ಬಿಜೆಪಿಯಿಂದ ಮತ್ತೊಮ್ಮೆ ಮೋದಿ 2024 ಗೋಡೆ ಬರಹ ಕಾರ್ಯಕ್ರಮಕ್ಕೆ ಚಾಲನೆ

KannadaprabhaNewsNetwork |  
Published : Feb 14, 2024, 02:20 AM IST
64 | Kannada Prabha

ಸಾರಾಂಶ

ನರೇಂದ್ರ ಮೋದಿ ಅವರ ಆಡಳಿತ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳಾಗಿದ್ದು, ಅದೆಲ್ಲವೂ ಕೂಡ ಪ್ರತಿ ಜಿಲ್ಲೆ, ಪ್ರತಿ ತಾಲೂಕಿನ, ಪ್ರತಿ ಪಂಚಾಯಿತಿಗಳಿಗೂ ತಲುಪುವ ನಿಟ್ಟಿನಲ್ಲಿ ಕೆಲಸಗಳಾಗಿದ್ದು, ಅಭಿವೃದ್ಧಿ ಕೆಲಸಗಳ ಅನುದಾನಗಳು ನೇರವಾಗಿ ತಲುಪಿ ಕಾರ್ಯವೃದ್ದಿಯಾಗಿರುವುದನ್ನು ನೋಡಬಹದಾಗಿದೆ

ಕನ್ನಡಪ್ರಭ ವಾರ್ತೆ ಹುಣಸೂರು

ಪಟ್ಟಣ ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಮೋದಿ 2024 ಗೋಡೆ ಬರಹವನ್ನು ಕ್ಷೇತ್ರ ವ್ಯಾಪ್ತಿಯ ಬಿಳಿಕೆರೆ, ಬನ್ನಿಕುಪ್ಪೆ, ಬೀಜಕನಹಳ್ಳಿ, ಹುಣಸೂರು ಪಟ್ಟಣದಲ್ಲಿ ಗೋಡೆ ಬರಹ ಹಾಗೂ ಗ್ರಾಮ ಛಲೋ ಅಭಿಯಾನಕ್ಕೆ.

ಜಿಲ್ಲಾ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಚಾಲನೆ ನೀಡಿದರು.

ನಂತರ ಅವರು ಮಾತನಾಡಿ, ನರೇಂದ್ರ ಮೋದಿ ಅವರ ಆಡಳಿತ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳಾಗಿದ್ದು, ಅದೆಲ್ಲವೂ ಕೂಡ ಪ್ರತಿ ಜಿಲ್ಲೆ, ಪ್ರತಿ ತಾಲೂಕಿನ, ಪ್ರತಿ ಪಂಚಾಯಿತಿಗಳಿಗೂ ತಲುಪುವ ನಿಟ್ಟಿನಲ್ಲಿ ಕೆಲಸಗಳಾಗಿದ್ದು, ಅಭಿವೃದ್ಧಿ ಕೆಲಸಗಳ ಅನುದಾನಗಳು ನೇರವಾಗಿ ತಲುಪಿ ಕಾರ್ಯವೃದ್ದಿಯಾಗಿರುವುದನ್ನು ನೋಡಬಹದಾಗಿದೆಎಂದು ತಿಳಿಸಿದರು.

ಪ್ರಧಾನಮಂತ್ರಿಗಳವರ ಅಭಿವೃದ್ಧಿ ಸಂಕೇತದ ಯೋಜನೆಗಳಾದ ಸಂಧ್ಯಾ ಸುರಕ್ಷ ಯೋಜನೆ, ಫಸಲ್ ಭೀಮ್ ಯೋಜನೆ, ಜಲಜೀವನ್ ಮಿಷನ್ ಯೋಜನೆ, ಮುದ್ರಾ ಯೋಜನೆ, ಸಂಸದ್ ಆದರ್ಶ್ ಗ್ರಾಮ ಯೋಜನೆ, ಪ್ರಧಾನ್ ಮಂತ್ರಿ ಉಜ್ವಲ ಯೋಜನೆ, ಇನ್ನೂ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಮಂತ್ರಿಗಳು ಜಾರಿಗೆ ತಂದಿದ್ದು, ಅದೆಲ್ಲವೂ ದೇಶದಲ್ಲಿ ಪ್ರಸ್ತುತ ಮಾನವ ಸಂಪನ್ಮೂಲ ಯಂತ್ರಗಳಾಗಿ ಕಾರ್ಯ ನಿರ್ವಹಿಸುತ್ತಿವೆ.

ಇಷ್ಟೇ ಅಲ್ಲದೇ ಭಾರತದ ಸಂವಿಧಾನದ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಜನಿಸಿದ ಸ್ಥಳ, ಶಿಕ್ಷಣ ಮಾಡಿದ ಸ್ಥಳ, ಇವುಗಳನ್ನು ಪಂಚ ತೀರ್ಥ ಸ್ಥಳವನ್ನಾಗಿಸಿ ಅಭಿವೃದ್ಧಿ ಗೊಳಿಸಿ ಬಾಬಾ ಸಾಹೇಬರಿಗೆ ಗೌರವ ಸಲ್ಲಿಸಿರುವುದು ದೇಶಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ತಿಳಿಸಿದರು.

ಮಂಡಲ ಅಧ್ಯಕ್ಷರಾದ ನಾಗಣ್ಣಗೌಡ, ಗಣೇಶ್, ಕುಮಾರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್ ಜೈ ರಾಮೇಗೌಡ, ಖಜಾಂಚಿಯಾದ ಆರ್. ಚಂದ್ರಶೇಖರ್, ಕಾರ್ಯಾಲಯ ಕಾರ್ಯದರ್ಶಿ ಪಾಪಣ್ಣ, ರಮೇಶ್ ಕುಮಾರ್, ನಾಗರಾಜ್ ಮಾಲ್ಲಾಡಿ, ಮಂಜುನಾಥ, ಸೋಮಶೇಖರ್, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಕಾಂತರಾಜು ,ರವಿಕುಮಾರ್, ರವಿಶಂಕರ್ , ವೆಂಕಟಮ್ಮ, ಮಂಜುಳಮ್ಮ, ವೆಂಕಟೇಶ್, ಯೋಗೇಶ್, ಅಣ್ಣಯ್ಯಚಾರಿ, ನಾಗರಾಜಪ್ಪ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ತರ
ತ್ಯಾಜ್ಯ ವಿಲೇವಾರಿ ಘಟಕ ತೆರವಿಗೆ ಆಗ್ರಹ