ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ರಾಜ್ಯ ಪೊಲೀಸ್ ಇಲಾಖೆ ಕರ್ನಾಟಕ ಪೋಲಿಸ್ ನಾಮಕರಣಗೊಂಡು 50 ವರ್ಷ ಪೂರೈಸಿದ ಪ್ರಯುಕ್ತ, ನಗರದ ಸರ್ ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗದಲ್ಲಿ ಭಾನುವಾರ ಬೆಳಗ್ಗೆ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪೋಲಿಸ್ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಹಾಗೂ ವಿಧ್ಯಾರ್ಥಿಗಳಿಗೆ ಆಯೋಜಿಸಿದ್ದ “ಕರ್ನಾಟಕ ಪೊಲೀಸ್ ರನ್-5ಕೆ” ಮ್ಯಾರಥಾನ್ ಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.
ಗ್ರಾಮೀಣ ಕ್ರೀಡೆಯಲ್ಲಿ ಪಾಲ್ಗೊಳ್ಳಿಇತ್ತೀಚೆಗೆ ಪ್ರತಿಯೊಬ್ಬರು ಮೊಬೈಲ್ ಜೊತೆಗೆ ಆಟವಾಡುತ್ತಾ, ಜಗತ್ತು ನಮ್ಮ ಕೈಯಲ್ಲಿದೆ ಎಂದು ಸಂತೋಷ ಪಡುವಾಗ ನಮ್ಮ ಆರೋಗ್ಯದ ಕಡೆ ಗಮನಕೊಡದೆ ಮೊಬೈಲ್ನ ದಾಸರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇದರಿಂದ ಹೊರಬಂದು ಗ್ರಾಮೀಣ ಪ್ರದೇಶಗಳಲ್ಲಿನ ಕ್ರೀಡೆಗಳಲ್ಲಿ ಭಾಗವಹಿಸಿ, ಇದಕ್ಕಾಗಿ ಉತ್ತೇಜನ ನೀಡುವವರು ಸಾಕಷ್ಟು ಜನರಿದ್ದಾರೆಂದರು.
ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಉತ್ತಮ ಸಂಬಂಧವನ್ನು ಹೊಂದಿ, ಸಹಕಾರ ಮನೋಭಾವದಿಂದ ಕರ್ತವ್ಯ ನಿರ್ವಹಿಸಿದ್ದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಪೊಲೀಸ್ ವೃತ್ತಿಯಲ್ಲಿ ಕ್ರೀಡಾಸ್ಫೂರ್ತಿ ಅತ್ಯಂತ ಮುಖ್ಯವಾಗಿದೆ. ಹೀಗಾಗಿ ನಾವುಗಳು ಪೊಲೀಸ್ ಅಧಿಕಾರಿ, ಸಿಬ್ಬಂದಿಯಾಗುವ ಮೊದಲು ಕ್ರೀಡಾಪಟುವಾಗಿರುತ್ತೇವೆ. ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗೆ ಧರ್ಮವಿಲ್ಲ, ನಮಗೆ ಖಾಕಿ ಧರ್ಮ, ಖಾಕಿಯೇ ಜಾತಿ ಎಂದರು. ಸುಮಾರು 500 ಮಂದಿ ಭಾಗಿ
ಮುಖ್ಯಪೇದೆ ಪದ್ಮ ಪ್ರಥಮಪೊಲೀಸ್ ಮಹಿಳಾ ವಿಭಾಗದಲ್ಲಿ ಗುಡಿಬಂಡೆಯ ಮುಖ್ಯಪೇದೆ ಪದ್ಮ ಪ್ರಥಮ ಸ್ಥಾನ ಪಡೆದರೆ, ಸಾರ್ವಜನಿಕರ ಮಹಿಳಾ ವಿಭಾಗದಲ್ಲಿ ಭೂಮಿಕಾ ಪ್ರಥಮ, ಭಾರ್ಗವಿ ದ್ವಿತೀಯ ಸ್ಥಾನ ಪಡೆದರು ವಿಜೇತರಾದ ಎಲ್ಲಾ ಕ್ರೀಡಾಪಟುಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.