ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಭರವಸೆ । ವೈಜ್ಞಾನಿಕ ಕೃಷಿ ಮಾಡಿ ರೈತರಿಗೆ ಲಾಭ ಪಡೆಯಲು ಸೂಚನೆ
ಬೇಗೂರು ಹತ್ತಿ ಮಾರುಕಟ್ಟೆಗೆ ೬ ಕೋಟಿ ಅನುದಾನ ನೀಡಲಾಗಿದೆ. ಸಾಕಾಗದಿದ್ದಲ್ಲಿ ಇನ್ನೂ ಹೆಚ್ಚುವರಿ ಹಣ ಕೊಡುತ್ತೇನೆ. ಸುಸಜ್ಜಿತ ಪ್ರಾಂಗಣವಾಗಬೇಕು ಎಂಬ ದೃಷ್ಟಿಯಿಂದ ಅಡಿಗಲ್ಲು ಹಾಕಿದ್ದೇನೆ. ೧೦ ರಿಂದ ೧೨ ತಿಂಗಳಲ್ಲಿ ಕಾಮಗಾರಿ ಮುಗಿಸಬೇಕು ಜೊತೆಗೆ ಗುಣಮಟ್ಟದ ಕೆಲಸ ಆಗಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಮುಖ್ಯಮಂತ್ರಿಗಳು ಕೃಷಿ ಮಾರುಕಟ್ಟೆ ಇಲಾಖೆಗೆ ೬೭೭ ಕೋಟಿ ಅನುದಾನ ನೀಡಿದ್ದಾರೆ. ರಾಜ್ಯದ ೧೭೦ ಎಪಿಎಂಸಿಗಳ ಮೂಲ ಸೌಕರ್ಯಕ್ಕೆ ಹಣ ಕೊಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ಬರಲಿದೆ ಎಂದರು.
ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ರ ಪ್ರಯತ್ನ ಮುಂದೆ ಪ್ರತಿಫಲ ಸಿಗಲಿದೆ. ದಿವಂಗತ ಎಚ್.ಎಸ್. ಮಹದೇವಪ್ರಸಾದ್ ದೂರದೃಷ್ಟಿ ಇದ್ದ ಕಾರಣ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳಾಗಿವೆ. ಮಹದೇವಪ್ರಸಾದ್ರ ಕನಸನ್ನು ಗಣೇಶ್ ಪ್ರಸಾದ್ ನನಸು ಮಾಡಲಿದ್ದಾರೆ ಎಂದರು. ದೇಶದಲ್ಲಿ ೧೪ ರಾಜ್ಯಗಳಲ್ಲಿ ಬರಗಾಲ ಎದುರಾಗಿದೆ. ಬರ ನಾಲ್ಕೈದು ವರ್ಷಗಳಿಗೊಮ್ಮೆ ಎದುರಾಗುತ್ತಿದ್ದು ಬರದಲ್ಲೂ ಬದುಕುವ ಶಕ್ತಿ ರೈತರಿಗಿದೆ. ಬರ ಇರುವ ಕಾರಣ ರಾಜ್ಯ ಸರ್ಕಾರ ೬೦೦ ಕೋಟಿ ಬರ ಪರಿಹಾರಕ್ಕಾಗಿ ಗುರುವಾರ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನಿಸಿದೆ ಎಂದರು. ಎಪಿಎಂಸಿ ಸದಸ್ಯ ಆರ್.ಎಸ್.ನಾಗರಾಜು ಪ್ರಾಸ್ತವಿಕವಾಗಿ ಮಾತನಾಡಿದರು. ಎಪಿಎಂಸಿ ಅಧ್ಯಕ್ಷ ಕೆ.ಎಸ್.ಶಿವಪ್ರಕಾಶ್(ರವಿ) ಸ್ವಾಗತಿಸಿದರು. ಕಾಂಗ್ರೆಸ್ ಮುಖಂಡ ಬಿ.ಸಿ. ಮಹದೇವಸ್ವಾಮಿ ಪ್ರಾರ್ಥಿಸಿದರು.ಗ್ರಾಪಂ ಅಧ್ಯಕ್ಷೆ ಜಯಮ್ಮ, ತಹಸೀಲ್ದಾರ್ ಟಿ. ರಮೇಶ್ ಬಾಬು, ಕೃಷಿ ಮಾರಾಟ ಇಲಾಖೆ ನಿರ್ದೇಶಕ ಜಿ.ಎಂ. ಗಂಗಾಧರಸ್ವಾಮಿ, ಅಧೀಕ್ಷಕ ಅಭಿಯಂತರ ಸಿ.ಜಿ. ರಘುನಂದನ್, ಸಹಾಯಕ ನಿರ್ದೇಶಕ ಟಿ.ವಿ. ಪ್ರಕಾಶ್ ಕುಮಾರ್, ಎಪಿಎಂಸಿ ಉಪಾಧ್ಯಕ್ಷ ವೆಂಕಟನಾಯಕ, ಕಾರ್ಯದರ್ಶಿ ಶ್ರೀಧರ್ ಸೇರಿದಂತೆ ಎಪಿಎಂಸಿ ಸದಸ್ಯರು ಇದ್ದರು.
ಕೃಷಿ ಉತ್ಪನ್ನಗಳಿಗೆ ಯೋಗ್ಯವಾದ ದರ ದೊರೆತ್ತಿಲ್ಲ:
ದೇಶದ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳು ಮನಸ್ಸು ಮಾಡಿದರೆ ರೈತರ ಕೃಷಿ ಉತ್ಪನ್ನಗಳಿಗೆ ಯೋಗ್ಯ ದರ ನೀಡಲು ಸಾಧ್ಯವಾಗಲಿದೆ. ರೈತರಿಗೆ ವಿದ್ಯುತ್, ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ಗೊಬ್ಬರ ರೈತ ಬಯಸುವುದಿಲ್ಲ ಆದರೆ ರೈತನಿಗೆ ಬೇಕಾಗಿರೋದು ಸ್ಥಿರ ಬೆಲೆ ಕೊಡಿ ಅಂತಾನೆ ಎಂದು ಮನಬಿಚ್ಚಿ ಹೇಳಿದರು. ರಾಜ್ಯ ಸಕ್ಕರೆ ಉತ್ಪಾದನೆಯಲ್ಲಿ 3 ನೇ ಸ್ಥಾನದಲ್ಲಿದೆ. ಸಕ್ಕರೆ ಸಕ್ಕರೆಯಾಗಿ ಉಳಿದಿಲ್ಲ. ಇಥೆನಾಲ್ನಿಂದ ಪೆಟ್ರೋಲ್, ಡಿಸೇಲ್ ಉತ್ಪಾದನೆ ಆಗುತ್ತಿದೆ ಆದರೆ ರೈತರು ಸಂಕಟದಿಂದ ಹೊರ ಬರಲು ಆಗುತ್ತಿಲ್ಲ.
ಎಪಿಎಂಸಿಗಳಲ್ಲಿ ಕಮಿಷನ್ ಪಡೆಯುವುದು ಇನ್ನಿಲ್ಲ
ದ್ವಿಗಣ ಆಗಲಿಲ್ಲ:
ಬೇಗೂರು ಗ್ರಾಮದಲ್ಲಿ ಹತ್ತಿ ಮಾರುಕಟ್ಟೆ ಭೂಮಿ ಸಮಾರಂಭಕ್ಕೆ ಸಚಿವ,ಸಂಸದ,ಶಾಸಕರು ಗೈರು ಹಾಜರಿ ಎದ್ದು ಕಾಣುತ್ತಿತ್ತು. ಪಶು ಸಂಗೋಪನೆ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಂಸದ ವಿ.ಶ್ರೀನಿವಾಸ್ ಪ್ರಸಾದ್, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಎಂ.ಆರ್.ಮಂಜುನಾಥ್, ವಿ.ಪ. ಸದಸ್ಯರಾದ ಮರಿತಿಬ್ಬೇಗೌಡ, ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಮಧು ಜಿ ಮಾದೇಗೌಡ ಗೈರು ಹಾಜರಾಗಿದ್ದರು.
ಮಾಜಿ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ದೂರದೃಷ್ಟಿಯ ಫಲವಾಗಿ ಬೇಗೂರಲ್ಲಿ ಹತ್ತಿ ಮಾರುಕಟ್ಟೆಗೆ ಚಾಲನೆ ಸಿಕ್ಕಿದೆ, ಬೇಗೂರು ಬಳಿ ಜಾಗ ಗುರುತಿಸಿ ಕೊಟ್ಟು ಆರು ವರ್ಷಗಳಿದ್ದರೂ ಹತ್ತಿ ಮಾರುಕಟ್ಟೆ ಆರಂಭ ನೆನಗುದಿಗೆ ಬಿದ್ದಿತ್ತು ಇದೀಗ ಕಾಂಗ್ರೆಸ್ ಸರ್ಕಾರದಲ್ಲಿಯೇ ಹತ್ತಿ ಮಾರುಕಟ್ಟೆಗೆ ಚಾಲನೆ ಸಿಕ್ಕಿದೆ ಎಂದು ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಹೇಳಿದರು.
ತಾಲೂಕಿನ ಬೇಗೂರು ಬಳಿ ಕೃಷಿ ಮಾರಾಟ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆರ್ಐಡಿಎಫ್ -೨೮ರ ಯೋಜನೆಯಲ್ಲಿ ೬.೫ ಕೋಟಿ ವೆಚ್ಚದಲ್ಲಿ ಹತ್ತಿ ಮಾರುಕಟ್ಟೆಯ ಹರಾಜು ಕಟ್ಟೆ, ಸಿಸಿ ರಸ್ತೆ, ಅಸ್ಪಾಲ್ಟ್ ರಸ್ತೆ, ಸಿಸಿ ಚರಂಡಿ, ಆಡಳಿತ ಕಚೇರಿ ಮತ್ತು ಶೌಚಾಲಯ ಕಾಮಗಾರಿಗೆ ಗುದ್ದಲಿ ಪೂಜೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನನ್ನ ತಂದೆ ದಿವಂಗತ ಎಚ್.ಎಸ್. ಮಹದೇವಪ್ರಸಾದ್ರಿಗೆ ಕ್ಷೇತ್ರದ ರೈತರ ಮೇಲೆ ಕಾಳಜಿಯಿದ್ದ ಫಲವಾಗಿ ೧೯೯೭ ರಲ್ಲಿಯೇ ಗುಂಡ್ಲುಪೇಟೆ ಬಳಿ ಕೃಷಿ ಉತ್ಪನ್ನ ಮಾರುಕಟ್ಟೆ ಆರಂಭಕ್ಕೆ ಕಾರಣರಾದರು. ನಂತರ ತೆರಕಣಾಂಬಿಯಲ್ಲಿ ಉಪಪ್ರಾಂಗಣ ಆರಂಭಿಸಿ ಎಪಿಎಂಸಿಗೆ ಮೂಲಭೂತ ಸೌಕರ್ಯ ಕಲ್ಪಿಸಿದ್ದರು ಎಂದರು.ಗುಂಡ್ಲುಪೇಟೆ ಹಾಗೂ ತೆರಕಣಾಂಬಿ ಎಪಿಎಂಸಿ ಸ್ಥಾಪಿಸುವ ಜೊತೆಗೆ ಬೇಗೂರು ಭಾಗ ಹಾಗೂ ನಂಜನಗೂಡು, ಎಚ್.ಡಿ.ಕೋಟೆ ತಾಲೂಕಿನ ಕೆಲ ಭಾಗದಲ್ಲಿ ಹತ್ತಿ ಬೆಳೆ ಹೆಚ್ಚಾಗಿ ಬೆಳೆಯುತ್ತಿದ್ದನ್ನು ಗಮನಿಸಿ ಬೇಗೂರಲ್ಲಿ ಹತ್ತಿ ಮಾರುಕಟ್ಟೆ ಸ್ಥಾಪನೆಗೂ ಕಾರಣರಾಗಿದ್ದಾರೆ ಎಂದರು.ಹೆಚ್ಎಸ್ಎಂ ನಿಧನದ ಬಳಿಕ ಹತ್ತಿ ಮಾರುಕಟ್ಟೆ ಆರಂಭಕ್ಕೆ ನೆನಗುದಿದೆ ಬಿತ್ತು. ನಾನು ಶಾಸಕನಾದ ನಂತರ ಕೃಷಿ ಮಾರುಕಟ್ಟೆ ಆರಂಭಿಸಲು ಅನುದಾನಕ್ಕಾಗಿ ಸಚಿವರಾದ ಶಿವಾನಂದ ಎಸ್ ಪಾಟೀಲರ ಮೊರೆ ಹೋದೆ ಆಗ ಸಚಿವರು ಮುಖ್ಯಮಂತ್ರಿ ಮನವೊಲಿಸಿ ಕಳೆದ ಆಗಸ್ಟ್ ತಿಂಗಳಲ್ಲಿ ಸಂಪುಟ ಸಭೆಯಲ್ಲಿ ಒಪ್ಪಿಗೆ ಕೊಡಿಸಿ ಅನುದಾನ ಕೊಟ್ಟಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಹಾಗೂ ಕೃಷಿ ಮಾರಾಟ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ 5 ಗ್ಯಾರಂಟಿ ಯೋಜನೆ ಜಾರಿಗೆ ತಂದು ಯಶಸ್ವಿಯೂ ಆಗಿದೆ ಅಲ್ಲದೆ ಕಾಂಗ್ರೆಸ್ ಸರ್ಕಾರ ಜನಪರ ಇದೆ ಇನ್ನೂ ಸಾಕಷ್ಟು ಅಭಿವೃದ್ಧಿ ಕೆಲಸವಾಗಬೇಕು ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಲು ಶ್ರಮಿಸುವೆ ಎಂದರು. ಕ್ಷೇತ್ರದ ಶಾಸಕರಾದ ಕೆ.ಎಸ್.ನಾಗರತ್ನಮ್ಮ ಕಾಲದಲ್ಲಿ ರೈತರಿಗೆ ಅನುಕೂಲವಾಗಲಿ ಎಂದು ಶಿವಪುರ ಬಳಿ ಕಲ್ಕಟ್ಟೆ ಕೆರೆ ನಿರ್ಮಿಸಲು ಕಾರಣರಾದರು. ಮಹದೇವಪ್ರಸಾದ್ ೨೦೧೩ ರಲ್ಲಿ ಸಚಿವರಾದ ಬಳಿಕ ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ಬಿಡುಗಡೆ ಮಾಡಿಸಿ ಕೆರೆಗೆ ನೀರು ತುಂಬಿಸಲು ಕಾರಣರಾದರು ಎಂದರು.ಸಚಿವರಲ್ಲಿ ಮನವಿ:ಗುಂಡ್ಲುಪೇಟೆ ಎಪಿಎಂಸಿಯಲ್ಲಿ ಕೋಲ್ಡ್ ಸ್ಟೋರೇಜ್ ಹಾಗೂ ಎಪಿಎಂಸಿಗೆ ಮೂಲಭೂತ ಸೌಕರ್ಯಕ್ಕೆ ಅನುದಾನ ನೀಡಬೇಕು ಎಂದು ಸಚಿವ ಶಿವಾನಂದ ಎಸ್ ಪಾಟೀಲ್ರಲ್ಲಿ ಶಾಸಕರು ಮನವಿ ಮಾಡಿದರು.