ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
1950ರ ಜ.26ರಂದು ಸಂವಿಧಾನ ಜಾರಿಯಾಗುತ್ತದೆ. ಹಲವಾರ ಸವಾಲುಗಳು ಮತ್ತು ಕಷ್ಟಗಳ ಹೊರತಾಗಿಯೂ ಸಂವಿಧಾನ ಕರಡು ಸಮಿತಿಯೂ ಅದ್ಭುತವಾದ ಸಂವಿಧಾನವನ್ನು ನೀಡಿದೆ. ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಸೇವೆ ಅಮೋಘವಾದುದು ಎಂದು ಹೇಳಿದರು.
ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ನ್ಯಾಯ ಇವು ಪ್ರಜಾಪ್ರಭುತ್ವದ ನಿಜವಾದ ಸೌಂದರ್ಯಗಳು. ಅಮೆರಿಕದಲ್ಲಿ ಮಹಿಳೆಯರಿಗೆ ಮತದಾನ ಹಕ್ಕು ದೊರೆಯಲು 200 ವರ್ಷಗಳೇ ಬೇಕಾಯಿತು. ಆದರೆ ಭಾರತದಲ್ಲಿ ಸಂವಿಧಾನ ಜಾರಿಗೆ ಬಂದ ದಿನವೇ ಮತದಾನದ ಹಕ್ಕು ಎಲ್ಲರಿಗೂ ಲಭಿಸಿದೆ. ಭಾರತೀಯರಾದ ನಾವೆಲ್ಲಾ ಸಂವಿಧಾನ ನಿಯಮಗಳನ್ನು ಉಲ್ಲಂಘಿಸಬಾರದು ಪಾಲಿಸಬೇಕು ಎಂದು ಹೇಳಿದರು.ಭಾರತಕ್ಕೆ ಸಂವಿಧಾನವನ್ನು ರಚಿಸಿಕೊಟ್ಟ ಕರಡು ಸಮಿತಿಯ ಅಧ್ಯಕ್ಷ ಡಾ.ಅಂಬೇಡ್ಕರ್ ಅವರ ಅದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಮುಖ್ಯ ಭಾಷಣಕಾರರಾದ ವಕೀಲ ಬಿ.ಈ.ಜಯೇಂದ್ರ ಹೇಳಿದರು.ಸಂವಿಧಾನ ಜಾರಿಯಾದ ದಿನದಿಂದ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಮೂಲಭೂತ ಹಕ್ಕುಗಳು ಸಿಕ್ಕಿವೆ. ಈ ದೇಶದ ಪ್ರಜೆಗಳಾಗಿ ಕರ್ತವ್ಯಗಳನ್ನು ಪಾಲಿಸಬೇಕು. ಅಂಬೇಡ್ಕರ್ ಅವರ ಜಾತ್ಯಾತೀಯ ರಾಷ್ಟ್ರದ ಕನಸ್ಸನ್ನು ನಾವುಗಳು ನನಸು ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕ್ಯಾಪ್ಟನ್ ಪಿ.ಎನ್. ಮುತ್ತಪ್ಪ, ಹವಲ್ದಾರ್ ಪೌತಿ ಬಿ.ವಿ.ನಾರಾಯಣ ಅವರ ಪತ್ನಿ ಎನ್. ಶಶಿಕಲಾ ರೈ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿ.ಎಸ್. ಗೀತಾ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಎನ್.ಎನ್. ರಮೇಶ್, ಚಂದ್ರಿಕಾ ಕುಮಾರ್, ಕವನ್ ಕಾರ್ಯಪ್ಪ, ಬಿಇಒ ಭಾಗ್ಯಮ್ಮ, ಇಒ ಜಯಣ್ಣ, ಸಿಒ ನಾಚಪ್ಪ, ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಪ್ರದೀಪ್, ಪ್ರಾಂಶುಪಾಲ ಬೆಳ್ಳಿಯಪ್ಪ ಮತ್ತಿತರರು ಇದ್ದರು.