- ಹೊನ್ನಾಳಿಯಲ್ಲಿ ವೈದ್ಯರ ದಿನ ಕಾರ್ಯಕ್ರಮದಲ್ಲಿ ಡಾ. ಎಚ್.ಪಿ. ರಾಜ್ಕುಮಾರ್ ಸಲಹೆ- - -
ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವೃತ್ತಿ ವ್ಯಾಪಾರ ಆಗುತ್ತಿರುವುದು ಬೇಸರದ ಸಂಗತಿ. ಆದರೆ ಅದರ ಉದ್ದೇಶ ವ್ಯಾಪಾರ ಮಾಡುವುದವಲ್ಲ, ಸೇವೆ ಮಾಡುವುದಾಗಿದೆ. ಆದ್ದರಿಂದ ವೈದ್ಯರೆಲ್ಲರೂ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾ. ಬಿ.ಸಿ ರಾಯ್ ಅವರ ಉದ್ದೇಶ, ಸೇವೆ ವೈಖರಿಯನ್ನು ಮಾದರಿಯಾಗಿ ಇಟ್ಟುಕೊಳ್ಳಬೇಕು. ಅವರು ಮುಖ್ಯಮಂತ್ರಿಯಾಗಿದ್ದರೂ, ತೋರಿದ ಸೇವಾ ಮನೋಭಾವ ಇಂದಿಗೂ ಪ್ರಸ್ತುತ ಎಂದು ಭಾರತೀಯ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಡಾ. ಎಚ್.ಪಿ. ರಾಜ್ಕುಮಾರ್ ಅಭಿಪ್ರಾಯಪಟ್ಟರು.
ಪಟ್ಟಣದ ಭಾರತೀಯ ವಿದ್ಯಾಸಂಸ್ಥೆಯಲ್ಲಿ ವೈದ್ಯರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊನ್ನಾಳಿ ತಾಲೂಕಿನ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿ, ಹಳ್ಳಿಯಲ್ಲಿ ಓದಿ, ಹಳ್ಳೂರು ಡಾಕ್ಟರ್ ಎಂದೇ ಖ್ಯಾತಿ ಪಡೆದ ಡಾ. ಚಿದಾನಂದ್ ಅವರ ಸೇವೆ ಶ್ಲಾಘನೀಯವಾಗಿದೆ. ಕೊರೋನಾ ಹಾವಳಿ ಸಂದರ್ಭ ಬಹಳಷ್ಟು ವೈದ್ಯರು ತಾವೇ ಕೊರೋನಾಕ್ಕೆ ತುತ್ತಾಗುವ ಅಪಾಯವಿದ್ದರೂ, ಅದನ್ನು ಲೆಕ್ಕಿಸದೇ ಹಲವರ ಪ್ರಾಣ ಉಳಿಸಿ ದೇವರಾಗಿದ್ದಾರೆ ಎಂದರು.ಹಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಎಲ್.ಚಿದಾನಂದ್ ಮಾತನಾಡಿ, ಇಂದು ಶುಗರ್, ಬಿ.ಪಿ. ಸಮಸ್ಯೆ ಜನರಲ್ಲಿ ಹೆಚ್ಚಿನದಾಗಿ ಕಾಣಿಸಿಕೊಳ್ಳುತ್ತಿದೆ. ಇವುಗಳನ್ನು ಹತೋಟಿಯಲ್ಲಿಡಲು ಒಳ್ಳೆಯ ಆಹಾರ ಸೇವಿಸಬೇಕು. ಸಮತೋಲನ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವುದು ಅತಿ ಮುಖ್ಯ ಎಂದರು.
ಹೊನ್ನಾಳಿಯ ದಂತವೈದ್ಯ ಕುರುವ ಮಂಜುನಾಥ್ ಮಾತನಾಡಿ, ಹಲ್ಲುಗಳ ಆರೋಗ್ಯವು ಮುಖ್ಯವಾದದ್ದು. ಇಂದು ಚಾಕಲೇಟ್ ಹಾಗೂ ಸಿಹಿ ಪದಾರ್ಥಗಳನ್ನು ತಿನ್ನುವುದರಿಂದ ಹಲ್ಲುಗಳು ಹಾಳಾಗುತ್ತಿವೆ. ದಿನಕ್ಕೆ ಎರಡು ಸಲ ಬ್ರಷ್ ಮಾಡಬೇಕು. ರಾತ್ರಿ ಹಲ್ಲುಜ್ಜುವುದು ಬಹಳ ಮುಖ್ಯ. ಸಿಹಿ ತಿಂದಾಗ ಬಾಯಿ ಮುಕ್ಕುಳಿಸಿ ಹಲ್ಲಿನ ಸ್ವಾಸ್ಥ್ಯ ಕಾಪಾಡಿಕೊಳ್ಳಬೇಕು ಎಂದರು. ಹಳ್ಳೂರಿನ ವೈದ್ಯ ಎಲ್. ಚಿದಾನಂದ್ ಅವರನ್ನು ಭಾರತೀಯ ವಿದ್ಯಾ ಸಂಸ್ಥೆ, ಹೊನ್ನಾಳಿಯ ಔಷಧಿ ವರ್ತಕರ ಸಂಘ ಹಾಗೂ ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಸನ್ಮಾನಿಸಲಾಯಿತು.
- - -
- - - -8ಎಚ್.ಎಲ್.ಐ1: