ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ 93 ಜನರಿಗೆ ಧೀಮಂತ ಪ್ರಶಸ್ತಿ

KannadaprabhaNewsNetwork |  
Published : Nov 11, 2024, 11:51 PM IST
56465 | Kannada Prabha

ಸಾರಾಂಶ

ಶಾಸಕರು, ಪಾಲಿಕೆ ಸದಸ್ಯರು, ಗಣ್ಯರು ಸೇರಿದಂತೆ ನಾನಾ ವಲಯಗಳ ಲಾಬಿ ಒತ್ತಡಗಳಿಂದ ಬರೋಬ್ಬರಿ 93 ಜನರಿಗೆ ಪ್ರಶಸ್ತಿ ಲಭಿಸಿದಂತಾಗಿದೆ. ಕಳೆದ ವರ್ಷ 68 ಜನರಿಗೆ ಸಾಧಕರಿಗೆ ಪ್ರಶಸ್ತಿ ನೀಡಲಾಗಿತ್ತು. ಈ ವರ್ಷ 69 ಜನರಿಗೆ ಕೊಡಲಾಗುತ್ತಿದೆ.

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯೂ ರಾಜ್ಯೋತ್ಸವದಂಗವಾಗಿ ಕೊಡಮಾಡುವ ಧೀಮಂತ ಪ್ರಶಸ್ತಿ ಬಿಡುಗಡೆಯಾಗಿದ್ದು, ನ. 12ರಂದು ಇಂದಿರಾಗ್ಲಾಸ್‌ ಹೌಸ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ನಡೆಯಲಿದೆ.

ಶಾಸಕರು, ಪಾಲಿಕೆ ಸದಸ್ಯರು, ಗಣ್ಯರು ಸೇರಿದಂತೆ ನಾನಾ ವಲಯಗಳ ಲಾಬಿ ಒತ್ತಡಗಳಿಂದ ಬರೋಬ್ಬರಿ 93 ಜನರಿಗೆ ಪ್ರಶಸ್ತಿ ಲಭಿಸಿದಂತಾಗಿದೆ. ಕಳೆದ ವರ್ಷ 68 ಜನರಿಗೆ ಸಾಧಕರಿಗೆ ಪ್ರಶಸ್ತಿ ನೀಡಲಾಗಿತ್ತು. ಈ ವರ್ಷ 69 ಜನರಿಗೆ ಕೊಡಲಾಗುವುದು ಎಂದು ಪಾಲಿಕೆ ಮೇಯರ್‌ ರಾಮಣ್ಣ ಬಡಿಗೇರ ತಿಳಿಸಿದ್ದರು. ಆದರೆ ಬಿಡುಗಡೆಯಾದ ಪಟ್ಟಿಯಲ್ಲಿ 22 ಕ್ಷೇತ್ರದ 93 ಜನರಿಗೆ ಪ್ರಶಸ್ತಿ ಲಭಿಸಿರುವುದು ಒತ್ತಡಕ್ಕೆ ಸಾಕ್ಷಿಯಾದಂತಾಗಿದೆ.

ಸುವರ್ಣ ನ್ಯೂಸ್‌ನ ವರದಿಗಾರ ಗುರುರಾಜ ಹೂಗಾರ, ಪತ್ರಕರ್ತರಾದ ಅಬ್ಬಾಸ್‌ ಮುಲ್ಲಾ ಸೇರಿದಂತೆ 93 ಜನರಿಗೆ ಪ್ರಶಸ್ತಿ ನೀಡಲಾಗಿದೆ.

ವಿಶೇಷ ಸಾಧಕರ ವಿಭಾಗದಲ್ಲಿ 18, ಬಾಲ ಪ್ರೋತ್ಸಾಹ ವಿಭಾಗದಲ್ಲಿ 6, ಸೇವಾ ಕ್ಷೇತ್ರ-9, ಸಂಶೋಧನಾ ಕ್ಷೇತ್ರ-3, ಎನ್‌ಜಿಒ-2, ವಿಶೇಷ ಚೇತನ-1, ಪತ್ರಿಕೋದ್ಯಮ-9, ಯೋಗ ಕ್ಷೇತ್ರ-1, ಕೈಗಾರಿಕೆ-3, ಶಿಕ್ಷಣ ವಿಭಾಗ- 4, ಕೃಷಿ-2, ಹಸಿರು ಪರಿಸರ-1, ಜಾನಪದ-5, ಚಿತ್ರಕಲಾ-2, ಸಂಗೀತ-4, ತಾಂತ್ರಿಕ -3, ನೃತ್ಯ-3, ರಂಗ ಕ್ಷೇತ್ರ-3, ವೈದ್ಯಕೀಯ-7, ಕ್ರೀಡಾ-2, ಸಾಹಿತ್ಯ-3 ಹಾಗೂ ಪೌರಕಾರ್ಮಿಕ ವಿಭಾಗದಲ್ಲಿ ಇಬ್ಬರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿನಾಯಕ ದೇಶಪಾಂಡೆ, ಪ್ರಸನ್ನ ಕರ್ಪೂರ, ನರಸಿಂಹ ಪ್ಯಾಟಿ, ಆನಂದಕುಮಾರ ಅಂಗಡಿ, ಶಿವಶಂಕರ ಕಂಠಿ, ಮಿಲಿಂದ ಪಿಸೆ, ಶಿವಾಜಿ ಲಾತೋಕರ ಅವರು ಆಯ್ಕೆಯಾಗಿದ್ದಾರೆ.

ಪಾಲಿಕೆ ಮೇಯರ್‌ ರಾಮಣ್ಣ ಬಡಿಗೇರ ಅಧ್ಯಕ್ಷತೆಯಲ್ಲಿ ಈ ಆಯ್ಕೆ ನಡೆದಿದ್ದು, ಸನ್ಮಾನ ಸಮಿತಿಯ ಸದಸ್ಯರಾಗಿ ಉಪ ಮೇಯರ್‌ ದುರ್ಗಮ್ಮ ಬಿಜವಾಡ, ಪ್ರತಿಪಕ್ಷದ ನಾಯಕ ರಾಜಶೇಖರ ಕಮತಿ, ಪಾಲಿಕೆ ಸದಸ್ಯ ಶಿವು ಹಿರೇಮಠ, ಸಂತೋಷ ಚವ್ಹಾಣ, ದೀಪಾ ನೀರಲಕಟ್ಟಿ, ನಜೀರ ಅಹ್ಮದ್‌ ಹೊನ್ಯಾಳ ಹಾಗೂ ಪಾಲಿಕೆ ಆರೋಗ್ಯ ಅಧಿಕಾರಿ ಡಾ. ಶ್ರೀಧರ ದಂಡಪ್ಪನವರ ಸದಸ್ಯ ಕಾರ್ಯದರ್ಶಿಯಾಗಿ ಸಮಿತಿಯಲ್ಲಿದ್ದರು ಎಂದು ಪ್ರಕಟಣೆ ತಿಳಿಸಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ