟಿ (೫೩೦), ಹಿಂದುಳಿದ ವರ್ಗ ‘ಬ’ ಅಯ್ಯಪ್ಪಗೌಡ ಪಾಟೀಲ (೫೫೪), ಸಾಲಗಾರ ಮಹಿಳಾ ಅನಸೂಯಾ ಪಾಟೀಲ (೪೭೭), ತಿಮ್ಮವ್ವ ಬೂಸರಡ್ಡಿ (೪೭೬), ಸಾಲಗಾರ ಪರಿಶಿಷ್ಟ ಜಾತಿ ತಿಪ್ಪಣ್ಣ ಅಗಸದವರ (೫೦೭), ಸಾಲಗಾರ ಪರಿಶಿಷ್ಟ ಪಂಗಡ ಮಾರುತಿ ರಂಗಣ್ಣವರ (೫೯೭), ಸಾಲೇತರ ಹೊಳಬಸು ಕಾಜಗಾರ(ಬಳಗಾರ) (೧೨೧) ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ.

ಸಾಮಾನ್ಯ ವರ್ಗದಿಂದ ಪವನ ಉದಪುಡಿ(೫೪೮), ಚನ್ನಯ್ಯ ಗಣಾಚಾರಿ(೪೭೦) (ಕಾಂಗ್ರೆಸ್‌ ಬೆಂಬಲಿತರು) ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಪಿ.ಎಲ್.ಬಗಲಿ ಘೋಷಿಸಿದರು.

ವಿಜಯೋತ್ಸವ : ಬಿಜೆಪಿ ಬೆಂಬಲಿತ ೧೦ ನಿರ್ದೇಶಕರು ಆಯ್ಕೆಯಾಗಿದ್ದರಿಂದ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಕೆಸರಿ ಗುಲಾಲು ಎರಚಿ, ಸಿಹಿ ಹಂಚಿ ಸಂಭ್ರಮಿಸಿದರು. ವಿ.ಎಂ. ತೆಗ್ಗಿ, ಲೋಕಣ್ಣ ಕತ್ತಿ, ವಸಂತಗೌಡ ಪಾಟೀಲ, ಹಣಮಂತಗೌಡ ಪಾಟೀಲ, ಗೋಪಾಲಗೌಡ ಪಾಟೀಲ, ಕಾಶಲಿಂಗ ಮಾಳಿ, ಬಿ.ಎಲ್. ಬಬಲಾದಿ, ವಿರೇಶ ಪಂಚಕಟ್ಟಿಮಠ, ಸಚೀನ ದೇಸಾಯಿ, ಸದಾಶಿವ ಹಗ್ಗದ, ಉಮೇಶ ಕಾಗಿ, ಪರಮಾನಂದ ಟೋಪಣ್ಣವರ, ಸಿಂಧೂರ ತಳವಾರ, ವಿಠ್ಠಲ ಬಾವಲತ್ತಿ, ಶ್ರೀನಿವಾಸ ಹೂಗಾರ, ಅರುಣ ಮುಧೋಳ, ಕೃಷ್ಣಬಾಲರಾಜ ವಿಭೂತಿ, ವಸಂತ ದೊಡಮನಿ, ಆಶೀಫ್ ಜೀರಗಾಳ, ಬಿಜೆಪಿ ಕಾರ್ಯಕರ್ತರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ