ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ತಾಲೂಕು ಶ್ರೀಶಿವಾಜಿ ಗಾಣಿಗರ ಸೌಹಾರ್ದ ಸಹಕಾರಿ ನಿಯಮಿತ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ ಉದ್ಘಾಟಿಸಿ ಮಾತನಾಡಿ, ಕೇವಲ 450ಕ್ಕೂ ಹೆಚ್ಚಿನ ಷೇರುದಾರರನ್ನು ಹೊಂದಿರುವ ಶ್ರೀಶಿವಾಜಿ ಗಾಣಿಗರ ಸೌಹಾರ್ದ ಸಹಕಾರ ಸಂಘವು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯ ಪತದತ್ತ ಸಾಗುತ್ತಿದೆ ಎಂದರು.
ಸಹಕಾರ ಸಂಘದಿಂದ ಸಾಲವನ್ನು ಪಡೆದುಕೊಂಡ ಷೇರುದಾರರು ಹಾಗೂ ಸಹಕಾರಿಗಳು ಸಾಲ ಪಡೆದ ಹಣವನ್ನು ಸದ್ವಿನಿಯೋಗ ಮಾಡಿಕೊಂಡು ನಿಗದಿತ ಅವಧಿ ಒಳಗೆ ಸಾಲದ ಬಾಕಿ ಹಣದ ಕಂತನ್ನು ಸಂಪೂರ್ಣ ಪಾವತಿಸುವ ಮೂಲಕ ಸುಸ್ತಿಯಿಂದ ಹೊರಬಂದು ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.ಸಂಘದಲ್ಲಿ ಕೇವಲ ಕೆಲವೇ ದಾಖಲೆಗಳನ್ನು ಪಡೆದು ತುರ್ತಾಗಿ ಸಾಲ ಸೌಲಭ್ಯ ನೀಡುವುದರಿಂದ ರೈತರು ಬ್ಯಾಂಕುಗಳಿಗೆ ಹಾಗೂ ಹೆಚ್ಚಿನ ಬಡ್ಡಿ ತೇರುವ ಲೇವಾದಾರರ ಹತ್ತಿರ ಹೋಗುವುದನ್ನು ತಪ್ಪಿಸಿದಂತಾಗುವುದು. ಮನೆ ಬಾಗಿಲಿನಲ್ಲಿಯೇ ಇರುವ ಸಹಕಾರ ಸಂಘಗಳ ಮೂಲಕ ವ್ಯವಹಾರ ಮಾಡುವಂತೆ ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಸಂಘದ ಉಪಾಧ್ಯಕ್ಷ ಸಿದ್ಧಲಿಂಗಯ್ಯ, ರೀ ಶಿವಜ್ಯೋತಿ ಗಾಣಿಗರ ಸೌಹಾರ್ದ ಸಹಕಾರಿ ನಿಯಮಿತದ ಉಪಾಧ್ಯಕ್ಷ ಎಸ್.ಕೆ.ರಾಮಯ್ಯ, ಪುರಸಭೆ ಮಾಜಿ ಸದಸ್ಯ ಕೆ.ಆರ್.ನೀಲಕಂಠ, ಅಗ್ರಹಾರಬಾಚಹಳ್ಳಿ ಗ್ರಾಪಂ ಸದಸ್ಯ ಆರ್ ಶ್ರೀನಿವಾಸ್, ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ಮಂಜು ಶೆಟ್ಟಿ, ಪವನ್ ಕುಮಾರ್, ಪ್ರಮೋದ, ವಿಶ್ವನಾಥ, ದೇವಮ್ಮ, ಶೋಭಾ, ರವಿ, ಸೋಮಶೇಖರ್, ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿಲ್ಪಾ, ಕಂಪ್ಯೂಟರ್ ಅಕೌಂಟೆಂಟ್ ಶಾಲಿನಿ, ಪಿಗ್ಮಿ ಸಂಗ್ರಾಹಕಿ ಸರೋಜಾ ಇದ್ದರು.