ದೊಡ್ಡಬಳ್ಳಾಪುರ: ಕೈಮಗ್ಗಗಳಲ್ಲಿ ದುಡಿಯುತ್ತಿದ್ದ ನೇಕಾರರಿಗೆ 1932ರಲ್ಲೇ ವಿದ್ಯುತ್ ಸೌಲಭ್ಯ ದೊರೆಯುವಂತೆ ಮಾಡಿ, ನೇಕಾರರ ಆರ್ಥಿಕ ಸ್ಥಿತಿಗತಿ ಸುಧಾರಣೆಗೆ ಶ್ರಮಿಸಿದ ಕೊಂಗಾಡಿಯಪ್ಪ ದಾನಿಗಳ ನೆರವಿನಿಂದ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ, ಪಶು ವೈದ್ಯಶಾಲೆ ಇತ್ಯಾದಿಗಳನ್ನು ಪ್ರಾರಂಭಿಸಲು ನೆರವಾದರು. ಅವರ ಉದಾತ್ತ ಚಿಂತನೆಗಳು ಇಂದಿನ ಪೀಳಿಗೆಗೆ ದಾರಿದೀಪ ಎಂದು ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್ ಹೇಳಿದರು.
ಪ್ರಾಧ್ಯಾಪಕ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ಕೊಂಗಾಡಿಯಪ್ಪ ದೊಡ್ಡಬಳ್ಳಾಪುರದ ಗಾಂಧಿ ಇದ್ದಂತೆ. ಸ್ಥಳೀಯ ವಿಷಯಗಳನ್ನೇ ಕೇಂದ್ರೀಕರಿಸಿ ಪ್ರಗತಿಯ ಹೊಸ ಆಶೋತ್ತರಗಳನ್ನು ಪ್ರತಿಪಾದಿಸಿದವರು. ಅವರು, ಸ್ವಾತಂತ್ರ್ಯ ಹೋರಾಟದ ಭಾಗವಾಗದಿದ್ದರೂ ಗಾಂಧೀಜಿ ಪ್ರತಿಪಾದಿಸಿದ ಹಲವು ಚಿಂತನೆಗಳನ್ನು ವಸ್ತುನಿಷ್ಠವಾಗಿ ಜಾರಿಗೆ ತಂದವರು. ಕಾಯಕದಲ್ಲಿ ನಂಬಿಕೆ ಇಟ್ಟು, ಪುರೋಭಿವೃದ್ಧಿಗಾಗಿ ಶ್ರಮಿಸಿದ ಅವರಲ್ಲಿ ಹರಿಜನೋದ್ದಾರ, ಸ್ವಾವಲಂಬನೆ, ಕೈಗಾರಿಕಾ ಬೆಳವಣಿಗೆ, ಶೈಕ್ಷಣಿಕ ಮುನ್ನಡೆಯಂತಹ ಉದಾತ್ತ ಚಿಂತನೆಗಳಿದ್ದವು. ಅವುಗಳನ್ನು ನಿಸ್ವಾರ್ಥವಾಗಿ ಜಾರಿಗೆ ತರುವ ಮೂಲಕ ಊರಿನ ಬೆಳವಣಿಗೆಗೆ ಶ್ರಮಿಸಿದರು. ರಾಜನಿಷ್ಠೆ ಮತ್ತು ಪ್ರಜಾನಿಷ್ಠೆಯ ಧ್ಯೇಯಗಳು ಕೊಂಗಾಡಿಯಪ್ಪ ಅವರ ಬದುಕಿನ ಬಹುದೊಡ್ಡ ತತ್ವಗಳು ಎಂದರೆ ತಪ್ಪಾಗಲಾರದು ಎಂದರು.
ಕೊಂಗಾಡಿಯಪ್ಪ ಪ್ರಶಸ್ತಿ ಪ್ರದಾನ:ಇದೇ ವೇಳೆ ಕೊಂಗಾಡಿಯಪ್ಪ ಅವರ ಶಿಷ್ಯರಲ್ಲಿ ಒಬ್ಬರಾದ ದೇವಾಂಗ ಮಂಡಲಿ ಮಾಜಿ ಅಧ್ಯಕ್ಷ ವಿ.ತಿಮ್ಮಶೆಟ್ಟಪ್ಪ, ನೇಕಾರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ.ಹೇಮಂತರಾಜು, ದೊಡ್ಡಬಳ್ಳಾಪುರದ ಬೆಳಕು ಕೃತಿಯ ಕರ್ತೃ, ಪ್ರಾಧ್ಯಾಪಕ ಪ್ರೊ.ಕೆ.ಆರ್.ರವಿಕಿರಣ್, ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್ ಅವರಿಗೆ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ಪುರಸ್ಕಾರ ನೀಡಿ ಗೌರವಿಸಲಾಯಿತು.
ನಗರಸಭೆ ಆಯುಕ್ತ ಪರಮೇಶ್, ಉಪಾಧ್ಯಕ್ಷೆ ಫರ್ಹಾನಾ ತಾಜ್, ನಗರಸಭಾ ಸದಸ್ಯ ಎಚ್.ಎಸ್.ಶಿವಶಂಕರ್, ಲಕ್ಷ್ಮೀಪತಿ, ನಾಗವೇಣಿ, ವತ್ಸಲ, ರೂಪಿಣಿ ಸೇರಿದಂತೆ ಹಲವು ನಗರಸಭಾ ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.
ಬೆಳ್ಳಿ ಪಲ್ಲಕ್ಕಿ ಉತ್ಸವ:
ಸಮಾಧಿ ಸ್ಥಳದಲ್ಲಿ ಪೂಜೆ:
22ಕೆಡಿಬಿಪಿ1-