ಶಶಿಕಾಂತ ಮೆಂಡೆಗಾರ
ಈ ಹಿಂದೆ ಪ್ರಾಯೋಗಿಕ ಪರೀಕ್ಷೆ ವೇಳೆ ಒಮ್ಮೆ ಸ್ಫೋಟಗೊಂಡು ಮೂವರನ್ನು ಬಲಿ ತೆಗೆದುಕೊಂಡಿದ್ದ ಬಬಲೇಶ್ವರ ತಾಲೂಕಿನ ಕೃಷ್ಣಾನಗರದಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಭಾನುವಾರ ಬೆಳಗಿನ ಮತ್ತೆ ಅದೇ ಜಾಗದಲ್ಲಿ ಬಾಯ್ಲರ್ ಸ್ಫೋಟಗೊಂಡಿದೆ. ಆದರೆ, ಕಾರ್ಮಿಕರು ಟೀ ಕುಡಿಯಲು ಹೊರಗಡೆ ಹೋಗಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಪದೇ ಪದೇ ಬಾಯ್ಲರ್ ಸ್ಟೋಟಗೊಳ್ಳುತ್ತಿರುವ ಕಾರಣಕ್ಕೆ ಬಾಯ್ಲರ್ ನಿರ್ಮಾಣದ ಗುಣಮಟ್ಟದ ಬಗ್ಗೆ ಅನುಮಾನ ಮೂಡಲಾರಂಭಿಸಿದೆ.
ಕಾರ್ಖಾನೆಯಲ್ಲಿ ಬಾಯ್ಲರ್ (ಇಎಸ್ಪಿ ವಿಭಾಗದಲ್ಲಿ) ಸ್ಫೋಟಗೊಂಡ ಪರಿಣಾಮ ಇಡಿ ಬಾಯ್ಲರ್ ವ್ಯವಸ್ಥೆ ಹಾಗೂ ಅದರ ಅಳವಡಿಕೆಯ ವಸ್ತುಗಳೆಲ್ಲವೂ ಛಿದ್ರಛಿದ್ರವಾಗಿವೆ. ಇದರಿಂದಾಗಿ ಮುಂದಿನ ಸೀಸನ್ನಲ್ಲಿ ಪ್ರತಿದಿನ ನುರಿಯುತ್ತಿದ್ದ 5 ಸಾವಿರ ಟನ್ ಕಬ್ಬು ನುರಿಸುವಿಕೆಗೆ ಹೊಡೆತ ಬಿದ್ದಂತಾಗಿದೆ.ತಪ್ಪಿದ ಭಾರೀ ಅನಾಹುತ:
ಮೂವರನ್ನು ಬಲಿ ಪಡೆದಿದ್ದ ಬಾಯ್ಲರ್:
ಕಳಪೆ ಕಾಮಗಾರಿ?:
ಈ ಮೊದಲು ಪ್ರತಿದಿನ 6 ಸಾವಿರ ಟನ್ ಕಬ್ಬು ನುರಿಸುವ ಸಾಮರ್ಥ್ಯದ ಯಂತ್ರಗಳು ಅಳವಡಿಕೆಯಾಗಿದ್ದು, ಕಳೆದ 30 ವರ್ಷಗಳಿಂದಲೂ ಅದೇ ಸಾಮರ್ಥ್ಯದಲ್ಲೇ ಕಬ್ಬು ನುರಿಸಲಾಗುತ್ತಿದೆ. ಹೊಸದಾಗಿ 5 ಸಾವಿರ ಟನ್ ಕಬ್ಬು ನುರಿಸುವ ಸಾಮರ್ಥ್ಯದ ಪ್ರಾಜೆಕ್ಟ್ ಸಿದ್ದಪಡಿಸಿದ್ದು, ಅದರಲ್ಲಿ ಪದೇಪದೇ ಸಮಸ್ಯೆ ಎದುರಾಗುತ್ತಿದೆ. ಕಳೆದ 30 ವರ್ಷಗಳಿಂದ ಕಾರ್ಖಾನೆಯ ನಿರ್ವಹಣೆಯನ್ನು ದೆಹಲಿಯ ಐಜಾಕ್ ಕಂಪನಿ ನಿರ್ವಹಣೆ ಮಾಡುತ್ತಿತ್ತು. ಹೊಸದಾದ ಪ್ರಾಜೆಕ್ಟ್ ನಿರ್ವಹಣೆಗೆ ಅವರು ಹೆಚ್ಚಿಗೆ ಹಣ ಕೇಳಿದ್ದರಿಂದ ಅದನ್ನು ಪುನಾ ಮೂಲದ ಎಸ್ಎಸ್ ಎಂಜಿನಿಯರಿಂಗ್ ಕಂಪನಿಗೆ ಕೊಡಲಾಗಿತ್ತು. ಐಜಾಕ್ ಹಾಗೂ ಎಸ್ಎಸ್ ಎಂಜಿನಿಯರಿಂಗ್ ಕಂಪನಿ ಇಬ್ಬರೂ ಟರ್ಮ್ಯಾಕ್ಸ್ ಎಂಬ ಕಂಪನಿಯಿಂದಲೇ ನಿರ್ವಹಣೆ ಮಾಡಿಸುತ್ತಾರೆ ಎನ್ನಲಾಗಿದೆ.
ಕೋಟ್
-ಕುಮಾರ ದೇಸಾಯಿ, ಕಾರ್ಖಾನೆ ಅಧ್ಯಕ್ಷ.
ಕಾರ್ಖಾನೆಯ ಬಾಯ್ಲರ್ನಲ್ಲಿ ಸ್ಫೋಟ ಆಗಿಲ್ಲ, ಬಾಯ್ಲರ್ ಹೊರಭಾಗದಲ್ಲಿರುವ ಇಎಸ್ಪಿ (ಹೊಗೆ ಹೊರಗೆ ಹೋಗದಂತೆ ನೋಡುವ ಕಾರ್ಯಭಾಗದಲ್ಲಿ) ಆಗಿದೆ. ಅಷ್ಟಕ್ಕೂ ಈ ಪ್ರೊಜೆಕ್ಟ್ ನಂದಲ್ಲ, ನಾನು 2018 ರಿಂದ 2023ರ ವರೆಗೆ ಅಧ್ಯಕ್ಷನಾಗಿದ್ದೆ. ಆದರೆ 2013ರಿಂದ 2018ರ ಅಗಸ್ಟ್ ವರೆಗೆ ಇದೇ ಕುಮಾರ ದೇಸಾಯಿ ಅವರು ಅಧ್ಯಕ್ಷರಾಗಿದ್ದರು. ಆಗ ನಾನು ಹೊಸ ಪ್ರಾಜೆಕ್ಟ್ ಬೇಡ ಎಂದರೂ ಅದನ್ನೂ ಮೀರಿ 2017ರ ಆಗಸ್ಟ್ನಲ್ಲಿ ಕುಮಾರ ದೇಸಾಯಿ ಅವರ ಅವಧಿಯಲ್ಲೇ ಟೆಂಡರ್ ಕೊಟ್ಟಿದ್ದಾರೆ. ಯಾವುದೇ ತನಿಖೆಗೆ ನಾನು ಸಿದ್ಧನಿದ್ದೇನೆ.
-ಶಶಿಕಾಂತ ಪಾಟೀಲ್, ಮಾಜಿ ಅಧ್ಯಕ್ಷ.---
ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಅವಘಡದ ಕುರಿತು ನನ್ನ ಗಮನಕ್ಕೆ ಬಂದಿದೆ. ಇದು ಎರಡನೇ ಬಾರಿ ಆಗಿರುವುದರಿಂದ ಅಲ್ಲಿ ನಡೆದಿರುವ ಕಾಮಗಾರಿ ಹಾಗೂ ಘಟನೆ ಬಗ್ಗೆ ಥರ್ಡ್ ಪಾರ್ಟಿ ಮೂಲಕ ತನಿಖೆ ನಡೆಸಲಾಗುವುದು. ತನಿಖೆ ವರದಿ ಬಂದ ಬಳಿಕ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.-ಶಿವಾನಂದ ಪಾಟೀಲ್, ಸಕ್ಕರೆ ಸಚಿವರು.