ಕನ್ನಡಪ್ರಭ ವಾರ್ತೆ ಚಾಮರಾಜನಗರ
ಭಾನುವಾರದಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ವಾರ್ಡ್ ನ ಮನೆಗಳಿಗೆ ಭೇಟಿ ಕೊಟ್ಟು ಕಲುಷಿತ ನೀರು ಪೂರೈಕೆ ಬಗ್ಗೆ ಮಾಹಿತಿ ಪಡೆದು ನಗರಸಭೆ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ ನೀರು ಪೂರೈಕೆಯಲ್ಲಿ ಬದಲಾವಣೆ ಆಗಿಲ್ಲ.
ವಾರ್ಡ್ ನ ನಿವಾಸಿ ಅಶ್ವಿನಿ ಎಂಬವರು ಮಾತನಾಡಿ, ನಾವು 1 ವಾರಗಳಿಂದ ಟ್ಯಾಂಕರ್ ನೀರು ತೀರಿಸಿಕೊಳ್ಳುತ್ತಿದ್ದೇವೆ, ಆ ನೀರಿನಲ್ಲಿ ಮಕ್ಕಳಿಗೆ ಸ್ನಾನ ಮಾಡಿಸಿದರೇ ಸೋಂಕು ಅಂಟುತ್ತಿದೆ, ಕಾವೇರಿ ನೀರಿಗೆ ಚರಂಡಿ ನೀರು ಮಿಶ್ರಣಗೊಂಡು ಈ ಅವಾಂತರ ಸೃಷ್ಟಿಯಾಗಿದೆ, ನಗರಸಭೆಗೆ ಎಷ್ಟೇ ಬಾರಿ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು. ಆದರೆ ಹಣ ಇಲ್ಲದವರು ಟ್ಯಾಂಕರ್ ನೀರು ಪಡೆಯಲು ಹಣ ಹೊಂದಿಸಲಾಗಿದೆ ಕೈ ಚಲ್ಲಿ ಕುಳಿತಿರುವುದು ಸಹ ನಾಗರಿಕರ ಬೇಸರ ಕಾರಣವಾಗಿದೆ.ಕಾಲರಾ ಭೀತಿ ಆವರಿಸುತ್ತಿರುವ ಹೊತ್ತಿನಲ್ಲಿ 1 ವಾರದಿಂದ ಕಲುಷಿತ ನೀರು ಪೂರೈಕೆ ಮಾಡುತ್ತಿರುವುದು ನಗರಸಭೆ ಸಿಬ್ಬಂದಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಈ ಕೂಡಲೇ ಪೈಪ್ ಲೈನ್ ದುರಸ್ತಿಪಡಿಸಿ ಸಮರ್ಪಕ ನೀರು ಪೂರೈಕೆ ಮಾಡಬೇಕು ಎಂದು ನಿವಾಸಿಗಳಾದ ಜಯಕುಮಾರ್, ರೂಪಾ ಒತ್ತಾಯಿಸಿದರು.