ಕನ್ನಡಪ್ರಭ ವಾರ್ತೆ ಕುದೂರು
ಮಾಗಡಿ ತಾಲೂಕು ಅರೇಪಾಳ್ಯ ಗ್ರಾಮದ ಶ್ರೀ ಕರಡಿಗುಚ್ಚಮ್ಮ ಜಾತ್ರಾ ಮಹೋತ್ಸವ ಮತ್ತು ಮಹಾದ್ವಾರದ ಕಳಸ ಪ್ರತಿಷ್ಟಾಪನೆಯ ಸಾನಿಧ್ಯ ವಹಿಸಿ ಮಾತನಾಡಿದರು.
ಈ ಭೂಮಂಡಲದಲ್ಲಿ ಮನುಷ್ಯನ ಬುದ್ದಿಶಕ್ತಿಯನ್ನು ಮೀರುವಂತಹ ಯಾವುದೇ ಪ್ರಾಣಿಯೂ ಇಲ್ಲ. ಅದರಂತೆ ಈತನಲ್ಲಿರುವ ಹೃದಯ ಶ್ರೀಮಂತ್ರಿಕೆ ಯಾವ ದೇವತೆಗಳಿಗೂ ಕೊರತೆಯಿಲ್ಲ. ಅಂತಹದುರಲ್ಲಿ ಮನುಷ್ಯ ತನ್ನ ಬುದ್ದಿಯ ಇತಿಮಿತಿ ಅರಿತು ವತರ್ಿಸದೇ ಹೋದದ್ದರ ಫಲವಾಗಿ ಸಮಾಜದಲ್ಲಿ ಅನೇಕ ದುರಂತಗಳು ಸಂಭವಿಸುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಈ ಸುತ್ತಲಿನ ಎಲ್ಲಾ ಗ್ರಾಮಗಳ ಜನರೂ ಅತ್ಯಂತ ಭಕ್ತಿ ಗೌರವಗಳಿಂದ ಇಲ್ಲಿನ ದೇವರಿಗೆ ನಡೆದುಕೊಳ್ಳುವುದನ್ನು ನೋಡಿದರೆ ಈ ಜನರ ಶ್ರದ್ದೆಯ ಮೇಲೆ ಎಂತಹವರಿಗಾದರೂ ಗೌರವ ಹೆಚ್ಚಾಗದೇ ಇರದು. ಕರಡಿಗುಚ್ಚಮ್ಮ ದೇವಿಯನ್ನು ಈ ಭಾಗದ ರಾಜರಾಜೇಶ್ವರಿ ಅಮ್ಮನವರು ಎಂದು ಪರಿಭಾವಿಸಿ ಪೂಜೆ ಮಾಡಲಾಗುತ್ತದೆ ಎಂದು ಹೇಳಿದರು.
ಈ ಜಾತ್ರೆಯನ್ನು ಬೋಂಡದ ಜಾತ್ರೆ ಎಂದೂ ಕರೆಯುತ್ತಾರೆ. ಇಲ್ಲಿಗೆ ಬಂದ ಜನರು ಕಡ್ಡಾಯವಾಗಿ ಪ್ರತಿ ಅಂಗಡಿಯ ಮುಂದೆಯೂ ರಾಶಿರಾಶಿ ಬೋಂಡ ಮಾಡಿ ಮಾರಾಟ ಮಾಡುವ ಜಾಗದಲ್ಲಿ ನೆರೆದು ಬೋಂಡ ತಿನ್ನುತ್ತಾರೆ. ಅಪ್ಪಟ ಜನಪದ ಪದ್ದತಿಗಳನ್ನು ಈ ಜಾತ್ರೆ ಒಳಗೊಂಡಿದೆ. ಬಾಟಲಿ ಪಾನೀಯಗಳ ಅಂಗಡಿಗಳಿಲ್ಲದೆ ಶರಬತ್ತು, ಕಬ್ಬಿನಹಾಲು, ಎಳನೀರಷ್ಟೇ ಮಾರಾಟವಾಗುತ್ತದೆ. ನಾರಸಂದ್ರ ಸುರೇಶ್ರ ಅಂಗಡಿಯ ವಿವಿಧ ರೀತಿಯ ಮಿಠಾಯಿ, ಜಿಲೇಬಿ ಸವಿಯದೆ ಜಾತ್ರೆಯ ಜನರು ವಾಪಸ್ ಹೋಗುವುದಿಲ್ಲ.
ದಾನಿ ಗಂಗಯ್ಯರವರು ಕರಡಿಗುಚ್ಚುಮ್ಮ ದೇವರ ಉತ್ಸವಮೂರ್ತಿಗೆ ಸಂಪೂರ್ಣ ಚಿನ್ನದ ಲೇಪನ ಮಾಡಿ ಲೊಕಾರ್ಪಣೆ ಮಾಡಿದ್ದಾರೆ.