ಸರ್ ಎಂ. ವಿಶ್ವೇಶ್ವರಯ್ಯಜೀವನ ಮತ್ತು ಸಾಧನೆಗಳ ದಾಖಲು- ಡಾ.ಸುಮಿತ್ರಾ ಅವರಿಂದ ಎರಡು ಕೃತಿಗಳು ಪ್ರಕಟ

KannadaprabhaNewsNetwork | Published : Mar 25, 2024 12:51 AM

ಸಾರಾಂಶ

ಚಿಕ್ಕಬಳ್ಳಾಪುರ ಬಳಿಯ ಮುದ್ದೇನಹಳ್ಳಿಯಲ್ಲಿ ವಾಸ್ತವ್ಯ. ಶ್ರೀನಿವಾಸ ಶಾಸ್ತ್ರಿ- ವೆಂಕಟಲಕ್ಷ್ಮಮ್ಮ ಅವರ ಪುತ್ರ. ಜನನ 1860, ಆ. 27. 15 ವರ್ಷ ಇದ್ದಾಗ ತಂದೆ ನಿಧನ. ಎಚ್. ರಾಮಯ್ಯ ಪೋಷಕರು, ಬೆಂಗಳೂರು ಸೆಂಟಲ್ ಕಾಲೇಜಿನಲ್ಲಿ ಪದವಿ, ನಾದಲ್ಲಿ ಎಂಜಿನಿಯರ್ ಪದವಿ, 1884 ರಲ್ಲಿ ಬ್ರಿಟಿಷ್ ಸೇವೆ ಸೇರ್ಪಡೆ- ಅಸಿಸ್ಟೆಂಟ್ ಎಂಜಿನಿಯರ್, ಬಾಂಬೆ ಗೌರ್ನಮೆಂಟ್, 1909 ರಲ್ಲಿ ನಿವೃತ್ತಿ

ಕನ್ನಡಪ್ರಭ ವಾರ್ತೆ ಮೈಸೂರು

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸುಮಿತ್ರಾ ಅವರು ಸರ್ ಎಂ. ವಿಶ್ವೇಶ್ವರಯ್ಯ ಅವರ ಜೀವನ ಮತ್ತು ಸಾಧನೆಗಳು- ಆಂಗ್ಲ, ಮಳವಳ್ಳಿಯ ಇತಿಹಾಸ ಮತ್ತು ಸಂಸ್ಕೃತಿ- ಕನ್ನಡ ಕೃತಿಯನ್ನು ಹೊರತಂದಿದ್ದಾರೆ.

ಅಧ್ಯಾಪನೆ ಹಾಗೂ ಸಂಶೋಧನೆಯಲ್ಲಿ ಸಮಾನ ಆಸಕ್ತಿ ಹೊಂದಿರುವ ಡಾ. ಸುಮಿತ್ರಾ ಅವರು ವಿಶ್ವೇಶ್ವರಯ್ಯ ಅವರ ಕೊಡುಗೆಗಳನ್ನು ಅಧ್ಯಯನ ಮಾಡಿ, ದಾಖಲಿಸಿದ್ದಾರೆ. ಆರಂಭದಲ್ಲಿಯೇ ಪ್ರಮಖ ಫೋಟೋಗಳಿವೆ.

ನಂತರ ಪೀಠಿಕೆ, ಬಾಲ್ಯ, ಆರ್ಥಿಕ ಯೋಜನೆಗಳು, ದಕ್ಷ ಎಂಜಿನಿಯರ್, ದೊಡ್ಡ ಕೈಗಾರಿಕೋದ್ಯಮಿ, ಪರಿಣಿತ ಆಡಳಿತಾಧಿಕಾರಿ, ಸಾಮಾಜಿಕ ಕಾರ್ಯಕರ್ತ, ಸಾರ್ವಜನಿಕ ಸೇವೆಗಳು, ರಾಜಕಾರಣದಲ್ಲಿ ಪಾತ್ರ ವಿಭಿನ್ನ ದೃಷ್ಟಿಕೋನದ ವ್ಯಕ್ತಿ ಎಂಬುದನ್ನು ಸಮರ್ಥವಾಗಿ ನಿರೂಪಿಸಿದ್ದಾರೆ. ವಿಶ್ವೇಶ್ವರಯ್ಯ ಅವರು ಮಾದರಿ ಮುತ್ಸದ್ಧಿ, ಅತ್ಯುತ್ತಮ ಆಡಳಿತಗಾರ, ಪ್ರಾಮಾಣಿಕ, ದಕ್ಷ ಮತ್ತು ದೂರದೃಷ್ಟಿಯುಳ್ಳ ವ್ಯಕ್ತಿ ಅವರು ದಿವಾನರಾಗಿದ್ದ ಅವಧಿಯಲ್ಲಿ ಮೈಸೂರು ಸರ್ವಾಂಗೀಣ ಅಭಿವೃದ್ಧಿಯಾಯಿತು. ಇದರಿಂದಾಗಿಯೇ ಅವರನ್ನು ಆಧುನಿಕ ಮೈಸೂರಿನ ಶಿಲ್ಪಿ ಎಂದು ಕರೆಯಲಾಯಿತು. ಮೂಲತಃ ಅವರು ಮೋಕ್ಷಗುಂಡಂ- ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಗಿಡ್ಡಲೂರು ತಾಲೂಕಿನವರು.

ಚಿಕ್ಕಬಳ್ಳಾಪುರ ಬಳಿಯ ಮುದ್ದೇನಹಳ್ಳಿಯಲ್ಲಿ ವಾಸ್ತವ್ಯ. ಶ್ರೀನಿವಾಸ ಶಾಸ್ತ್ರಿ- ವೆಂಕಟಲಕ್ಷ್ಮಮ್ಮ ಅವರ ಪುತ್ರ. ಜನನ 1860, ಆ. 27. 15 ವರ್ಷ ಇದ್ದಾಗ ತಂದೆ ನಿಧನ. ಎಚ್. ರಾಮಯ್ಯ ಪೋಷಕರು, ಬೆಂಗಳೂರು ಸೆಂಟಲ್ ಕಾಲೇಜಿನಲ್ಲಿ ಪದವಿ, ನಾದಲ್ಲಿ ಎಂಜಿನಿಯರ್ ಪದವಿ, 1884 ರಲ್ಲಿ ಬ್ರಿಟಿಷ್ ಸೇವೆ ಸೇರ್ಪಡೆ- ಅಸಿಸ್ಟೆಂಟ್ ಎಂಜಿನಿಯರ್, ಬಾಂಬೆ ಗೌರ್ನಮೆಂಟ್, 1909 ರಲ್ಲಿ ನಿವೃತ್ತಿ. ಅದೇ ವರ್ಷ ನ.15 ರಂದು ಮೈಸೂರು ಸರ್ವೀಸ್‌ಗೆ ಮುಖ್ಯ ಎಂಜಿನಿಯರ್ ಆಗಿ ಸೇರ್ಪಡೆ, ಅವರ ಎಂಜಿನಿಯರಿಂಗ್ ಕೌಶಲ್ಯಕ್ಕೆ ನಮ್ಮ ಕಣ್ಮುಂದೆ ಇರುವ ಕನ್ನಂಬಾಡಿ ಕಟ್ಟೆಯೇ ಸಾಕ್ಷಿ. ಟಿ. ಆನಂದರಾವ್ [ಅಗ್ರಹಾರ] ವೃತ್ತ. 1912 ರಲ್ಲಿ ಮೈಸೂರು ದಿವಾನರಾದರು. ಅವರ ಅವಧಿಯಲ್ಲಿ ಕೈಗಾರೀಕರಣ ಆಯಿತು.

ತಮ್ಮ ವಿದೇಶಿ ಪ್ರವಾಸದ ಅನುಭವದ ಹಿನ್ನೆಲೆಯಲ್ಲಿ ಅವರು 1934 ರಲ್ಲಿಯೇ ಆವರು ಪ್ಲಾನಡ್ ಎಕಾನಮಿ ಫಾರ್ ಇಂಡಿಯಾ ಕೃತಿ ಬರೆದಿದ್ದರು. 1911 ರಲ್ಲಿಯೇ ಅವರು ರಾಜರ ಆಳ್ವಿಕೆ ಇದ್ದ ಮೈಸೂರು ರಾಜ್ಯದಲ್ಲಿ ಆರ್ಥಿಕ ಸಮ್ಮೇಳನ ಏರ್ಪಡಿಸಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಉದ್ಘಾಟಿಸಿದ್ದರು. ಮೈಸೂರು ಎಕಾನಾಮಿಕ್ ಜರ್ನಲ್- ಮಾಸಿಕ ಹೊರ ತಂದರು. ಕನ್ನಡದಲ್ಲಿ ಅರ್ಥಶಾಸ್ತ್ರ ಪತ್ರಿಕೆ 1934- ಪ್ಲಾನ್ಡ್ ಎಕಾನಮಿ ಆಫ್ ಇಂಡಿಯಾ. ಕೇಂದ್ರಕ್ಕೆ ಹತ್ತು, ಪ್ರಾಂತ್ಯಗಳಿಗೆ ಐದು ವರ್ಷದ ಯೋಜನೆ ಶಿಫಾರಸು ಮಾಡಿದರು.

ನಾಲೆಗಳು, ಕುಡಿಯುವ ನೀರಿನ ಯೋಜನೆ, ಸ್ವಯಂಚಾಲಿತ ಸ್ಲೂಯಿಸ್ ಗೇಟ್‌ಗಳು - ಪೂನಾ ನೀರಿನ ಯೋಜನೆ, ಹೈದರಾಬಾದ್ ನೀರಿನ ಯೋಜನೆ, ಕೆಆರ್ಎಸ್, ಮಾರಿ ಕಣಿವೆ, ಶಿವನಸಮುದ್ರ ವಿದ್ಯುತ್ ಉತ್ಪಾದನೆ,

ರೈಲ್ವೆಗಳ ವಿಸ್ತರಣೆಗೆ ಕಾರಣಕರ್ತರು.

ಕೈಗಾರಿಕರಣ ಇಲ್ಲವೇ ಅವನತಿ ಎಂಬ ಹಿನ್ನಲೆಯಲ್ಲಿ ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಕಾಗದ ಕಾರ್ಖಾನೆ ಆರಂಭಿಸಿದರು. ಇರ್ವಿನ್ ನಾಲೆ ಅಂತ ಇದ್ದದ್ದು ವಿಸಿ ನಾಲೆ ಆಯ್ತು, ಮೈಶುಗರ್ಸ್, ಮೈಸೂರು ಸೋಪ್ ಮೈಸೂರು ಸ್ಯಾಂಡಲ್ ಆಯಿಲ್ ಕಾರ್ಖಾನೆ, ಸಿಟಿಐ ಆರಂಭಿಸಿದರು.

ಈಗಿನ ಐಎಎಸ್,ಐಪಿಎಸ್, ಐಎಫ್ಎಸ್ನಂತೆ ಆಗ ಐಸಿಎಸ್ ಇತ್ತು, ಆಧುನೀಕರಣ, ಕೈಗಾರೀಕರಣ, ಯಾಂತ್ರೀಕರಣ, ವ್ಯಾಪಾರ, ಮುಖ್ಯ ಎಂಜಿನಿಯರ್ ನಂತರ ಮೂರು ವರ್ಷಗಳಲ್ಲಿ ದಿವಾನರಾದರು. ಪ್ರವಾಸೋದ್ಯಮಕ್ಕೆ ಉತ್ತೇಜನ ಮೈಸೂರು ವಿವಿ ಸ್ಥಾಪನೆ, ಮಹಾರಾಣಿ ಕಾಲೇಜು ಸ್ಥಾಪನೆಯಲ್ಲಿ ಅವರ ಪಾತ್ರ ಇತ್ತು. ಮೈಸೂರಿನಲ್ಲಿ ನಾನಾ ಸುಧಾರಣೆಗೆ ಅವರ ಕಾರಣಕರ್ತರು.

ಊಟ, ತಿಂಡಿ, ಡ್ರೆಸ್ ಶಿಸ್ತು. ಸೂಟು-ಬೂಟು, ಮೈಸೂರುಪೇಟ- ಹೀಗೆ ಇಡೀ ವ್ಯಕ್ತಿತ್ವವನ್ನು ತುಂಬಾ ಅಚ್ಚುಕಟ್ಟಾಗಿ ದಾಖಲಿಸಿದ್ದಾರೆ.1960 ರಲ್ಲಿಯೇ ಅವರು ಭಾರತರತ್ನ ಪ್ರಶಸ್ತಿ ಪುರಸ್ಕೃತರು.

ಸರ್ ಎಂ. ವಿಶ್ವೇಶ್ವರಯ್ಯ ಜೀವನ ಮತ್ತು ಸಾಧನೆಗಳು ಕೃತಿಯನ್ನು ಅಮೃತೇಶ್ವರ ಪ್ರಕಾಶನ [ಮೊ.94493 75111] ಪ್ರಕಟಿಸಿದೆ. ಇತಿಹಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಡಾ.ಎನ್. ಸರಸ್ವತಿ ಬೆನ್ನುಡಿ ಬರೆದಿದ್ದಾರೆ.

ಮಳವಳ್ಳಿಯ ಇತಿಹಾಸ ಮತ್ತು ಸಂಸ್ಕೃತಿ

ಮಳವಳ್ಳಿಯ ಇತಿಹಾಸ ಮತ್ತು ಸಂಸ್ಕೃತಿ ಕೃತಿಯಲ್ಲಿ ಕ್ರಿ.ಶ. ಹತ್ತರಿಂದ ಹದಿನಾರನೇ ಶತಮಾನದವರೆಗಿನ ಚಾರಿತ್ರಿಕ ಹಿನ್ನೆಲೆ ಹಾಗೂ ಸಂಸ್ಕೃತಿಯ ಬೆಳವಣಿಗೆಯ ವಿವಿಧ ಮಜಲುಗಳನ್ನು ವಿಶ್ಲೇಷಿಸಲಾಗಿದೆ. ಗಂಗ ಮತ್ತು ನೊಳಂಬರ ಆಳ್ವಿಕೆ, ರಾಷ್ಟ್ರಕೂಟ ಮತ್ತು ಚೋಳರ ಆಳ್ವಿಕೆ, ಹೊಯ್ಸಳರು ಮತ್ತು ವಿಜಯನಗರ ಅರಸರ ಆಳ್ವಿಕೆ, ಸಾಮಾಜಿಕ ಸ್ಥಿತಿಗತಿ- ಸಾಮಾಜಿಕ ಹಾಗೂ ಧಾರ್ಮಿಕ ಜೀವನ, ಹಬ್ಬಗಳು ಮತ್ತು ಜಾತ್ರೆಗಳು, ಜಾತಿ ಮತ್ತು ಬುಡಕಟ್ಟು ಸಮುದಾಯಗಳು, ಆರ್ಥಿಕ ಸ್ಥಿತಿಗತಿ- ಕೃಷಿ, ನೀರಾವರಿ, ತೋಟಗಾರಿಕೆ, ಪಶುಪಾಲನೆ, ಕೈಗಾರಿಕೆ, ಶೈವ, ವೈಷ್ಣವ ದೇವಾಲಯಗಳು, ಶಿಪ್ಲಗಳು, ವೀರಗಲ್ಲುಗಳು ಮತ್ತು ಮಾಸ್ತಿಗಲ್ಲುಗಳು, ಮಠಮಾನ್ಯಗಳು, ಶಾಸನಗಳು ಬಗ್ಗೆ ಸಂಶೋಧಾನಾತ್ಮಕ ವಿವರಗಳಿವೆ

ಈ ಕೃತಿಯನ್ನು ಮರಡಿಲಿಂಗೇಶ್ವರ ಪ್ರಕಾಶನ (ಮೊ.96865 35465) ಪ್ರಕಟಿಸಿದೆ. ಮೈಸೂರು ವಿವಿ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ.ವೈ.ಎಚ್. ನಾಯಕವಾಡಿ ಮುನ್ನುಡಿ ಬರೆದಿದ್ದಾರೆ.

Share this article