ವಂಶಪರಂಪರೆ ಚುನಾವಣೆ ಕಾಂಗ್ರೆಸ್‌ ಮಾಡುತ್ತಿಲ್ಲವೇ: ಸಿಪಿವೈ

KannadaprabhaNewsNetwork | Published : Mar 16, 2024 1:51 AM

ಮಾಗಡಿ: ಸಂಸದ ಡಿ.ಕೆ.ಸುರೇಶ್ ದೇವೇಗೌಡರ ಕುಟುಂಬದವರೆ ಚುನಾವಣೆಗಳಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ ವಂಶಪರಂಪರೆ ಚುನಾವಣೆಯೆಂದು ಟೀಕಿಸಿದ್ದು, ಸುರೇಶ್ ಕುಟುಂಬದವರು ಮಾಡಿಲ್ಲವೇ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಸಂಸದರಿಗೆ ತಿರುಗೇಟು ನೀಡಿದರು.

ಮಾಗಡಿ: ಸಂಸದ ಡಿ.ಕೆ.ಸುರೇಶ್ ದೇವೇಗೌಡರ ಕುಟುಂಬದವರೆ ಚುನಾವಣೆಗಳಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ ವಂಶಪರಂಪರೆ ಚುನಾವಣೆಯೆಂದು ಟೀಕಿಸಿದ್ದು, ಸುರೇಶ್ ಕುಟುಂಬದವರು ಮಾಡಿಲ್ಲವೇ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಸಂಸದರಿಗೆ ತಿರುಗೇಟು ನೀಡಿದರು.

ಪಟ್ಟಣದಲ್ಲಿ ಬಿಜೆಪಿ ತಾಲೂಕು ಬೂತ್ ಸಂಚಾಲಕರು, ಪದಾಧಿಕಾರಿಗಳ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಎಸ್.ರವಿ, ಕುಣಿಗಲ್ ಶಾಸಕ ರಂಗನಾಥ್, ಇವರೆಲ್ಲಾ ಕುಟುಂಬದ ಸಂಬಂಧಿಕರಲ್ಲವಾ? ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುತ್ತಿದ್ದಾರೆಂದು ಪ್ರಶ್ನಿಸಿದ ಸಿಪಿವೈ, ಡಾ.ಮಂಜುನಾಥ್ ಉತ್ತಮ ಅಭ್ಯರ್ಥಿ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹೃದಯ, ಕಲ್ಲು ಭಾವಚಿತ್ರ ಹಾಕಿ ಯಾರನ್ನು ಆಯ್ಕೆ ಮಾಡುತ್ತೀರಾ ಎಂಬ ಪ್ರಚಾರಗಳು ಆರಂಭವಾಗಿವೆ. ಈ ಬಾರಿ ಉತ್ತಮ ವ್ಯಕ್ತಿ ಎನ್‌ಡಿಎ ಅಭ್ಯರ್ಥಿಯಾಗಿದ್ದಾರೆ. ತಾಲೂಕಿನಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮತಗಳು ಪ್ರತಿ ಪಕ್ಷದ ಮತಗಳಿಗಿಂತ ಹೆಚ್ಚಿವೆ. ವಾರದೊಳಗೆ ಮಾಜಿ ಶಾಸಕ ಎ.ಮಂಜುನಾಥ್ ನೇತೃತ್ವದಲ್ಲಿ ಎರಡೂ ಪಕ್ಷಗಳ ಜಂಟಿ ಸಭೆ ಮಾಡಲಾಗುತ್ತದೆ, ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸೋಣ ಎಂದು ತಿಳಿಸಿದರು.

ರಾಮನಗರ ಶಾಸಕರಿಗೆ ತಿರುಗೇಟು:

ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಸಿ.ಪಿ.ಯೋಗೇಶ್ವರ್ ಸ್ಪರ್ಧೆ ಮಾಡದೆ ಬೇರೆ ಅಭ್ಯರ್ಥಿಯನ್ನು ನಿಲ್ಲಿಸಿದ್ದಾರೆ. ಇವರಿಗೆ ಗಂಡಸ್ತನ ಇಲ್ಲವಾ ಎಂಬ ಕೀಳು ಹೇಳಿಕೆ ಕೊಟ್ಟಿರುವವರ ನಡವಳಿಕೆಯನ್ನು ಜನರು ನೋಡುತ್ತಿದ್ದಾರೆ. ನಾವಾದರೂ ಪುರುಷ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ, ದೇವೇಗೌಡರ ವಿರುದ್ಧ ಮಹಿಳೆಯನ್ನು ನಿಲ್ಲಿಸಿರುವುದನ್ನು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಮರೆತಿದ್ದಾರಾ ಎಂದು ಅವರ ಹೇಳಿಕೆಗೆ ತಿರುಗೇಟು ನೀಡಿದರು.

ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ ಮಾತನಾಡಿ, ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡುವ ನಿಟ್ಟಿನಲ್ಲಿ ಡಾ.ಮಂಜುನಾಥ್ ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿ ಮೋದಿಯವರ ಕೈ ಬಲಪಡಿಸಬೇಕಿದೆ ಎಂದು ಮನವಿ ಮಾಡಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಗೋಪಿನಾಥ್ ರೆಡ್ಡಿ, ಕೇಶವ ಪ್ರಸಾದ್, ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಪ್ರಧಾನ ಕಾರ್ಯಕದರ್ಶಿ ರಾಘವೇಂದ್ರ, ತಾಲೂಕು ಅಧ್ಯಕ್ಷ ವೀರಭದ್ರಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್, ಸಂದೀಪ್, ಯುವ ಮುಖಂಡರಾದ ಪ್ರಸಾದ್ ಗೌಡ, ರಾಜೇಶ್, ಹನುಮಂತೇಗೌಡ ಇತರರು ಭಾಗವಹಿಸಿದ್ದರು.

ಫೋಟೊ 15ಮಾಗಡಿ1 :

ಮಾಗಡಿಯಲ್ಲಿ ಬಿಜೆಪಿ ತಾಲೂಕು ಬೂತ್ ಸಂಚಾಲಕರು, ಪದಾಧಿಕಾರಿಗಳ ಪೂರ್ವಭಾವಿ ಸಭೆಯನ್ನು ವಿಧಾನ ಪರಿಷತ್‌ ಸದಸ್ಯ ಯೋಗೇಶ್ವರ್ ಉದ್ಘಾಟಿಸಿದರು.