ಕನ್ನಡಪ್ರಭ ವಾರ್ತೆ ನಾಲತವಾಡ
ಅಮರೇಶ್ವರ ದೇವಸ್ಥಾನದಲ್ಲಿ ರೈತರು ಹಾಗೂ ಮುಖಂಡರ ಜೊತೆ ಮಾತನಾಡಿದ ಅವರು, ಮುದ್ದೇಬಿಹಾಳ-ನಾಲತವಾಡ ಮುಖ್ಯ ರಸ್ತೆಯಲ್ಲಿ ಅಮರೇಶ್ವರ ದೇವಸ್ತಾನದ ಹತ್ತಿರ ಸೇತುವೆ ನಿರ್ಮಾಣ ಮಾಡಿ ಕಾಲುವೆ ಮಾಡುವ ಕಾಮಗಾರಿ ಮಾತ್ರ ಉಳಿದುಕೊಂಡಿದೆ. ಈ ಹಿಂದೆ ಅದಕ್ಕೆ ಸಿಂಗಲ್ ಟೆಂಡರ್ ಮಾಡಲಾಗಿತ್ತು. ಅದನ್ನು ಇಲಾಖೆಯವರು ರದ್ದು ಪಡಿಸಿದ್ದಾರೆ. ಚುನಾವಣೆ ನೀತಿ ಸಂಹಿತ ಇರುವ ಕಾರಣ ಟೆಂಡರ್ ಪ್ರೋಸೆಸ್ ವಿಳಂಬವಾಗಿತ್ತು. ಈಗ ನೀತಿ ಸಂಹಿತ ಮುಗಿದಿದೆ ಕೂಡಲೆ ರೀಟೆಂಡರ್ ಮಾಡಲು ಪ್ರಸ್ತಾವನೆ ಸಲ್ಲಿಸಲಾಗುವುದು. ಟೆಂಡರ್ ಅನಮೋದನೆ ಸಿಕ್ಕ ನಂತರ 3 ತಿಂಗಳ ಒಳಗಾಗಿ ಕಾಲುವೆ ಕಾಮಗಾರಿ ಮುಕ್ತಾಯ ಗೊಳಿಸುತ್ತೇವೆ. ಅವಾರ್ಡ್ ಕಾಪಿ ದೊರೆಯದ ರೈತರಿಗೆ ಶೀಘ್ರದಲ್ಲೆ ಅವಾರ್ಡ್ ಕಾಪಿ ನೀಡುವ ವ್ಯವಸ್ಥೆ ಮಾಡಲಾಗುವುದು. ಅಲ್ಲಿಯವರೆಗೆ ರೈತರು ತಾಳ್ಮೆಯಿಂದ ಇರಬೇಕು ಎಂದರು.
ನಾಗರಬೆಟ್ಟ ಏತ ನೀರಾವರಿ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಹೆಡ್ ಕೆನಾಲ್ನಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಿದ್ದೇವೆ, ಈಸ್ಟ್ ಕಾಲುವೆಯಲ್ಲಿ 1.5 ಕಿಮಿ ಕಾಲುವೆ ಮಾತ್ರ ಬಾಕಿ ಉಳಿದಿತ್ತು, ಅಲ್ಲಿಯ ರೈತರ ಭೂಸ್ವಾಧೀನ ಪ್ರಕ್ರಿಯೇ ಮುಗಿಸಿದ ನಂತರ ಕಾಲುವೆ ಪ್ರಾರಂಭಿಸಿ ಎಂದು ತಕರಾರು ಮಾಡಿದ್ದರು. ರೈತರಿಗೆ ಮನವೊಲಿಸಿದ್ದೇವೆ. 5 ತಿಂಗಳ ಒಳಗಾಗಿ ನಾಗರಬೆಟ್ಟ ಏತ ನೀರಾವರಿ ಕಾಲುವೆ ಕಾಮಗಾರಿ ಸಂಪೂರ್ಣ ಮುಕ್ತಾಯವಗುತ್ತದೆ ಎಂದರು.ಶೀಘ್ರ ಕಾಮಗಾರಿ ಮುಕ್ತಾಯಕ್ಕೆ ಆಗ್ರಹ:ಚಿಮ್ಮಲಗಿ ಏತ ನೀರಾವರಿ ಕಾಲುವೆ ಕಾಮಗಾರಿ ಮುಗಿದು ದಶಕಗಳೆ ಕಳೆದಿವೆ. ಅಮರೇಶ್ವರ ದೇವಸ್ಥಾನದ ಹತ್ತಿರ ಮಾತ್ರ ರೋಡ್ ದಾಟಿಸುವುದು ಮಾತ್ರ ಉಳಿದಿದೆ. ರೈತರು ಎಷ್ಟು ಅಂತ ತಾಳ್ಮೆ ವಹಿಸಬೇಕು. ಬ್ರಿಡ್ಜ್ ಮಾಡಿ ಕಾಲುವೆ ಮಾಡಿದರೆ ಎಲ್ಲ ರೈತರಿಗೆ ನೀರು ತಲುಪುತ್ತದೆ. ಕೂಡಲೆ ತಾವು ಸಮಸ್ಯೆಯನ್ನು ಬಗೆಹರಿಸಿ ರೈತರ ಜಮೀನಿಗೆ ನೀರು ಕಳಿಸುವ ವ್ಯವಸ್ಥೆ ಮಾಡಬೇಕು ಎಂದು ನವದೆಹಲಿ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಶಂಕರರಾವ ದೇಶಮುಖ ಅಧಿಕಾರಿಗಳಿಗೆ ಆಗ್ರಹಿಸಿದರು.
ವಿಫಲವಾದ ಸಂಧಾನ:
ಈ ವೇಳೆ ಪೃತ್ವಿರಾಜ್ ನಾಡಗೌಡ, ಶಂಕರರಾವ್ ದೇಶಮುಖ, ಅಮರ ದೇಶಮುಖ, ರಾಯನಗೌಡ ತಾತರಡ್ಡಿ, ಅಧಿಕಾರಿಗಳಾದ ಎಇಇ ಶಿವಾಜಿ ಬಿರಾದಾರ, ಜೆಇ ಬಾಬು ಬಡಿಗೇರ, ಜಾನು ನಾಯಕ, ಎಇ ಶ್ರೀಶೈಲ ದೊಡಮನಿ, ಬಿ.ಎಂ.ಸಾತಿಹಾಳ, ಹಣಮಂತ ಕುರಿ, ಸಿದ್ದಣ್ಣ ಆಲಕೊಪ್ಪರ, ಬಸವರಾಜ ಗಂಗನಗೌಡ್ರ, ಮಲ್ಲು ಗಂಗನಗೌಡ್ರ, ಸಿದ್ದಣ್ಣ ಕಟ್ಟಿಮನಿ, ವೀರೇಶ ಗಂಗನಗೌಡ್ರ, ಮೌನೇಶ ಮಾದರ, ಯಲ್ಲಪ್ಪ ಚಿಲವಾದಿ, ದುರಗಪ್ಪ ಲೊಟಗೇರಿ, ವಿಜಯ ಹಿರೇಮಠ ಇನ್ನಿತರರು ಇದ್ದರು.