ಕನ್ನಡಪ್ರಭ ವಾರ್ತೆ, ಬಸವಕಲ್ಯಾಣ
ಅವರು ನಗರದ ಬಸವೇಶ್ವರ ಪದವಿ ಕಾಲೇಜಿನಲ್ಲಿ ಐಕ್ಯೂಎಸಿ ವತಿಯಿಂದ ಹಮ್ಮಿಕೊಂಡಿದ್ದ ‘ಉನ್ನತ ಶಿಕ್ಷಣ ಹಾಗೂ ಯುವ ಜನತೆ’ಕುರಿತಾದ ಉಪನ್ಯಾಸ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಜ್ಞಾನ ಉತ್ಪಾದಿಸುವ, ಸಾಮಾಜಿಕ ಸಮಾನತೆ ತರಬಲ್ಲ, ಮನುಷ್ಯ ಪರವಾಗಿ ಆಲೋಚಿಸುವ ನಿಲುವುಗಳು ಉನ್ನತ ಶಿಕ್ಷಣದಲ್ಲಿದ್ದರೆ ದೇಶದ ಪ್ರಗತಿ ಸಾಧ್ಯ ಎಂದರು.
ಲೋಕವನ್ನು ಅರಿಯಲು, ಗ್ರಹಿಸಲು ದಾರಿಯಾಗಬೇಕಾದ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ನಿರ್ಬಂಧಗಳಿವೆ. ನಿಸರ್ಗ, ಸಮಾಜ, ಲೋಕವನ್ನು ಅರಿಯಲು ಸರಿಯಾದ ಶಿಕ್ಷಣದ ಅಗತ್ಯವಿದೆ. ಉನ್ನತ ಶಿಕ್ಷಣದಲ್ಲಿ ಹೆಚ್ಚು ಅಧ್ಯಯನ ಮಾಡುವ ಮೂಲಕ ಹೊಸದನ್ನು ಕಂಡುಕೊಳ್ಳಲು ಸಾಧ್ಯವಿದೆ. ಓದಿನಲ್ಲಿ ತನ್ಮಯತೆ ಅಗತ್ಯ ಎಂದರು.ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಯಂತ್ರಗಳನ್ನಾಗಿ ಮಾಡಲಾಗುತ್ತದೆ. ಅತ್ಯಂತ ಬೌದ್ಧಿಕತೆಯನ್ನು ಹೊಂದಿದ ಬಿಎ, ಬಿಕಾಂ ಮತ್ತು ಬಿಎಸ್ಸಿ ಪದವಿಗಳ ಬಗೆಗೆ ತಾತ್ಸಾರ , ಉದಾಸೀನತೆ ಬೇಡ ಎಂದರು.
ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ಸಂಶೋಧನಾತ್ಮಕ ಅಧ್ಯಯನ, ಸೈದ್ಧಾಂತಿಕ ಹಾಗೂ ತಾತ್ವಿಕ ನೆಲೆಯ ಅನುಸಂಧಾನ ಉನ್ನತ ಶಿಕ್ಷಣದ ಗುಣವಾಗಿದೆ. ಅದು ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ದಾರಿಯಾಗಿದೆ. ಕಾಲೇಜು ಹಾಗೂ ವಿಶ್ವವಿದ್ಯಾಲಯಗಳು ವೈಚಾರಿಕ ಹಾಗೂ ವೈಜ್ಞಾನಿಕ ಪರಂಪರೆಯನ್ನು ಗಟ್ಟಿಗೊಳಿಸುವ ಮತ್ತು ಕಟ್ಟಿ ಬೆಳೆಸುವ ಅರಿವಿನ ಜಾಗಗಳಾಗಿವೆ ಎಂದರು.
ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ ಅಧ್ಯಕ್ಷತೆ ವಹಿಸಿದ್ದರು. ಬಿಡಿಪಿಸಿ ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ಐಕ್ಯೂಎಸಿ ಸಂಯೋಜಕ ಪವನ ಪಾಟೀಲ್, ಅಶೋಕ ರೆಡ್ಡಿ ಗದಲೇಗಾಂವ್, ವಿವೇಕಾನಂದ ಶಿಂಧೆ, ರೋಶನ್ ಬೀ, ಗುರುದೇವಿ ಕಿಚಡೆ, ನೀಲಮ್ಮ ಮೇತ್ರೆ, ಡಾ. ಬಸವರಾಜ ಖಂಡಾಳೆ, ಪ್ರವೀಣ ಬಿರಾದಾರ, ಶ್ರೀನಿವಾಸ ಉಮಾಪುರೆ, ಪ್ರಶಾಂತ ಬುಡಗೆ ಹಾಗೂ ಬಸವರಾಜ ಗುಂಗೆ ಮತ್ತಿತರರಿದ್ದರು.ಡಾ. ಶಾಂತಲಾ ಪಾಟೀಲ್ ಸ್ವಾಗತಿಸಿ ಜಗದೇವಿ ಜವಳಿಗೆ ನಿರೂಪಿಸಿದರೆ ಗಂಗಾಧರ ಸಾಲಿಮಠ ವಂದಿಸಿದರು.