ಕನ್ನಡಪ್ರಭ ವಾರ್ತೆ ತರೀಕೆರೆ
ಪಟ್ಟಣದ ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಆಯೋಜಿಸಿದ ಬ್ಯಾಂಕ್ಗಳ ವ್ಯವಹಾರದ ವೀಕ್ಷಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಪಠ್ಯಪುಸ್ತಕ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಸಾಮಾನ್ಯ ಜ್ಞಾನ, ಬೌದ್ದಿಕ ವಿಕಾಸಕ್ಕೆ ಶಾಲೆಗಳಲ್ಲಿ ಸಂತೆ ಎನ್ನುವ ಕಾರ್ಯಕ್ರಮವನ್ನು ಪ್ರತಿವರ್ಷ ನಡೆಸಿಕೊಂಡು ಬಂದಿದ್ದೇವೆ, ಇದರಿಂದ ವಸ್ತುಗಳ ಬೆಲೆ ಮಕ್ಕಳಿಗೆ ತಿಳಿಯುತ್ತದೆ ಎಂದು ಹೇಳಿದರು.ವಿದ್ಯಾರ್ಥಿಗಳಿಗೆ ಗಣಿತ ಕಲಿಕೆಯಲ್ಲಿ ಹೆಚ್ಚಿನ ಜ್ಞಾನ ಪಡೆಯಲು ವ್ಯವಹಾರಿಕ ಜ್ಞಾನ ಮುಖ್ಯ ಹಾಗೂ ಅನುಭವಾತ್ಮಕ ಕಲಿಕೆಯಾಂದಿಗೆ ಲಾಭ ನಷ್ಟದ ಅರಿವಿನೊಂದಿಗೆ ಲಾಭದ ಹಣವನ್ನು ತಮ್ಮ ಮುಂದಿನ ಜೀವನದ ಹಾದಿಯನ್ನು ಭದ್ರ ಪಡಿಸಿ ಕೊಳ್ಳಲು ಬ್ಯಾಂಕ್ ವ್ಯವಹಾರವು ಮುಖ್ಯ ತರೀಕೆರೆಯ ಕೆಲವು ಬ್ಯಾಂಕ್ಗಳಿಗೆ ಶಿಕ್ಷಕಿಯರೊಂದಿಗೆ ವಿದ್ಯಾರ್ಥಿಗಳು ವ್ಯವಹಾರದ ವೀಕ್ಷಣೆಗೆ ಕಳಿಸಿಕೊಡಲಾಗಿದೆ ಎಂದು ಹೇಳಿದರು.
ಬ್ಯಾಂಕ್ ಸಿಬ್ಬಂದಿ ವರ್ಗ ಬ್ಯಾಂಕಿಗೆ ಹಾಜರಾದಾಗ ಮೊದಲು ಬಯೋಮೆಟ್ರಿಕ್ ಹಾಜರಾತಿ ಯಂತ್ರಕೆ ಹೆಬ್ಬೆರಳು ಇಟ್ಟು ಹಾಜರಾತಿಯನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಗೆ ನಿಗದಿಪಡಿಸಿರುವ ಕೌಂಟರ್ಗಳಿಗೆ ತೆರಳಬೇಕು ಎಂಬುದನ್ನು ತಿಳಿಸಿ. ಮಕ್ಕಳಿಗೆ ಕ್ಯಾಶ್ ಕೌಂಟರನಲ್ಲಿ ಹಣ ಕಟ್ಟುವುದು, ಹಣ ತೆಗೆದುಕೊಳ್ಳುವುದು, ಹಣ ವರ್ಗಾವಣೆಯ ಬಗ್ಗೆ ತಿಳಿಸಿ, ನೋಟು ಎಣಿಕೆ ಯಂತ್ರದ ಮೂಲಕ ಹಣ ಎಣಿಸುವುದು ತೋರಿಸಿದರು,
ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಪಿ ಕಾರ್ಡ್ ಬ್ಯಾಂಕ್ ಮತ್ತು ಶಿವ ಸಹಕಾರಿ ಬ್ಯಾಂಕ್ಗಳಿಗೆ ವಿದ್ಯಾರ್ಥಿಗಳು ಭೇಟಿ ನೀಡಿ ಪ್ರತಿಯೊಂದು ಬ್ಯಾಂಕಿನ ಮಾಹಿತಿ ಪಡೆದರು, ಪ್ರತಿ ಬ್ಯಾಂಕಿನಲ್ಲಿ ಮಕ್ಕಳ ಕೇಳುವ ಪ್ರಶ್ನೆಗೆ ಅಲ್ಲಿನ ಮ್ಯಾನೇಜರ್, ಅಧ್ಯಕ್ಷರು ಮತ್ತು ಸದಸ್ಯರು ಉತ್ತರ ನೀಡಿದರು.