ಶೇಷಮೂರ್ತಿ ಅವಧಾನಿ
ಹೊಲದಲ್ಲಿನ ಬೆಳೆ, ಮಾರುಕಟ್ಟೆ ಬೆಲೆ ಎಂದು ಚಿಂತೆಗೊಳಗಾಗುವ ಮುನ್ನವೇ ತೊಗರಿ ಕಣಜದ ಮಣ್ಣಿನ ಮಕ್ಕಳ ಮುಂದೆ ಅವರ ಕಣ್ಣಿನ ದೃಷ್ಟಿಗೇ ಕಂಟಕ ತಂದೊಡ್ಡುವಂತಹ ಸವಾಲೊಂದು ಧುತ್ತನೆ ಎದುರಾಗಿದೆ! ಮಳೆ ತುಂಬಾ ಸುರಿದು ತೊಗರಿ ಹಾಳಾಯ್ತೆಂದು ಕೊರಗಲ್ಲಿರೋ ರೈತರು ಅಳಿದುಳಿದ ತೊಗರಿ ಫಸಲನ್ನು ಉಳಿಸಿಕೊಳ್ಳಲು ಕೀಟನಾಶಕ ಸಿಂಪಡಿಸುತ್ತಿದ್ದಾರೆ. ಹೀಗೆ ವಿಷಕಾರಿ ಕೀಟನಾಶಕ ಸಿಂಪಡಣೆ ಮಾಡುವಾಗ ಅಗತ್ಯ ಮುನ್ನೆಚ್ಚರಿಕೆ ಹಾಗೂ ರಕ್ಷಣಾ ಕ್ರಮ ಕೈಗೊಳ್ಳದೆ ತಮ್ಮ ಕಣ್ಣುಗಳಿಗೆ ಕಂಟಕ ಆಹ್ವಾನಿಸುತ್ತಿದ್ದಾರೆ.
ನಿತ್ಯ ನೂರಾರು ರೈತರು ಆಸ್ಪತ್ರೆಗೆ ದೌಡು:ಜಿಲ್ಲಾದ್ಯಂತ ಈ ಬಾರಿ 5.45ಲಕ್ಷ ಹೆಕ್ಟರ್ ತೊಗರಿ ಬಿತ್ತನೆಯಾಗಿದೆ ಈ ಪೈಕಿ ಹತ್ತಿಪ್ಪತ್ತು ಸಾವಿರ ಹೆಕ್ಟರ್ನಷ್ಟು ತೊಗರಿ ಹಾಳಾಗಿದೆ ಎಂದು ಅಂದಾಜಿಸಿದರೂ ಉಳಿದ ಫಸಲಿಗೆ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕ ಸಿಂಪಡಣೆಗೆ ಮುಂದಾಗಿದ್ದಾರೆ.
ಕೀಟನಾಶಕ ಕಣ್ಣು ಹೊಕ್ಕರೆ ಕಾರ್ನಿಯಾಕ್ಕೇ ತೊಂದರೆ ತಂದೊಡ್ಡುತ್ತದೆ. ಕಣ್ಣುರಿಯೊಂದಿಗೆ ಶುರುವಾಗುವ ಸಮಸ್ಯೆ ಮುಂದೆ ಹಾಗೇ ಬೆಳೆದು ಕಾಯಂ ದೃಷ್ಟಿ ದೋಷ ತೊಂದೊಡ್ಡುವ ಅಪಾಯಗಳಿವೆ ಎನ್ನುತ್ತಾರೆ.
ರೈತರಿಗೆ ಬಿತ್ತನೆ ಬೀಜ, ಕೀಟ ನಾಶಕ ಪೂರೈಸುವ ಕೃಷಿ ಇಲಾಖೆ ಸಿಂಪಡಣೆ ವಿಧಾನ, ರಕ್ಷಣೆ ಕ್ರಮಗಳ ಬಗ್ಗೆ ರೈತರಿಗೆ ಜಾಗೃತಿ ಮೂಡಿಸೋದು ಅಗತ್ಯವಾಗಿದೆ. ಚಸ್ಮಾ ಧರಿಸಿ, ಕೈಗೆ ಗ್ಲೌಸ್ ಹಾಕೊಕೊಂಡು, ಮುಖ, ಮೂಗಿಗೆ ಮಾಸ್ಕ್ ಹಾಕಿ ಕೀಟನಾಶಕ ಸಿಂಪಡಿಸುವ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕಿದೆ.
ಡಾ.ವಿಶ್ವನಾಥ ರೆಡ್ಡಿ, ಖ್ಯಾತ ನೇತ್ರ ತಜ್ಞರು, ಕಲಬುರಗಿ
ಡಾ.ರಾಜಶ್ರೀ ರೆಡ್ಡಿ, ನೇತ್ರ ತಜ್ಞರು., ಕಲಬುರಗಿ
1) ಕೀಟನಾಶಕ ಸಿಂಪಡಣೆ ಮಾಡುವಾಗ ಕಣ್ಣಿಗೆ ಚಶ್ಮಾ ಧರಿಸಬೇಕು.
3) ಕೀಟನಾಶಕ ಡಬ್ಬಿಯನ್ನು ಜಾಗರೂಕರಾಗಿ, ಅಲುಗಾಡಿಸದೇ ಔಷಧಿ ಚೆಲ್ಲದಂತೆ ತೆಗೆಯಿರಿ
4) ಗಾಳಿಯಾಡುವ ಪ್ರದೇಶದಲ್ಲಿ ರಾಸಾಯನಿಕಗಳನ್ನು ಮಿಶ್ರಣ ಮಾಡಿ.5) ಜೋರಾದ ಗಾಳಿ ಇರುವಾಗ ಮಿಶ್ರಣ ಮಾಡುವ, ಯಂತ್ರದಲ್ಲಿ ತುಂಬುವುದು ಬೇಡ
6) ನೇರವಾಗಿ ಕೈಯಿಂದ ಕೀಟ ನಾಶಕಗಳನ್ನು ಮಿಶ್ರಣ ಮಾಡದೇ ಕೋಲು ಬಳಸಿ.7) ಸಿಂಪಡಣೆ ಸಮಯದಲ್ಲಿ ಆಹಾರ ತಿನ್ನುವುದಾಗಲಿ, ಕುಡಿಯುವುದಾಗಲಿ ಮಾಡಬೇಡಿ.
8) ಕಡ್ಡಾಯವಾಗಿ ಮಾಸ್ಕ್ ಹಾಗು ಕೈಗವಸು ಹಾಕಿಕೊಂಡು ಸಿಂಪಡಣೆ ಮಾಡಬೇಕು.