ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಜಯಲಕ್ಷ್ಮೀಪುರಂನಲ್ಲಿರುವ ಮಹಾಜನ ಪದವಿ ಪೂರ್ವ ಕಾಲೇಜಿನ ವಿವೇಕಾನಂದ ಸಭಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ಮೈಸೂರು ಜಿಲ್ಲಾ ಕನ್ನಡ ಉಪನ್ಯಾಸಕರ ವೇದಿಕೆಯು ಶುಕ್ರವಾರ ಆಯೋಜಿಸಿದ್ದ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿದ ಅವರು, ಕನ್ನಡ ರಾಷ್ಟ್ರೀಯತೆ: ಇಂದಿನ ಸವಾಲುಗಳು ಕುರಿತು ವಿಶೇಷ ಉಪನ್ಯಾಸ ನೀಡಿದರು.
ಭಾಷೆ ಎಂಬುದು ಬದುಕು, ಅನುಭವದ ಸಾರ, ವಿವೇಕದ ಮೊತ್ತ, ಒಟ್ಟಾರೆ ಹೇಳುವುದಾದರೆ ಜನಜೀವನದ ಸಾರಾಂಶ. ಭಾಷೆಯನ್ನು ಬಳಸುವಾಗ ನಮ್ಮಲ್ಲಿ ಕೀಳಿರಿಮೆ ಭಾವನೆ ಬರಬಾರದು. ಭಾಷೆ ಮನುಷ್ಯನಿಗೆ ವ್ಯವಹಾರಿಕವಾಗಿ ಅನಿವಾರ್ಯ, ಅಗತ್ಯ. ಅಂದರೆ ಶ್ರೇಷ್ಠತೆ ಮತ್ತು ಘನತೆ ಎಂಬುದಲ್ಲ ನಮ್ಮ ನಮ್ಮ ಅನುಕೂಲ, ಅಂತಸ್ತಿಗಾಗಿ ಭಾಷೆಯಲ್ಲಿ ಪೈಪೋಟಿಯೊಂದಿಗೆ ಕೀಳಿರಿಮೆಯಿಂದ ಭಾವಿಸುವುದು ಎಂದಿಗೂ ಸಲ್ಲದು. ಭಾಷೆ ಎಂಬುದನ್ನು ಬಳಸಿದಾಗ ಸಾಂಸ್ಕೃತಿಕ ವಿಶ್ವಾಸ ಹೆಚ್ಚುವುದರ ಜೊತೆಗೆ ಅದರ ಮಹತ್ವ ಹೆಚ್ಚುತ್ತದೆ ಹಾಗೂ ಪೂರ್ವ ಪರಂಪರೆ ತಿಳಿಯುತ್ತದೆ ಎಂದು ಅವರು ಹೇಳಿದರು.ಕರ್ನಾಟಕದ ಪರಿಕಲ್ಪನೆಯೂ ಜನರಲ್ಲಿ ಮೂಡಿಬಂದ ಭಾವನೆ ಎಂಬುದನ್ನು ನಾವು ಮರೆಯುವಂತಿಲ್ಲ. ಭಾಷೆಯಲ್ಲಿ ಸಹಜತೆ ಇದೆ, ಉತ್ಪಾದನಾಂಶವಿದೆ, ಸಹಜವಾದ ವ್ಯವಹಾರಿಕ ಸಂಬಂಧದಿಂದ ಕನ್ನಡ ಭಾಷೆ ಎಲ್ಲರಿಗೂ ಹೃದಯದ ಭಾಷೆಯಾಗಿ ಮೂಡಿ ಬಂದಿದೆ. ಅಖಿಲ ಭಾರತದ ನಾಯಕರು ಮೊದಲು ಆಯಾಯ ಪ್ರದೇಶದ ಪ್ರಾದೇಶಿಕ ಭಾಷೆಯ ನೆಲ, ಜಲ, ಸಂಸ್ಕೃತಿಯಿಂದ ಅರಿತು ಬಂದವರೇ ಆಗಿರುತ್ತಾರೆ ಹೊರತು ದಿಢೀರ್ ನಾಯಕರಾಗಲು ಎಂದಿಗೂ ಸಾಧ್ಯವಾಗಲಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ. ಮರಿಸ್ವಾಮಿ ಮಾತನಾಡಿ, ಫಲಿತಾಂಶಕ್ಕೆ ಪೂರಕವಾಗಿ ಇಂತಹ ಪುನಶ್ಚೇತನ ಕಾರ್ಯಾಗಾರ ಅಗತ್ಯತೆ ಇದೆ. ಇದರ ಅನುಕೂಲವನ್ನು ಎಲ್ಲಾ ಉಪನ್ಯಾಸಕರು ಭಾಗವಹಿಸಿ ವಿಚಾರಗಳನ್ನು ತಿಳಿದುಕೊಂಡು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಬೋಧಿಸಿ, ಫಲಿತಾಂಶವನ್ನು ಉತ್ತಮ ಪಡಿಸಬೇಕು ಎಂದು ತಿಳಿಸಿದರು.
----
ಪ್ರತಿ ಭಾಷೆಯಲ್ಲೂ 60 ಕಿ.ಮೀ ಅಂತರದಲ್ಲಿ ಭಾಷಾ ಬಳಕೆಯಲ್ಲಿ ಮತ್ತು ಉಚ್ಛಾರಣೆಯಲ್ಲಿ ವ್ಯತ್ಯಾಸ ಕಾಣುತ್ತೆವೆಯೇ ಹೊರತು ಅರ್ಥ ವ್ಯತ್ಯಾಸದಿಂದಲ್ಲ. ಭಾಷೆ ನಿಂತ ನೀರಾಗದೆ ಹರಿಯುವ ನದಿಯಂತೆ ಸದಾ ಕಾಲ ಬಳಸಿದಾಗ ಜೀವಂತವಾಗಿ ಉಳಿಯುತ್ತದೆ. ಇಂದಿನ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ.