ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ
ಮಾನವನ ಅತಿ ಆಸೆಯಿಂದ ಕೆರೆಕಟ್ಟೆಗಳ ಅತಿಕ್ರಮಣ ವಾಗುತ್ತಿವೆ, ಕೆರೆಕಟ್ಟೆಯಲ್ಲಿ ಹೂಳು ತುಂಬಿ ನೀರಿಲ್ಲದಂತಾಗಿ ಪಶು ಪಕ್ಷಿಗಳಿಗೆ ದನಕರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಹಾಗೆಯೇ ಅತಿಯಾದ ಕೊಳವೆ ಬಾವಿ ತಗೆಸುತ್ತಿರುವದರಿಂದ ಭೂಮಿಯಲ್ಲಿ ನೀರಿಲ್ಲದೇ ಭೂಮಿಯೇ ಬರಡಾಗುತ್ತಿದೆ ಎಂದು ಗ್ರಾಮ ಯೋಜನೆಯ ಸಿರಸಿ ಜಿಲ್ಲಾ ನಿರ್ದೇಶಕ ಬಾಬು ನಾಯಕ್ ಕಳವಳ ವ್ಯಕ್ತಪಡಿಸಿದರು.ಶಿರಾಳಕೊಪ್ಪ ಹತ್ತಿರದ ಮಳವಳ್ಳಿ ಗ್ರಾಮದಲ್ಲಿ ಹಿತ್ತಲಕಟ್ಟೆ ಕೆರೆಯ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮ ಯೋಜನೆಯು ನೀರಿಲ್ಲದೇ ನಿರುಪಯುಕ್ತವಾದ ಕೆರೆ ಗುರುತಿಸಿ ಸ್ಥಳಿಯರ ಸಹಕಾರದಿಂದ ಮತ್ತು ಸಂಸ್ಥೆ ಅನುದಾನದಿಂದ ಕೆರೆ ಕಾಮಗಾರಿ ಮಾಡುತ್ತಿದೆ. ಕನಾರ್ಟಕಾದ್ಯಂತ ತಾಲೂಕಿನ ಕೆರೆಗಳನ್ನು ಆಯ್ಕೆ ಮಾಡಿ ವಷರ್ಕ್ಕೆ ಒಂದರಂತೆ ಹೂಳೆತ್ತಲಾಗುತ್ತಿದೆ.
ಕೆರೆ ಕಾಮಗಾರಿಯು ರೈತರ ಸಹಕಾರದಿಂದ ನಡೆಯುವುದು. ರೈತರು ಕೆರೆಯಿಂದ ತೆಗೆಯುವ ಹೂಳನ್ನು ತಮ್ಮ ಕೃಷಿ ಭೂಮಿಗೆ ಉಪಯೋಗಿಸಿಕೊಳ್ಳುವದರಿಂದ ಫಲವತ್ತತೆ ಹೆಚ್ಚಾಗಿ ಬೆಳೆಗಳು ಸಮೃದ್ಧಿಯಾಗಿ ಬೆಳೆದು ಹೆಚ್ಚು ಇಳುವರಿ ಪಡೆಯ ಬಹುದಾಗಿದೆ. ಕೆರೆಹೂಳೆತ್ತಿ ಹೆಚ್ಚು ನೀರು ನಿಂತಾಗ ಅಂತರ್ ಜಲ ಹೆಚ್ಚಾಗಲು ಸಹಕಾರಿ ಆಗುತ್ತದೆ. ಬತ್ತಿದ ಬೋರ್ವೆಲ್ ಗಳಲ್ಲಿ ನೀರೆತ್ತಲು ಸಹಕಾರಿ ಆಗಲಿದೆ.ಈ ಯೋಜನೆಯಿಂದ ಮುಂದಿನ ಪೀಳಿಗೆ ಜನರಿಗೂ ಮತ್ತು ಪ್ರಾಣಿಪಕ್ಷಿಗಳಿಗೆ ನೀರನ್ನು ಉಳಿಸಿ ಇತರರಿಗೂ ಮಾದರಿ ಆಗುವ ಯೋಜನೆ ಆಗಿದೆ. ಈ ಕಾಮಗಾರಿಗೆ ರೈತರು, ಕೆರೆ ಸಮಿತಿ ಮತ್ತು ಗ್ರಾಮಸ್ಥರು ಮುಂದೆ ಬರಬೇಕು ಎಂದು ಕರೆ ನೀಡಿದರರು.
ಕಾರ್ಯಕ್ರಮ ಉದ್ದೇಶಿಸಿ ಶಿವಮೊಗ್ಗ ವಿಭಾಗದ ಯೋಜನೆ ಅಭಿಯಂತರ ಗಣಪತಿ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಷೇತ್ರದ ಹಣದಿಂದ ನಡೆಯುವ ಕಾಮಗಾರಿ ಇದಾಗಿದ್ದು, ಹಣವು ದುಂದುವೆಚ್ಚವಾಗದಂತೆ ಹಾಗೂ ಸಮಯಕ್ಕೆ ಸರಿಯಾಗಿ ಕಾಮಗಾರಿ ಮುಗಿಯಬೇಕು. ಇದರಿಂದ ₹೩ಕೋಟಿ ಲೀಟರ್ ನೀರು ಸಂಗ್ರಹ ಸಾಮರ್ಥ್ಯ ಮಾಡಬಹುದು. ಗ್ರಾಮಸ್ಥರು ನಮ್ಮೂರು ನಮ್ಮ ಕೆರೆ ಎಂದು ತಿಳಿದು ಕೆರೆ ಕಾಮಗಾರಿಗೆ ಮುಂದೆ ಬರಬೇಕು. ಬರಗಾಲದಿಂದ ಬತ್ತಿದ ಬೋರ್ವೆಲ್ ತುಂಬಲು ಸಹಕಾರಿಯಾಗುವದು. ಪರಮಪೂಜ್ಯ ಡಾ.ವೀರೇಂದ್ರ ಹೆಗ್ಗಡೆಯವರ ಕನಸನ್ನು ನಾವೆಲ್ಲ ನನಸು ಮಾಡೋಣ ಎಂದರು.ಕಾಯರ್ಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಗೌರಮ್ಮ, ಕೆರೆ ಸಮಿತಿ ಅಧ್ಯಕ್ಷ ಉಮೇಶ್ಗೌಡ್ರು, ತಾಲೂಕ ಯೋಜನಾಧಿಕಾರಿ ನಂಜುಂಡಿ, ಗ್ರಾಪಂ ಸದಸ್ಯರಾದ ಚಂದ್ರಶೇಖರ, ಪ್ರವೀಣ, ಕಲಾವತಿ, ಪಿಡಿಒ ರವಿಕುಮಾರ, ಒಕ್ಕೂಟದ ಅಧ್ಯಕ್ಷೆ ಲೀಲಾವತಿ, ದೇವಸ್ಥಾನ ಸಮಿತಿ ಅಧ್ಯಕ್ಷ ವಿರೂಪಾಕ್ಷಪ್ಪ, ಕೆರೆ ಸಮಿತಿ ಉಪಾಧ್ಯಕ್ಷ ರಾಜು ದಂಬಾಳೆ ಸೇರಿ ಗ್ರಾಮದ ವಿವಿದ ಸಂಘಟನೆ ಪ್ರಮುಖರಿದ್ದರು.