ಹಾವೇರಿ ನಗರಸಭೆ ಬಜೆಟ್‌: ರಸ್ತೆ, ಚರಂಡಿ ದುರಸ್ತಿಗೆ ₹3.95 ಕೋಟಿ

KannadaprabhaNewsNetwork |  
Published : Mar 07, 2024, 01:55 AM IST
6ಎಚ್‌ವಿಆರ್‌1 | Kannada Prabha

ಸಾರಾಂಶ

ಹಾವೇರಿ ನಗರಸಭೆಯ 2024–25ನೇ ಸಾಲಿನ ಆಯವ್ಯಯ ಮಂಡನಾ ಸಭೆಯಲ್ಲಿ ನಗರಸಭೆಯ ಆಡಳಿತಾಧಿಕಾರಿ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ ₹ 11.42 ಲಕ್ಷದ ಉಳಿತಾಯ ಬಜೆಟ್‌ ಮಂಡಿಸಿದರು.

ಒಟ್ಟು ₹44.54 ಕೋಟಿ ಆದಾಯ ನಿರೀಕ್ಷೆ । ಕುಡಿಯುವ ನೀರಿನ ಸಮರ್ಪಕ ಸರಬರಾಜಿಗೆ ₹ 2.12 ಕೋಟಿ

ಕನ್ನಡಪ್ರಭ ವಾರ್ತೆ ಹಾವೇರಿ

ಹಾವೇರಿ ನಗರಸಭೆಯ 2024–25ನೇ ಸಾಲಿನ ಆಯವ್ಯಯ ಮಂಡನಾ ಸಭೆಯಲ್ಲಿ ನಗರಸಭೆಯ ಆಡಳಿತಾಧಿಕಾರಿ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ ₹ 11.42 ಲಕ್ಷದ ಉಳಿತಾಯ ಬಜೆಟ್‌ ಮಂಡಿಸಿದರು.

ಪ್ರಾರಂಭಿಕ ಶುಲ್ಕ ₹6.10 ಕೋಟಿ, ನಿರೀಕ್ಷಿತ ಜಮೆಗಳು ₹25.72 ಕೋಟಿ, ನಿರೀಕ್ಷಿತ ಬಂಡವಾಳ ₹ 9.55 ಕೋಟಿ, ನಿರೀಕ್ಷಿತ ಅಸಾಮಾನ್ಯ ಜಮೆ ₹ 9.27 ಕೋಟಿ ಸೇರಿದಂತೆ ಒಟ್ಟು ₹44.54 ಕೋಟಿ ಆದಾಯ ನಿರೀಕ್ಷಿಸಲಾಗಿದೆ.

ನಿರೀಕ್ಷಿತ ರಾಜಸ್ವ ಪಾವತಿ ₹23.55 ಕೋಟಿ, ನಿರೀಕ್ಷಿತ ಬಂಡವಾಳ ಪಾವತಿ ₹ 11.61 ಕೋಟಿ, ನಿರೀಕ್ಷಿತ ಅಸಾಮಾನ್ಯ ಪಾವತಿ ₹ 9.27 ಕೋಟಿ ಸೇರಿದಂತೆ ಒಟ್ಟು ₹ 44.43 ಕೋಟಿ ನಿರೀಕ್ಷಿತ ಖರ್ಚನ್ನು ಅಂದಾಜು ಮಾಡಲಾಗಿದೆ.

ನಗರಸಭೆಯ ಸ್ವಂತ ಮೂಲಗಳಾದ ಆಸ್ತಿ ತೆರಿಗೆ, ನೀರಿನ ಕರ, ಅಭಿವೃದ್ಧಿ ಕರ, ಮಳಿಗೆ ಬಾಡಿಗೆ ಹಾಗೂ ಇತರೆ ಶುಲ್ಕಗಳಿಂದ ಒಟ್ಟು ₹16.02 ಕೋಟಿ ಆದಾಯ ನಿರೀಕ್ಷಿಸಲಾಗಿದೆ.

ನಗರದಲ್ಲಿನ ಎಲ್ಲ ನಾಗರಿಕರಿಗೂ ಕುಡಿಯುವ ನೀರಿನ ಸಮರ್ಪಕ ಸರಬರಾಜಿಗಾಗಿ ಈಗಾಗಲೇ ನಗರದಲ್ಲಿನ 24x7 ಯೋಜನೆ ಅನುಷ್ಠಾನಗೊಂಡು ಕಾಮಗಾರಿ ಪ್ರಗತಿಯ ಹಂತದಲ್ಲಿರುತ್ತದೆ. ನೀರು ಸರಬರಾಜು ನಿರ್ವಹಣೆ ಮತ್ತು ವಾಲ್‌ಮನ್‌ಗಳ ವೇತನ ನಿರ್ವಹಣೆಗಾಗಿ ಒಟ್ಟಾರೆಯಾಗಿ ₹ 2.12 ಕೋಟಿ ಮೀಸಲಿರಿಸಲಾಗಿದೆ.

ರಸ್ತೆ, ಚರಂಡಿ ದುರಸ್ತಿ ಹಾಗೂ ನಿರ್ಮಾಣಕ್ಕಾಗಿ ₹3.95 ಕೋಟಿ, ಬೀದಿದೀಪಗಳ ವಾರ್ಷಿಕ ನಿರ್ವಹಣೆಗೆ ₹1.15 ಕೋಟಿ, ಸಾರ್ವಜನಿಕ ಶೌಚಾಲಯ ನಿರ್ಮಾಣ ಮತ್ತು ದುರಸ್ತಿಗಾಗಿ ₹20 ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣೆಗಾಗಿ ಲ್ಯಾಂಡ್‌ ಫಿಲ್‌ ಸೈಟ್‌ ಅಭಿವೃದ್ಧಿಗಾಗಿ ₹1.54 ಕೋಟಿ, ನಗರಸಭೆಯ ಹೈಸ್ಕೂಲ್‌ ಅಭಿವೃದ್ಧಿಗಾಗಿ ₹ 5 ಲಕ್ಷ, ಉದ್ಯಾನಗಳ ಅಭಿವೃದ್ಧಿಗೆ ₹50 ಲಕ್ಷ ವಿನಿಯೋಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ವೃತ್ತಗಳ ಅಭಿವೃದ್ಧಿಗೆ ₹30 ಲಕ್ಷ:

ನಗರದ ಸೌಂದರ್ಯ ಹೆಚ್ಚಿಸಲು ಆಯ್ದ ವೃತ್ತಗಳ ಅಭಿವೃದ್ಧಿಗಾಗಿ ₹30 ಲಕ್ಷ, ಮಳೆ ನೀರು ಚರಂಡಿ ನಿರ್ಮಾಣಕ್ಕಾಗಿ ₹20 ಲಕ್ಷ, ಅಂಗನವಾಡಿ ಕಟ್ಟಡ ನಿರ್ಮಾಣ ಮತ್ತು ದುರಸ್ತಿಗಾಗಿ ₹10 ಲಕ್ಷ, ಸ್ಮಶಾನಗಳ ಅಭಿವೃದ್ದಿ ಮತ್ತು ವಿದ್ಯುತ್ ಚಿತಾಗಾರಕ್ಕಾಗಿ ₹ 35 ಲಕ್ಷ, ನಗರಸಭೆಯ ಹುತಾತ್ಮರ ಸ್ಮಾರಕಗಳ ಅಭಿವೃದ್ಧಿಗೆ ₹5 ಲಕ್ಷ, ನಗರದಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅನುಷ್ಠಾನಕ್ಕೆ ₹20 ಲಕ್ಷ, ವಾಣಿಜ್ಯಮಳಿಗೆಗಳ ನಿರ್ಮಾಣಕ್ಕೆ ₹65 ಲಕ್ಷ, ಕಚೇರಿ ಕಟ್ಟಡಕ್ಕೆ ಸೋಲಾರ್‌ ವ್ಯವಸ್ಥೆ ಕಲ್ಪಿಸಲು ₹15 ಲಕ್ಷ, ಕೆರೆ ಅಭಿವೃದ್ಧಿಗೆ ₹30 ಲಕ್ಷ ಮೀಸಲಿರಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರದ ಅನುದಾನ ನಿರೀಕ್ಷೆ:

ಸರ್ಕಾರದಿಂದ ಬಿಡುಗಡೆಯಾಗುವ ನಿರೀಕ್ಷಿತ ಅನುದಾಗಳಾದ ಎಸ್‌.ಎಫ್‌.ಸಿ ಮುಕ್ತನಿಧಿಯಿಂದ ₹4.29 ಕೋಟಿ, ಎಸ್‌.ಎಫ್‌.ಸಿ. ವಿದ್ಯುತ್‌ ಅನುದಾನದಿಂದ ₹4.50 ಕೋಟಿ, ಎಸ್‌.ಎಫ್‌.ಸಿ ವೇತನ ಅನುದಾನದಿಂದ ₹5.20 ಕೋಟಿ, ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ 15ನೇ ಹಣಕಾಸು ಯೋಜನೆಯಡಿ ₹7.05 ಕೋಟಿ, ಎಸ್‌.ಎಫ್‌.ಸಿ. ಕುಡಿಯುವ ನೀರಿನ ಯೋಜನೆಗಾಗಿ ₹25 ಲಕ್ಷ ಹಾಗೂ ಅಮೃತ್‌ (2.0) ನಗರ ಯೋಜನೆಯಡಿ ₹55 ಲಕ್ಷ ಅನುದಾನ ನಿರೀಕ್ಷಿಸಲಾಗಿದೆ ಎಂದು ರಘುನಂದನ ಮೂರ್ತಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಚೇರಿಯಲ್ಲೇ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಆತ್ಮ*ತ್ಯೆ
ಡಿಜಿ ಅರೆಸ್ಟ್‌ನಿಂದ ₹15 ಕೋಟಿ ಕಳೆದುಕೊಂಡ ವೃದ್ಧ ಉದ್ಯಮಿ!