ಗಾಣಿಗ ಸಮಾಜದ ಕಾಯಕ ನಿಷ್ಠೆ ಮಾದರಿ

KannadaprabhaNewsNetwork |  
Published : Jul 09, 2024, 12:51 AM IST
ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ, ಹಾವೇರಿ, ಗದಗ ಸಂಸದ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.  | Kannada Prabha

ಸಾರಾಂಶ

ಯಾವುದೇ ಸಮಾಜ ಉದ್ಧಾರ ಆಗಬೇಕಾದರೆ ಗುರು ಮುಖ್ಯ. ಗುರುವಿನಿಂದ ಸಂಸ್ಕಾರ, ಗುರಿ, ದಿಕ್ಸೂಚಿ, ವೇಗ, ಗುರಿ ತಲುಪುವ ಸಂಕಲ್ಪ ಯಶಸ್ವಿಯಾಗುತ್ತದೆ

ಗದಗ:ಗಾಣಿಗ ಸಮಾಜದ ಕಾಯಕ ನಿಷ್ಠೆ, ವೈಚಾರಿಕತೆ ಎಲ್ಲರಿಗೂ ಮಾದರಿಯಾಗಿದೆ ಎಂದು ಹಾವೇರಿ-ಗದಗ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಭಾನುವಾರ ನಗರದ ಗಾಣಿಗ ಸಮುದಾಯ ಭವನದಲ್ಲಿ ಅಖಿಲ ಭಾರತ ಗಾಣಿಗ ವಿದ್ಯಾ ಹಾಗೂ ಉದ್ಯೋಗ ಟ್ರಸ್ಟ್‌ ಆಶ್ರಯದಲ್ಲಿ ಜರುಗಿದ ಪ್ರತಿಭಾ ಪುರಸ್ಕಾರ ನೂತನ ಸಂಸದರಿಗೆ ಸನ್ಮಾನ ಹಾಗೂ ಗಾಣಿಗ ಭವನ ಕಟ್ಟಡದ ದಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯಾವುದೇ ಸಮಾಜ ಉದ್ಧಾರ ಆಗಬೇಕಾದರೆ ಗುರು ಮುಖ್ಯ. ಗುರುವಿನಿಂದ ಸಂಸ್ಕಾರ, ಗುರಿ, ದಿಕ್ಸೂಚಿ, ವೇಗ, ಗುರಿ ತಲುಪುವ ಸಂಕಲ್ಪ ಯಶಸ್ವಿಯಾಗುತ್ತದೆ ಎಂದರು.

ಸಮುದಾಯದ ಹಿರಿಯ ಮುಖಂಡ ದಶರಥ ಗಾಣಿಗೇರ ಮಾತನಾಡಿ, ಗಾಣಿಗ ಸಮುದಾಯಕ್ಕೆ ಭೀಮನ ಭಕ್ತಿಯಿದೆ. ಆದರೆ, ಲಿಂಗ, ವಿಭೂತಿ, ಗುರು ಸೇರಿ ಅಷ್ಟಾವರಣಗಳ ಕೊರತೆಯಿದೆ. ಅದನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಈ ಸಮಾಜಕ್ಕೆ ಎಲ್ಲ ವ್ಯವಹಾರಗಳು ಒಲಿಯುತ್ತವೆ. ಇದಕ್ಕೆ ಅವರ ಶ್ರಮ, ಪ್ರಾಮಾಣಿಕತೆ ಹಾಗೂ ನಿಷ್ಠೆ ಕಾರಣ ಗಾಣಿಗ ಸಮುದಾಯ ಜಾತಿಯಿಂದ ಗುರುತಿಸಿಕೊಂಡಿಲ್ಲ. ಬದಲಾಗಿ ಕಾಯಕ ಸಂಸ್ಕೃತಿಯಿಂದ ಗುರುತಿಸಿಕೊಂಡಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ. ಈ ಸಮುದಾಯದಿಂದಲೂ ಹೆಚ್ಚಿನ ಮಕ್ಕಳು ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳಾಗಬೇಕು ಎಂದರು.

ಯುವ ಕಾಂಗ್ರೆಸ್ ಮುಖಂಡ ಚಿದಾನಂದ ಸವದಿ ಮಾತನಾಡಿದರು.

ಜಿಲ್ಲಾ ಸಮುದಾಯದ ಅಧ್ಯಕ್ಷ ಬಸವರಾಜ ಬಿಂಗಿ ಅಧ್ಯಕ್ಷತೆ ವಹಿಸಿದ್ದರು. ಡಾ.ಶ್ರೀ ಜಯ ಬಸವಕುಮಾರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆರ್ಶಿವಚನ ನೀಡಿದರು.

ಇದೇ ಸಂದರ್ಭದಲ್ಲಿ ಸಂಸದ ಬಸವರಾಜ ಬೊಮ್ಮಯಿ, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ, ಗದಗ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಚಂದ್ರಪ್ಪ ಕರಿಕಟ್ಟಿ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಷಣ್ಮುಖ ಬಡ್ನಿ, ಎನ್.ಎಸ್. ಕೆಂಗಾರ, ಡಾ.ಶೇಖರ ಸಜ್ಜನರ, ಬಿ.ಬಿ.ಐನಾಪೂರ, ಬಸವರಾಜ ನವಲಗುಂದ, ಎಚ್.ಬಿ. ತೋರಗಲ್, ರಮೇಶ ಕಪ್ಪತ್ತನವರ, ಸುಭಾಸ ಬಾಟಕುಕಿ, ಮುರಘರಾಜೇಂದ್ರ ಬಡ್ನಿ, ಸುರೇಶ ಮರಳಪ್ಪನವರ, ಎಸ್.ವಿ. ಪವಾಡಿಗೌಡ್ರ, ಗಿರಿಯಪ್ಪ ಅಸೂಟಿ, ಶ್ರೀಕಾಂತ ಲಕ್ಕುಂಡಿ, ತೋಟಪ್ಪ ಗಾಣಿಗೇರ, ಪರಶುರಾಮ ಅಳಗವಾಡಿ, ಐ.ಎಂ. ಕಿರೇಸೂರ, ಅಶೋಕ ಗುಜಮಾಗಡಿ, ಬಿ.ಎಸ್.ವಡವಟ್ಟಿ, ಗಂಗಾಧರ ಗಾಣಿಗೇರ, ಸಂದೀಪ ಕಪ್ಪತ್ತನವರ, ಅಶೋಕ ಮಂದಾಲಿ, ಯಚ್ಚರಗೌಡ ಗೋವಿಂದಗೌಡ್ರ ಮುಂತಾದವರು ಹಾಜರಿದ್ದರು.

PREV

Recommended Stories

ರಾಜ್ಯದಲ್ಲಿ ದ್ವಿಭಾಷಾ ನೀತಿಗೆ ಶಿಕ್ಷಣ ಆಯೋಗ ಶಿಫಾರಸು
ರೈತರಿಗೆ ಸರ್ಕಾರದ ಗುಡ್ ನ್ಯೂಸ್