ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಹಗಲು ಮನೆ ಧರೋಡೆ: ಇಬ್ಬರು ಆರೋಪಿಗಳ ಬಂಧನ

KannadaprabhaNewsNetwork | Published : Jun 8, 2025 3:25 AM

ಹಗಲು ಮನೆ ಧರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕಾಕ ಗ್ರಾಮೀಣ ಪೊಲೀಸ್‌ ಠಾಣೆಯ ಸಿಬ್ಬಂದಿ ಇಬ್ಬರು ಕಳ್ಳರನ್ನು ಬಂಧಿಸಿ ಅವರಿಂದ ಸುಮಾರು ₹7.30 ಲಕ್ಷ ಮೌಲ್ಯದ ಆಭರಣ, ವಾಹನಗಳು ಮತ್ತು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಗೋಕಾಕ

ಹಗಲು ಮನೆ ಧರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕಾಕ ಗ್ರಾಮೀಣ ಪೊಲೀಸ್‌ ಠಾಣೆಯ ಸಿಬ್ಬಂದಿ ಇಬ್ಬರು ಕಳ್ಳರನ್ನು ಬಂಧಿಸಿ ಅವರಿಂದ ಸುಮಾರು ₹7.30 ಲಕ್ಷ ಮೌಲ್ಯದ ಆಭರಣ, ವಾಹನಗಳು ಮತ್ತು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಬೈಲಹೊಂಗಲ ತಾಲೂಕಿನ ಮೊಹರೆಯ ರಾಮಚಂದ್ರ ಉರ್ಫ ರಾಮಸಿದ್ದ ಫಕೀರಪ್ಪ ತಳವಾರ (19), ಕೊಳ್ಳಾನಟ್ಟಿಯ ನಾಗರಾಜ ಶಿವಲಿಂಗ ಮ್ಯಾಗೇರಿ (21) ಬಂಧಿತ ಆರೋಪಿಗಳು.ಪ್ರಕರಣದ ಪತ್ತೆಗಾಗಿ ಸಿಪಿಐ ಸುರೇಶ ಬಾಬು ನೇತೃತ್ವದಲ್ಲಿ ತಂಡವನ್ನು ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ ರಚಿಸಿ ಕಾರ್ಯಾಚರಣೆ ಮಾಡಿದ್ದರು. 2025ರ ಏ.29 ರಂದು ಬೆಳಗ್ಗೆ 11.30 ರಿಂದ 12.30ರ ಸಮಯದಲ್ಲಿ ತಾಲೂಕಿನ ಮಿಡಕನಹಟ್ಟಿ ಗ್ರಾಮದ ನಿವಾಸಿ ಮಹಾದೇವ ಪಂಡಪ್ಪ ಸವಸುದ್ದಿ ಎಂಬುವರ ಮನೆಯ ಬೀಗದ ಕೀ ಒಡೆದು ಮನೆಯ ಒಳನುಗ್ಗಿ ಟ್ರೇಜರಿಯ ಬಾಗಿಲನ್ನು ಮುರಿದು ಅದರಲ್ಲಿದ್ದ ಸುಮಾರು 150 ಗ್ರಾಂ ತೂಕದ ₹9.75 ಲಕ್ಷ ಮೌಲ್ಯದ ಬಂಗಾರ ಆಭರಣಗಳು ಮತ್ತು ₹20 ಸಾವಿರ ನಗದು ಹಣ ಕಳವು ಮಾಡಿದ್ದರು. ಬಂಧಿತರಿಂದ ₹5.20 ಲಕ್ಷ ಮೌಲ್ಯದ ಒಂದು ಬಂಗಾರದ ನೆಕ್ಲೆಸ್‌, 2 ಬಂಗಾರದ ಚೈನ್‌ಗಳು, 2 ಬಂಗಾರ ಬಳೆಗಳು ಹಾಗೂ ಆಭರಣ ಮಾರಾಟ ಮಾಡಿ ಪಡೆದಿದ್ದ ₹1.50 ಲಕ್ಷ ನಗದು ಹಣ, ₹50 ಸಾವಿರ ಮೌಲ್ಯದ ಒಂದು ಬೈಕ್, 2 ಮೊಬೈಲ್ ಸೇರಿ ಒಟ್ಟು ₹7.30ಲಕ್ಷ ಮೌಲ್ಯದ ಆಭರಣಗಳು ಹಾಗೂ ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಪ್ರಕರಣದಲ್ಲಿ ಕಳ್ಳರನ್ನು ಬಂಧಿಸಲು ಯಶಸ್ವಿಯಾದ ಸಿಪಿಐ ಸುರೇಶ ಬಾಬು, ಪಿಎಸೈಗಳಾದ ಕಿರಣ ಮೊಹಿತೆ, ಎಲ್.ಎಲ್.ಪತ್ತೆನ್ನವರ, ಸಿಬ್ಬಂದಿಯರಾದ ಬಿ.ವಿ.ನೆರ್ಲಿ, ಕುಮಾರ ಪವಾರ, ಜಗದೀಶ ಗುಡ್ಲಿ, ಮಾರುತಿ ಪಡದಲ್ಲಿ, ಆರ್.ಕೆ.ಉದಪುಡಿ, ಡಿ.ಜಿ.ಕೊಣ್ಣೂರ, ಎನ್.ಎಲ್.ಮಂಗಿ, ಡಿ.ಬಿ.ಅಂತರಗಟ್ಟಿ, ಎಂ.ಬಿ.ನಾಯಿಕವಾಡಿ, ಎಚ್.ಡಿ.ಗೌಡಿ, ವಿ.ಎಲ್.ನಾಯ್ಕವಾಡಿ, ವಿಠಲ ಖೋತ್, ಎನ್.ಜಿ.ದುರದುಂಡಿ, ಎಸ್.ಬಿ.ಮಾನೆಪ್ಪಗೋಳ, ಶಿವಾನಂದ ಕಲ್ಲೋಳಿ, ಪಿ.ಎಸ್.ಕಾಡಗಿ ಹಾಗೂ ಬೆಳಗಾವಿಯ ಟೆಕ್ನಿಕಲ್ ಸೆಲ್‌ನ ಸಚಿನ ಪಾಟೀಲ ಮತ್ತು ವಿನೋದ ಠಕ್ಕನ್ನವರ ಕಾರ್ಯವನ್ನು ಎಸ್ಪಿ ಡಾ.ಭೀಮಾಶಂಕರ ಗುಳೇದ, ಹೆಚ್ಚುವರಿ ಎಸ್ಪಿಗಳಾದ ಶೃತಿ ಎನ್.ಎಸ್, ರಾಮಗೊಂಡ ಬಿ.ಬಸರಗಿ, ಡಿವೈಎಸ್ಪಿ ರವಿ ನಾಯಿಕ ಅಭಿನಂದಿಸಿದ್ದಾರೆ.