ವಿಶೇಷ ವರದಿ
ಮನುಷ್ಯ ಏನೆಲ್ಲ ಸಂಶೋಧಿಸಿ ಮುನ್ನಡೆದಿದ್ದರೂ, ಮನುಷ್ಯನ ದೇಹದೊಳಗಿನ ರಕ್ತವನ್ನು ಮಾತ್ರ ಸೃಷ್ಟಿಸಲು ಸಾಧ್ಯವಾಗಿಲ್ಲ. ಇಂತಹ ಅತ್ಯಮೂಲ್ಯವಾದ ರಕ್ತದ ಮಹತ್ವವನ್ನು ಪ್ರತಿಯೊಬ್ಬರೂ ಅರಿಯಬೇಕಾದ ಮತ್ತು ನೆನಪಿಸಿಕೊಳ್ಳಬೇಕಾದ ದಿನವೇ ವಿಶ್ವ ರಕ್ತದಾನಿಗಳ ದಿನಾಚರಣೆಯಾಗಿದೆ. ಇಂತಹ ಸಂದರ್ಭದಲ್ಲಿ ರಕ್ತದಾನ ಎಂಬುದು ಪ್ರತಿಯೊಬ್ಬರ ಜೀವನದ ಒಂದು ಭಾಗವಾಗಬೇಕಾಗಿದೆ.
ಇತ್ತೀಚೆಗೆ ರಕ್ತದಾನದ ಕುರಿತು ಇದ್ದ ಕೆಲವು ತಪ್ಪು ಗ್ರಹಿಕೆಗಳು ದೂರವಾಗುತ್ತಿದೆ. ರಕ್ತದಾನ ಎನ್ನುವುದು ಅತ್ಯಂತ ಶ್ರೇಷ್ಠ ಎಂಬ ತಿಳುವಳಿಕೆ ಮೂಡುತ್ತಿದೆ. ವರ್ಷ ದಿಂದ ವರ್ಷಕ್ಕೆ ರಕ್ತ ರಕ್ತ ನೀಡಲು ಮುಂದೆ ಬರುತ್ತಿರುವ ದಾನಿಗಳ ಸಂಖ್ಯೆ ಏರುತ್ತಿದೆ. ಆದರೆ ಏರುತ್ತಿರುವ ಬೇಡಿಕೆಯನ್ನು ಸರಿಗಟ್ಟಲು ಈ ಸಂಖ್ಯೆ ಸಾಕಾಗುತ್ತಿಲ್ಲ. ಪ್ರತಿ ವರ್ಷವೂ ಏಪ್ರಿಲ್ನಿಂದ ಜೂನ್ ವರೆಗೆ ರಕ್ತದ ಸಂಗ್ರಹದ ಸಮಸ್ಯೆ ಅತ್ಯಧಿಕವಾಗಿರುತ್ತದೆ. ಅದರಲ್ಲಿಯೂ ಈ ಬಾರಿ ಲೋಕಸಭಾ ಚುನಾವಣೆ ಎದುರಾಗಿದ್ದರಿಂದ ಸಮಸ್ಯೆ ಇನ್ನಷ್ಟು ಹೆಚ್ಚಳವಾಗಿತ್ತು.ಮಲೆನಾಡಿನಲ್ಲಿ 25 ರಕ್ತನಿಧಿ ಕೇಂದ್ರ:
ಶಿವಮೊಗ್ಗ ನಗರ ಇತ್ತೀಚೆಗೆ ಹೆಲ್ತ್ ಹಬ್ ಆಗುತ್ತಿದ್ದು, ಆಸ್ಪತ್ರೆಗಳ ಸಂಖ್ಯೆ ಹೆಚ್ಚುತ್ತಿದೆ. ಅಕ್ಕಪಕ್ಕದ ಜಿಲ್ಲೆಗಳಿಂದ ಇಲ್ಲಿಗೆ ಬರುವ ರೋಗಿಗಳ ಸಂಖ್ಯೆಯಲ್ಲಿಯೂ ಹೆಚ್ಚಳ ಕಾಣುತ್ತಿದೆ. ಹೀಗಾಗಿ ಶಿವಮೊಗ್ಗ ನಗರದಲ್ಲಿ ರಕ್ತದ ಬೇಡಿಕೆ ಹೆಚ್ಚುತ್ತಿದೆ.
ಕೊಟ್ಟವರೇ ಕೊಡಬೇಕು:
ರಕ್ತದಾನಿಗಳ ಸಂಖ್ಯೆಯಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಹೆಚ್ಚಳವಾಗದ ಕಾರಣ ರಕ್ತ ನೀಡಿದವರೇ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವ ಅನಿವಾರ್ಯತೆ ಇದೆ. ಈ ರಕ್ತದಾನಿಗಳು ಇದನ್ನೊಂದು ಹೆಮ್ಮೆ ಮಾತ್ರವಲ್ಲ, ತಮ್ಮ ಆದ್ಯ ಕರ್ತವ್ಯ ಎಂದು ಕೂಡ ಭಾವಿಸಿದ್ದಾರೆ.ರಕ್ತದಾನಿಗಳು:
ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು ಆರು ರಕ್ತನಿಧಿ ಕೇಂದ್ರಗಳಿವೆ. ಶಿಕಾರಿಪುರ, ಸೊರಬ ಮತ್ತು ಶಿರಾಳಕೊಪ್ಪದಲ್ಲಿ ಮೆಗ್ಗಾನ್ ಆಸ್ಪತ್ರೆಯ ರೆಫೆರಲ್ ಯೂನಿಟ್ಗಳಿವೆ. ಭದ್ರಾವತಿ ಮತ್ತು ಹೊಸನಗರದಲ್ಲಿ ಒಂದೇ ಒಂದು ರಕ್ತನಿಧಿ ಕೇಂದ್ರವಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ಒಬ್ಬರು ರಕ್ತ ನೀಡುವುದರಿಂದ ನಾಲ್ಕು ಮಂದಿಯ ಜೀವ ಉಳಿಯುತ್ತದೆ. ರಕ್ತ ನೀಡಿದವರ ಆರೋಗ್ಯವೂ ಸುಧಾರಿಸುತ್ತದೆ. ರಕ್ತದಾನ ಎನ್ನುವುದು ಒಂದು ಆಂದೋಲನವಾಗಬೇಕು. ಅದರಲ್ಲಿಯೂ ಮಲೆನಾಡು ಮಾದರಿ ಎನ್ನುವಂತಹ ದಿನ ಬರಬೇಕು ಎನ್ನುತ್ತಾರೆ ಶಿವಮೊಗ್ಗ ರೋಟರಿ ರಕ್ತನಿಧಿ ಕೇಂದ್ರದ ಪಿಆರ್ ಓ ಎಸ್. ಕೆ.ಸತೀಶ್.