ಕನ್ನಡಪ್ರಭ ವಾರ್ತೆ ಮೈಸೂರು
ಮಾನಸ ಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ, ಕರ್ನಾಟಕ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಭಾನುವಾರ ಆಯೋಜಿಸಿದ್ದ ವೈಜ್ಞಾನಿಕವಾಗಿ ಒಳ ಮೀಸಲಾತಿ ಜಾರಿ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಅವೈಜ್ಞಾನಿಕವಾಗಿರುವ ಒಳ ಮೀಸಲಾತಿ ಆಯೋಗದ ವರದಿಯನ್ನು ಕೈಬಿಡಬೇಕು. ಮೀಸಲಾತಿಗೆ ಹೊಲೆಯ ಸಮುದಾಯದ ವಿರೋಧವಿದೆ ಎಂದು ಸೋದರ ಮಾದಿಗ ಸಮುದಾಯವು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದೆ. ಆದರೆ, ಎರಡು ಸಮುದಾಯಗಳ ಹಿತದೃಷ್ಟಿಯಿಂದ ಒಳ ಮೀಸಲಾತಿ ಜಾರಿಗೆ ಬರಬೇಕು. ಸರ್ಕಾರಕ್ಕೂ ನಾವು ಇದನ್ನೆ ಮನವರಿಕೆ ಮಾಡಿದ್ದೇವೆ. ಆದರೆ, ಈಗಿನ ವರದಿ ಆಧಾರದ ಮೇಲೆ ಅಲ್ಲ ಎಂದರು.ಹೊಸದಾಗಿ ಜಾತಿ ಸಮೀಕ್ಷೆ ನಡೆಸಿರುವುದರಿಂದ ಸರ್ಕಾರಕ್ಕೆ ದೊಡ್ಡ ವೆಚ್ಚವೇನು ಆಗುವುದಿಲ್ಲ. ಎಸ್.ಸಿ.ಪಿ, ಟಿ.ಎಸ್.ಪಿ ಹಣವನ್ನು ಅನ್ಯ ಯೋಜನೆಗೆ ಬಳಸುವುದನ್ನು ನಿಲ್ಲಿಸಿ 250 ಕೋಟಿ ರೂ.ವೆಚ್ಚದಲ್ಲಿ ಮೂರು ತಿಂಗಳಲ್ಲಿ ಜಾತಿ ಸಮೀಕ್ಷೆ ನಡೆಸಿ ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದರು.
ಸದಾಶಿವ ಆಯೋಗದ ವರದಿ ತಪ್ಪು ದತ್ತಾಂಶಗಳಿಂದ ರೂಪಿತವಾಗಿದೆ. ಅದು ತಿರಸ್ಕಾರ ಯೋಗ್ಯ. ಸದಾಶಿವ ಆಯೋಗದ ವರದಿಯನ್ನು ಹಿಂದಿನ ಬಿಜೆಪಿ ತಿರಸ್ಕಾರ ಮಾಡಿದ್ದು. ಈಗಿನ ಕಾಂಗ್ರೆಸ್ ಸರ್ಕಾರವೂ ಪರಿಗಣಿಸಿಲ್ಲ. ತಪ್ಪು ಮಾಹಿತಿ ಇರುವ ವರದಿ ಸ್ವೀಕರಿಸಲು ಸಾಧ್ಯವೇ? ಈ ವರದಿ ಅನ್ವಯ ಮೀಸಲಾತಿ ಹಂಚಿಕೆ ಮಾಡಿದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಸದಾಶಿವ ಆಯೋಗದ ವರದಿಯ ಮೂರು ಪುಟವನ್ನು ಕೈನಲ್ಲಿ ಬರೆಯಲಾಗಿದೆ. ಬರೆದವರು ಯಾರು ಎಂಬುದೂ ತಿಳಿದಿದೆ. ಶಿಫಾರಸ್ಸು ಸಂವಿಧಾನ ವಿರೋಧಿ. ಗೃಹಮಂತ್ರಿ ಪರಮೇಶ್ವರ್ ಆದಿ ದ್ರಾವಿಡ ಎಂದು ದಾಖಲಿಸಿದ್ದಾರೆ. ಹೊಲಯ ಸಮಾಜ ಒಳ ಮೀಸಲು ವಿರೋಧಿಸುತ್ತಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯ ಹಂಚಿಕೊಳ್ಳಬೇಕು ಎಂಬುದಕ್ಕೆ ಬದ್ಧರಾಗಿದ್ದೇವೆ ಎಂದರು.
ಗಾಂಧಿನಗರ ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಐಎಫ್ಎಸ್ ಅಧಿಕಾರಿ ಡಾ.ಆರ್. ರಾಜು, ಲೇಖಕ ಸಿ. ಹರಕುವಾರ್ ಮುಖ್ಯ ಭಾಷಣ ಮಾಡಿದರು. ಮಾಜಿ ಮೇಯರ್ ಪುರುಷೋತ್ತಮ್, ಪ.ಜಾತಿಗಳ ಒಳಮೀಸಲಾತಿ ಅನುಷ್ಠಾನ ಜಾಗೃತ ಸಮಿತಿ ಸಂಚಾಲಕ ಡಾ. ನವೀನ್ ಮನಿಯ, ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ ಶಿವಶಂಕರ್ ಇದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಎ.ಆರ್. ಕಾಂತರಾಜು ಸ್ವಾಗತಿಸಿದರು. ಅಮ್ಮ ರಾಮಚಂದ್ರ ಮತ್ತು ತಂಡದವರು ಅಂಬೇಡ್ಕರ್ ಮತ್ತು ಬುದ್ಧ ಗೀತೆಗಳನ್ನು ಹಾಡಿದರು.
ಮೈಸೂರು: ಹಿರಿಯ ಸಾಹಿತಿ ದೇವನೂರ ಮಹಾದೇವ ಅವರನ್ನು ಒಳ ಮೀಸಲಾತಿ ವಿಚಾರಕ್ಕೆ ಎಳೆದು ತೆಗೆಳುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಸಮುದಾಯ ತಿರುಗಿ ಬೀಳಲಿದೆ ಎಂದು ರಾಜ್ಯ ಎಸ್ಸಿ, ಎಸ್ಟಿ ನೌಕರರ ಸಂಘದ ಅಧ್ಯಕ್ಷ ಡಿ.ಚಂದ್ರಶೇಖರಯ್ಯ ಎಚ್ಚರಿಕೆ ನೀಡಿದರು.
ದೇವನೂರು ಮಹಾದೇವ ದಲಿತ ಸಮುದಾಯದ ಜೀವಂತ ಸಾಕ್ಷಿ. ಇದ್ದದ್ದನ್ನು ನೇರವಾಗಿ ಹೇಳುತ್ತಾರೆ. ನಿನಗೆ ತಾಕತ್ತಿದ್ದರೆ ಪುಸ್ತಕ ಬರೆದು ತೋರಿಸು. ಅವರು ಆರ್ಎಸ್ಎಸ್ ಆಳ-ಅಗಲ ಬರೆದಂತೆ ನೀನು ಬರೆ. ರಾಜಕೀಯ ಸೌಲಭ್ಯಕ್ಕಾಗಿ ದೇವನೂರ ಮಹಾದೇವ ಅವರನ್ನು ತೆಗಳುವುದನ್ನು ಗೋವಿಂದಯ್ಯ ನಿಲ್ಲಿಸಬೇಕು. ಇನ್ನೂ ಮುಂದೆ ದೇವನೂರ ಮಹಾದೇವ ವಿರುದ್ಧ ಮಾತನಾಡಿದರೇ ತಿರುಗಿ ಬೀಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.