ಮಹೇಂದ್ರ ದೇವನೂರು
ದಸರಾ ಅಂಗವಾಗಿ ನಡೆದ ಜಂಬೂಸವಾರಿ ಮೆರವಣಿಗೆಯಲ್ಲಿ ಹಿಂದೆಂದೂ ಕೇಳರಿಯದ ಅವ್ಯವಸ್ಥೆ ಕಂಡುಬಂತು. ಅಶಿಸ್ತು ತಾಂಡವಾಡುತ್ತಿತ್ತು. ಇದನ್ನು ನಿಯಂತ್ರಿಸಬೇಕಾದ ಹಿರಿಯ ಪೊಲೀಸ್ ಅಧಿಕಾರಿಗಳು ಕಾಣಲಿಲ್ಲ.
ಅರಮನೆ ಹೊರಗೆ ಮೆರವಣಿಗೆ ಶಿಸ್ತುಬದ್ಧವಾಗಿ ಹೋದರೂ, ಅರಮನೆ ಆವರಣದಲ್ಲಿ ಮಾತ್ರ ಅಶಿಸ್ತು ತಾಂಡವಾಡುತ್ತಿತ್ತು. ಆರಂಭದಿಂದ ಕೊನೆವರೆಗೂ ಮೆರವಣಿಗೆ ಮಾರ್ಗದ ಉದ್ದಕ್ಕೂ ಜನವೋ ಜನ.ಮೆರವಣಿಗೆ ಮಾರ್ಗದಲ್ಲಿ ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳೇ ತುಂಬಿದ್ದರು. ವಿವಿಧ ಜಾನಪದ ಕಲಾತಂಡಗಳು, ಸ್ತಬ್ಧಚಿತ್ರಗಳು ತೆರಳುವಾಗ ಸುತ್ತಲೂ ಸಮಿತಿ ಪದಾಧಿಕಾರಿಗಳು, ನೂರಾರು ಸಂಖ್ಯೆಯ ಪದಾಧಿಕಾರಿಗಳು ನೆರೆದಿದ್ದರು.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಇತರ ಜನಪ್ರತಿನಿಧಿಗಳು ಬರುವವರೆಗೆ ಹತ್ತಿರಕ್ಕೂ ಸುಳಿಯದವರು, ಅವರೆಲ್ಲರೂ ಅರಮನೆ ಆವರಣಕ್ಕೆ ಆಗಿಮಿಸುತ್ತಿದ್ದಂತೆಯೇ ಮೆರವಣಿಗೆ ಮಾರ್ಗದಲ್ಲಿ ಪೂರ್ತಿ ಅವರೇ ಇದ್ದರು.
ಎನ್.ಸಿ.ಸಿ ಕೆಡೆಟ್ಗಳು ಮೆರವಣಿಗೆಗೆ ಅಡ್ಡಲಾಗಿ ನಿಂತರೇ ಹೊರತು, ಜನರನ್ನು ನಿಯಂತ್ರಿಸುವ ಕೆಲಸ ಮಾಡಲಿಲ್ಲ. ಬದಲಿಗೆ ಜಂಬೂ ಸವಾರಿ ಬರುವಾಗ ಮಾತ್ರ ಪೊಲೀಸರೆ ಒಂದಷ್ಟು ಮಂದಿಯನ್ನು ಹೊರಗೆ ಕಳುಹಿಸಿದರಾದರೂ ಆ ನಂತರ ಪ್ರಭಾವ ಹೊಂದಿರುವ ಅನೇಕರು ಮೆರವಣಿಗೆಯಲ್ಲಿ ಕಾಣಿಸಿಕೊಂಡರು. ತಾವೇ ಸೆಲ್ಫಿ ತೆಗೆದುಕೊಳ್ಳುತ್ತ ಕಾಲಾಹರಣ ಮಾಡಿದರು.
ಕ್ರಮಬದ್ಧವಾಗಿ ತೆರಳದ ಸ್ತಬ್ಧ ಚಿತ್ರ:
ಬದಲಿಗೆ ಯಾವುದ್ಯಾವುದೋ ಸ್ತಬ್ಧಚಿತ್ರವು ಯಾವಾಗಲೋ ಹೋಯಿತು. ಅಂತೆಯೇ ಜಾನಪದ ಕಲಾತಂಡಗಳು ಕೂಡ ಹಾಗೆಯೇ ತೆರಳಿದವು. ಮಳೆ ಬರುವ ಮುನ್ಸೂಚನೆ ಇದ್ದರಿಂದ ಆರಂಭದಲ್ಲಿ ವೇಗ ಪಡೆದ ಜಾನಪದ ಕಲಾತಂಡಗಳು ಮತ್ತು ಸ್ತಬ್ಧಚಿತ್ರಗಳು, ಕೊನೆ ಕೊನೆಯಲ್ಲಿ ನಿಧಾನವಾಗಿ ಸಾಗಿದವು.
ಅಂಬಾರಿ ಆನೆ ಬರುವ ಮುನ್ನಾ ಒಂದು ಕಡೆ ಕಲಾತಂಡಗಳು ತೆರಳುತ್ತಿದ್ದರು ಮತ್ತೊಂದು ಕಡೆಯಿಂದ ಅಶ್ವಾರೋಹಿ ತಂಡ, ಅರಣ್ಯ ಇಲಾಖೆಯ ತಂಡ ಬರುತ್ತಿದ್ದವು. ಇದರಿಂದ ಟ್ರಾಫಿಕ್ ಜಾಮ್ ಆದ ಪರಿಸ್ಥಿತಿ ಉಂಟಾಗಿತ್ತು. ಸ್ತಬ್ಭಚಿತ್ರಗಳು, ಕಲಾತಂಡಗಳು ಕೆಲಕಾಲ ನಿಂತಲ್ಲೇ ನಿಲ್ಲಬೇಕಾಯಿತು.ಡಿಸಿ ವಿಚಾರಿಸಿದ ಡಿಸಿಎಂ