ಕನ್ನಡಪ್ರಭ ವಾರ್ತೆ ತಲಕಾಡು
ದೇಗುಲದ ಒಳಭಾಗದಲ್ಲಿ ವಿದ್ಯುತ್ ಸರಬರಾಜು ಮಾಡುವ ಯುಪಿಸ್ ಇಟ್ಟಿದ್ದ ಸ್ಥಳದಲ್ಲಿ, ದೇಗುಲದ ಮೇಲ್ಛಾವಣಿಯಿಂದ ಮಳೆ ನೀರು ಸೋರುತ್ತಿದ್ದರಿಂದ ತಕ್ಷಣವೇ ಬೇರೆ ಕಡೆಗೆ ಸ್ಥಳಾಂತರಿಸಿ ಸಂಭವನೀಯ ಅಪಾಯ ತಪ್ಪಿಸಲಾಯಿತು.
ದೇಗುಲದ ಗರ್ಭಗುಡಿ ಪ್ರವೇಶ ದ್ವಾರದ ಮೇಲೆ ಶ್ರೀ ರಂಗನಾಥಸ್ಬಾಮಿ ವಿರಮಿಸುವ ವಿಗ್ರಹ ಮೇಲ್ಚಾವಣಿಯ ಉದ್ದಕ್ಕೂ ಮಳೆ ನೀರು ಸೋರಿ ದೇಗುದಲ್ಲಿ ಸಾಕಷ್ಟು ಫಜೀತಿ ಉಂಟು ಮಾಡಿತು.ಹತ್ತು ವರ್ಷದ ಹಿಂದೆ ಕುಸಿದುಹೋಗಿದ್ದ ಇಲ್ಲಿನ ದೇಗುಲವನ್ನು ಪುರಾತತ್ವ ಇಲಾಖೆ ಪುನರ್ ಮರುಜೋಡಣೆ ನಡೆಸಿದೆ. ಸಿಮೆಂಟ್ ಬಳಸದೆ ಮೇಲ್ಛಾವಣಿ ಭಾರಿ ಗಾತ್ರದ ಕಲ್ಲುಗಳನ್ನು ವಿಶೇಷ ಸುಣ್ಣದ ಗಾರೆ ಬಳಸಿ ಇಂಟರ್ ಲಾಕ್ ವಿಧಾನದಲ್ಲಿ ಮರುಜೋಡಣೆ ನಡೆಸಿದೆ. ಮೇಲ್ಛಾವಣಿ ಕಲ್ಲುಗಳ ಜಾಯಿಂಟ್ ಗಳಿಗೆ, ಅಂಟುವಾಳ ಸುಣ್ಣದ ಗಾರೆಯಿಂದ ಮುಚ್ಚಿದ್ದು, ಈಗ ಅದು ಉದ್ದಕ್ಕೂ ಸಣ್ಣ ಸಣ್ಣ ಬಿರುಕು ಬಿಟ್ಟಿದೆ. ಹೀಗಾಗಿ ಪ್ರತಿ ಮಳೆಯಲ್ಲೂ ಇಲ್ಲಿನ ದೇಗುಲ ಸೋರುತ್ತಿದೆ. ದೇಗುಲ ನಿರ್ವಹಣೆ ಮಾಡಬೇಕಾದ ಪುರಾತತ್ವ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ದಿನೇ ದಿನೇ ದ್ವಿಗುಣವಾಗಿದೆ. ಇದರಿಂದ ದೇಗುಲಕ್ಕೆ ಭೇಟಿ ನೀಡುವ ಭಕ್ತರಿಗೆ ಹಾಗು ದೈನಂದಿನ ಪೂಜಾ ಕೈಂಕರ್ಯ ನೆರವೇರಿಸುವ ಅರ್ಚಕರಿಗೆ ಅನಾನುಕೂಲವಾಗಿದೆ.
ದೇಗುಲದ ನಿರಂತರ ನಿರ್ವಹಣೆಗೆ ಒತ್ತಾಯ