ಗ್ರಾಪಂ, ಜಿಪಂಗೆ ದೂರು ನೀಡಿದರೂ ಅಧಿಕಾರಿ ವರ್ಗದ ನಿರ್ಲಕ್ಷ್ಯ । ಬೆಳೆದ ಎಳನೀರು, ಕಾಯಿ ಕೀಳಲಾಗದೆ ಪರದಾಟ
ಯರಿಯೂರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ನಿರ್ಲಕ್ಷ್ಯತೆಯಿಂದ ಚರಂಡಿ ತಾಜ್ಯ ನೀರನ್ನು ಕೃಷಿ ಜಮೀನಿಗೆ ಹರಿಯಲು ಬಿಟ್ಟಿರುವುದರಿಂದ ರೈತರು ಕಂಗಲಾಗಿದ್ದಾರೆ. ಗ್ರಾಮದ ಮಂಜುನಾಥಸ್ವಾಮಿ ಎಂಬುವರಿಗೆ ಸೇರಿದ ಕೃಷಿ ಜಮೀನಿಗೆ ಗ್ರಾಮ ಪಂಚಾಯಿತಿ ಚರಂಡಿ ನೀರನ್ನು ಕೃಷಿ ಚಟುವಟಿಕೆ ನಡೆಸುವ ಜಮೀನಿಗೆ ಹರಿಯ ಬಿಟ್ಟಿರುವುದರಿಂದ ವ್ಯವಸಾಯ ಮಾಡಲು ತೊಂದರೆ ಆಗಿದೆ.
ಈಗಾಗಲೇ ಮಂಜುನಾಥಸ್ವಾಮಿ ತಮ್ಮ ಕೃಷಿ ಜಮೀನಿಗೆ ತಾಜ್ಯ ಚರಂಡಿ ನೀರು ಬಿಟ್ಟಿರುವ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ದೂರು ನೀಡಿದರೂ ಕ್ರಮ ವಹಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದ್ದಾರೆ.ಸಿಇಒ ಮಾತಿಗೂ ಬೆಲೆ ಇಲ್ಲ:
ತೋಟಕ್ಕೆ ತ್ಯಾಜ್ಯ ನೀರು ನುಗ್ಗಿರುವ ವಿಚಾರ ನನಗೆ ಗೊತ್ತಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರಿಂದ ಮಾಹಿತಿ ಪಡೆದು ಕ್ರಮ ವಹಿಸುತ್ತೇನೆ.
ನಾಲ್ಕನೇ ವಾರ್ಡ್ನಲ್ಲಿ ನಮ್ಮ ಕೃಷಿ ಜಮೀನಿಗೆ ನೀರು ನುಗ್ಗುತ್ತಿದೆ. ಹತ್ತಾರು ಬಾರಿ ಅಧಿಕಾರಿಗಳ ವರ್ಗ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ವಹಿಸಿಲ್ಲ. ಈಗ ಮತ್ತೆ ಜಿಪಂ ಸಿಇಒ ಮತ್ತು ಜಿಲ್ಲಾಧಿಕಾರಿಗಳಿಗೆ ಮತ್ತೆ ದೂರು ನೀಡುತ್ತೇನೆ.