ಅಜೀಜಅಹ್ಮದ ಬಳಗಾನೂರ
ಇದು ಜನನಿಬಿಡ ಪ್ರದೇಶವಾಗಿರುವ ಕಿತ್ತೂರು ಚೆನ್ನಮ್ಮ ವೃತ್ತದ ಕೂಗಳತೆಯ ದೂರದಲ್ಲಿರುವ ಜನತಾ ಬಜಾರ್ ವ್ಯಾಪಾರಸ್ಥರ ಸ್ಥಿತಿ. ಸಂಕಷ್ಟಗಳ ಸರಮಾಲೆಯಲ್ಲಿಯೇ ಕಾಲ ಕಳೆಯುತ್ತಿರುವ ಜನತಾ ಬಜಾರ್ ವ್ಯಾಪಾರಸ್ಥರಿಗೆ ಮತ್ತೊಂದು ಸಂಕಷ್ಟ ಎದುರಿಸುವಂತಾಗಿದೆ. ಒಳಚರಂಡಿ ಕಾಮಗಾರಿ ನೆಪದಲ್ಲಿ ಕಳೆದ 8-10 ದಿನಗಳಿಂದ ಇಲ್ಲಿನ ಜನತಾ ಬಜಾರ್ನ ಎದುರಿನ ರಸ್ತೆಯಲ್ಲಿ ತೆಗ್ಗು ತೆಗೆದು ಹಾಗೆಯೇ ಬಿಟ್ಟಿದ್ದು, ವ್ಯಾಪಾರಸ್ಥರು, ಜನತೆ ಸಂಚರಿಸಲು ಸಂಕಷ್ಟ ಪಡುವಂತಾಗಿದೆ. ಯಾವಾಗ ಈ ತೆಗ್ಗುಗಳನ್ನು ಮುಚ್ಚಿ ವ್ಯಾಪಾರಕ್ಕೆ ಅನುಕೂಲ ಕಲ್ಪಿಸಿಕೊಡುತ್ತಾರೆ ಎಂದು ಕಾಯುವ ಪರಿಸ್ಥಿತಿ ಎದುರಾಗಿದೆ.
₹18.50 ಕೋಟಿ ವೆಚ್ಚದಲ್ಲಿ ನಿರ್ಮಾಣಹು-ಧಾ ಸ್ಮಾರ್ಟ್ ಸಿಟಿ ಯೋಜನೆಯ ಅಡಿ ₹18.50 ಕೋಟಿ ವೆಚ್ಚದಲ್ಲಿ ಸಾರ್ವಜನಿಕರು ಮತ್ತು ವ್ಯಾಪಾರಸ್ಥರ ಅನುಕೂಲಕ್ಕಾಗಿ ಎರಡು ಅಂತಸ್ತಿನ ಸುಂದರ ಮಾರುಕಟ್ಟೆ ನಿರ್ವಿುಸಲಾಗಿದೆ. ನೆಲ ಮಹಡಿಯಲ್ಲಿ ತರಕಾರಿ ಮಾರಾಟದ 50 ಕಟ್ಟೆ ಮತ್ತು 31 ಮಳಿಗೆ ನಿರ್ವಿುಸಲಾಗಿದೆ. ಮೊದಲನೇ ಮಹಡಿಯಲ್ಲಿ 71 ಕಟ್ಟೆ, 22 ಮಳಿಗೆ ನಿರ್ವಿುಸಲಾಗಿದೆ. ಎರಡನೇ ಮಹಡಿಯಲ್ಲಿ 20 ಕೊಠಡಿ (ಕಚೇರಿ)ಗಳನ್ನು ನಿರ್ವಿುಸಲಾಗಿದೆ.
ಈ ಜನತಾ ಬಜಾರ್ ಕಟ್ಟಡವನ್ನು ಕಳೆದ 2023ರ ಫೆಬ್ರವರಿ 19ರಂದು ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಹಾಲಪ್ಪ ಆಚಾರ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಪ್ರಸಾದ ಅಬ್ಬಯ್ಯ ಮತ್ತಿತರ ಜನಪ್ರತಿನಿಧಿಗಳು ಉದ್ಘಾಟಿಸಿದ್ದರು. ಆದರೆ, ಮಾರುಕಟ್ಟೆ ಉದ್ಘಾಟನೆ ಆದಾಗಿನಿಂದ ಒಂದೇ ಒಂದು ದಿನ ಈ ಕಟ್ಟಡದಲ್ಲಿ ವ್ಯಾಪಾರ ಮಾಡಿಲ್ಲ. ಯಾವಾಗ ನಮಗೆ ಈ ಹೊಸ ಕಟ್ಟಡದಲ್ಲಿ ವ್ಯಾಪಾರಕ್ಕೆ ಅನುಕೂಲ ಕಲ್ಪಿಸಿಕೊಡುತ್ತಾರೆ ಎಂದು ವ್ಯಾಪಾರಸ್ಥರು ಚಾತಕ ಪಕ್ಷಿಯಂತೆ ಕಾಯುತ್ತಾ ಇದೇ ಮಾರುಕಟ್ಟೆಯ ಹೊರಭಾಗದಲ್ಲಿರುವ ಮುಖ್ಯರಸ್ತೆಯಲ್ಲಿ ತರಕಾರಿಗಳನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ.
ವ್ಯಾಪಾರಕ್ಕೂ ಕಲ್ಲು
ಚರಂಡಿಯಂತಾದ ರಸ್ತೆ
ನಮ್ ಪಾಡು ಯಾರಿಗೂ ಬರಬಾರ್ದು, ಬಜಾರು ಎಲ್ಲ ರೆಡಿ ಮಾಡ್ಯಾರ. ಆದ್ರ ನಮಗೆ ತರಕಾರಿ ಮಾರಾಕ ಕೊಡವಲ್ರು. ಹಾಗೋ ಹೀಗೋ ಈ ಬಜಾರ ಮುಂದಿನ ರಸ್ತೆದಾಗ ವ್ಯಾಪಾರ ಮಾಡ್ಕೊಂಡು ಜೀವನಾ ಸಾಗುಸ್ತಾ ಇದ್ವಿ. ಅದಕ್ಕೂ ಕಲ್ಲು ಹಾಕ್ಯಾರ.
ಜನತಾ ಬಜಾರ್ ಎದುರು ಒಳಚರಂಡಿ ದುರಸ್ತಿ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಬಹುತೇಕ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಸೋಮವಾರ ಇಲ್ಲವೇ ಮಂಗಳವಾರದೊಳಗೆ ತೆಗೆದಿರುವ ಗುಂಡಿಗಳನ್ನು ಮುಚ್ಚಿಸಲು ಸೂಚನೆ ನೀಡಲಾಗುವುದು.