ಮಾಗಡಿಯಲ್ಲಿ ಭಾರಿ ಮಳೆ: ತಗ್ಗು ಪ್ರದೇಶಗಳಿಗೆ ನೀರು

KannadaprabhaNewsNetwork |  
Published : Oct 23, 2024, 01:46 AM IST
22ಮಾಗಡಿ1 : ತಹಶೀಲ್ದಾರ್ ಶರತ್ ಕುಮಾರ್22ಮಾಗಡಿ2 : ಮಾಗಡಿ ತಾಲೂಕಿನ ಬಾಚೇನಟ್ಟಿ ಗ್ರಾಮದ ಸಮೀಪದಲ್ಲಿರುವ ಮಾಗಡಿ ಕೆಂಪೇಗೌಡ ಹಳ್ಳಿ ಬಾಡೂಟ ಹೋಟೆಲ್ ಗೆ ಏಕಾಏಕಿ ರಾತ್ರಿ ಸುರಿದ ಭಾರಿ ಮಳೆಗೆ ಹೋಟೆಲ್ ಒಳಗೆ ನುಗ್ಗಿರುವ ನೀರು | Kannada Prabha

ಸಾರಾಂಶ

ಮಾಗಡಿ: ಒಂದು ವಾರದಿಂದ ನಿರಂತರ ಸುರಿಯುತ್ತಿರುವ ಮಳೆಗೆ ಸಾಕಷ್ಟು ಹಾನಿ ಉಂಟಾಗಿದ್ದು, ತಾಲೂಕು ಆಡಳಿತ ಮಳೆ ಹಾನಿ ಹಿನ್ನೆಲೆಯಲ್ಲಿ ವಾರ್ ರೂಂ ತೆರೆದಿದೆ. ಸಾರ್ವಜನಿಕರು ಮಳೆ ಹಾನಿಗೆ ದೂ: 9164970009 ಇಲ್ಲಿಗೆ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳಬಹುದು ಎಂದು ತಹಸೀಲ್ದಾರ್ ಶರತ್ ಕುಮಾರ್ ತಿಳಿಸಿದರು.

ಮಾಗಡಿ: ಒಂದು ವಾರದಿಂದ ನಿರಂತರ ಸುರಿಯುತ್ತಿರುವ ಮಳೆಗೆ ಸಾಕಷ್ಟು ಹಾನಿ ಉಂಟಾಗಿದ್ದು, ತಾಲೂಕು ಆಡಳಿತ ಮಳೆ ಹಾನಿ ಹಿನ್ನೆಲೆಯಲ್ಲಿ ವಾರ್ ರೂಂ ತೆರೆದಿದೆ. ಸಾರ್ವಜನಿಕರು ಮಳೆ ಹಾನಿಗೆ ದೂ: 9164970009 ಇಲ್ಲಿಗೆ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳಬಹುದು ಎಂದು ತಹಸೀಲ್ದಾರ್ ಶರತ್ ಕುಮಾರ್ ತಿಳಿಸಿದರು.

ತಹಸೀಲ್ದಾರ್ ಶರತ್ ಕುಮಾಮಾರ್‌ ಮಾತನಾಡಿ, ವಾರ್‌ ರೂಂ 24 ಗಂಟೆಯೂ ತೆರೆದಿದ್ದು, ಮಳೆ ಅನಾಹುತಗಳನ್ನು ಕೂಡಲೇ ಕರೆ ಮಾಡಿ ತಿಳಿಸಬಹುದು. ಈಗಾಗಲೇ ಹಾನಿ ಉಂಟಾದ ಸ್ಥಳಕ್ಕೆ ನಾನು ಮತ್ತು ಆರ್‌ಐ, ವಿಎಗಳು ಭೇಟಿ ನೀಡಿ ಹಾನಿ ಪ್ರಮಾಣದ ವರದಿ ಪಡೆದು ಸರ್ಕಾರಕ್ಕೆ ಕಳುಹಿಸಿ ಸೂಕ್ತ ಪರಿಹಾರ ಕೊಡಿಸಲಿದ್ದೇವೆ ಎಂದು ಹೇಳಿದರು. ಕೆಶಿಪ್‌ ಎಡವಟ್ಟು:

ಮಾಗಡಿ -ಬೆಂಗಳೂರು ಮುಖ್ಯರಸ್ತೆ ನಿರ್ವಹಿಸುತ್ತಿರುವ ಕೆಶಿಪ್ ಎಡವಟ್ಟಿನಿಂದ ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ತಾಲೂಕಿನ ಬಾಚೇನಟ್ಟಿ ಸಮೀಪದ ಮಾಗಡಿ ಕೆಂಪೇಗೌಡಹಳ್ಳಿ ಬಾಡೂಟ ಹೋಟೆಲ್‌ಗೆ ನೀರು ನುಗ್ಗಿ ಎರಡೂವರೆ ಲಕ್ಷ ಮೌಲ್ಯದ ದಿನಸಿ ಹಾಳಾಗಿದೆ. ಜೊತೆಗೆ ಹೋಟೆಲ್‌ನಲ್ಲಿದ್ದ ಫ್ರಿಡ್ಜ್‌, ಎಲೆಕ್ಟ್ರಿಕ್ ವಸ್ತುಗಳು ಹಾನಿಯಾಗಿ ನಷ್ಟ ಉಂಟಾಗಿದೆ ಎಂದು ಹೋಟೆಲ್‌ ಮಾಲೀಕ ಶಿವಮೂರ್ತಿ ತಿಳಿಸಿದ್ದಾರೆ.

ರಸ್ತೆ ಅಭಿವೃದ್ಧಿಗಾಗಿ ಹೋಟಲ್‌ನಿಂದ 13 ಅಡಿ ರಸ್ತೆ ಎತ್ತರ ಮಾಡಿದ್ದು ಈಗ ವರದೇನಹಳ್ಳಿ ಕಡೆಯಿಂದ ಬರುವ ನೀರು ನೇರವಾಗಿ ನಮ್ಮ ಹೋಟೆಲ್‌ಗೆ ನುಗ್ಗುತ್ತೆ. ಇಲ್ಲೊಂದು ದೊಡ್ಡ ಮೋರಿ ನಿರ್ಮಿಸಿಕೊಡುವಂತೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಗೆ ಮನವಿ ಮಾಡಿದೆವು. 2019ರಿಂದಲೂ ಪ್ರತಿ ವರ್ಷ ಮಳೆಗಾಲದಲ್ಲಿ ನಾವು ಈ ರೀತಿಯ ತೊಂದರೆ ಮತ್ತು ನಷ್ಟ ಅನುಭವಿಸುತ್ತಿದ್ದೇವೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ನಮಗಾಗಿರುವ ನಷ್ಟ ಪರಿಹಾರವನ್ನು ಕೆಶಿಫ್ ಕಟ್ಟಿಕೊಡಬೇಕು. ಅಲ್ಲದೆ, ಮಳೆ ನೀರು ಹೋಟೆಲ್‌ಗೆ ಬರದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಕೆಶಿಪ್ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ಶಿವಮೂರ್ತಿ ಎಚ್ಚರಿಕೆ ನೀಡಿದ್ದಾರೆ.

ಅಧಿಕಾರಿಗಳ ಭೇಟಿ:

ಪಟ್ಟಣದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ನೀರು ನುಗ್ಗಿರುವ ತಗ್ಗು ಪ್ರದೇಶಗಳಿಗೆ ಪುರಸಭೆ ಮುಖ್ಯಾಧಿಕಾರಿ ಶಿವರುದ್ರಯ್ಯ ಹಾಗೂ ಪುರಸಭಾಧ್ಯಕ್ಷೆ ರಮ್ಯ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ ಮಾಹಿತಿ ಪಡೆದು ಜೆಸಿಬಿ ಯಂತ್ರಗಳ ಮೂಲಕ ತಗ್ಗು ಪ್ರದೇಶಗಳಲ್ಲಿ ನುಗ್ಗಿರುವ ನೀರು ಜೆಸಿಬಿ ಯಂತ್ರಗಳಿಂದ ಹೊರಚೆಲ್ಲಿ ತಾತ್ಕಾಲಿಕ ಪರಿಹಾರ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.

22ಮಾಗಡಿ2 :

ಮಾಗಡಿ ತಾಲೂಕಿನ ಬಾಚೇನಟ್ಟಿ ಸಮೀಪದಲ್ಲಿರುವ ಮಾಗಡಿ ಕೆಂಪೇಗೌಡಹಳ್ಳಿ ಬಾಡೂಟ ಹೋಟೆಲ್‌ಗೆ ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಹೋಟೆಲ್ ಒಳಗೆ ನುಗ್ಗಿರುವ ನೀರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ