ಕನ್ನಡಪ್ರಭ ವಾರ್ತೆ ಸೊರಬ
ಭಾನುವಾರ ತಾಲ್ಲೂಕಿನ ಬಂಕಸಾಣ ಗ್ರಾಮದ ಶ್ರೀ ಹೊಳೆಲಿಂಗೇಶ್ವರ ಕ್ಷೇತ್ರದ ಪುಣ್ಯ ಸಂಗಮ ಸ್ಥಳದ ಉತ್ತರವಾಹಿನಿಯಲ್ಲಿ ಶ್ರೀ ಸದ್ಗುರು ಸೇವಾ ಟ್ರಸ್ಟ್ ವತಿಯಿಂದ ನಿರ್ಮಿಸಿದ ಸಮಾಧಾನ ಗುರು ಕುಟೀರದ ಗುರುಪ್ರವೇಶ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕುಟೀರ ಎಂಬುದು ಭಾರತೀಯ ಸಂಸ್ಕೃತಿಯ ಪ್ರತೀಕ. ಕುಟೀರದಲ್ಲಿಯೇ ವೇದ, ಆಗಮ, ಮಹಾಕಾವ್ಯಗಳ ಜನನವಾಗಿದ್ದು. ಕುಟೀರದಲ್ಲಿಯೇ ಋಷಿ ಮುನಿಗಳು ವಾಸಿಸಿದ್ದು. ಅಂದಿನ ಕಾಲದಲ್ಲಿ ಕುಟೀರವು ಆತ್ಮಜ್ಞಾನಕ್ಕೆ ಸಾಧನವಾಗಿದ್ದು, ಇದೊಂದು ಸಂಸ್ಕಾರ ಕೊಡುವ ಕೇಂದ್ರವಾಗಿತ್ತು ಎಂದರು.ಸಮಾಧಾನ ವರದಾ ಮತ್ತು ದಂಡಾವತಿ ನದಿಗಳ ಸಂಗಮ ಕ್ಷೇತ್ರದಲ್ಲಿ ಸಮಾಧಾನ ಎನ್ನವುದು ಗುರು ಕುಟೀರದ ರೂಪದಲ್ಲಿ ನಿರ್ಮಾಣವಾಗಿದೆ. ಇದೊಂದು ಪವಿತ್ರ ಕ್ಷೇತ್ರ. ಮೌನ ತಪಸ್ವಿಗಳು ಯೋಗಿಗಳು, ನಾಡಿನಾದ್ಯಂತ ಅವರ ಸಮಾಧಾನ ಧ್ಯಾನ ಕೇಂದ್ರಗಳು ಸರ್ವರಿಗೂ ಶಾಂತಿ ಸಮಾಧಾನವನ್ನು ನೀಡುವ ಕೇಂದ್ರಗಳಾಗಿವೆ ಎಂದರು.
ಸಮಾಧಾನದ ಮುಖ್ಯ ರೂವಾರಿಗಳಾದ ಮೌನ ತಪಸ್ವಿ ಜಗದ್ಗುರು ಜಡೆಯ ಶಾಂತಲಿಂಗ ಶಿವಯೋಗಿಗಳು ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಮೂಡಿ ಮಠದ ಸದಾಶಿವ ಸ್ವಾಮೀಜಿ, ತೊಗರ್ಸಿ ಪಂಚವಣ್ಣಿಗೆ ಮಠದ ಚನ್ನವೀರ ದೇಶಿ ಕೇಂದ್ರ ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಡಾ. ಮಹಾಂತ ಮಹಾಸ್ವಾಮೀಜಿ ಉಪಸ್ಥಿತರಿದ್ದು ಮಾತನಾಡಿದರು.
ಕಾರ್ಯಕ್ರಮದ ನಂತರ ಮೌನತಪಸ್ವಿ ಗುರುಗಳ ತುಲಾಭಾರ ಸೇವೆ ಭಕ್ತಾದಿಗಳಿಂದ ನಡೆಯಿತು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಮಂಡಲದ ಬಸವರಾಜ ಬಾರಂಗಿ, ಅಭಾವೀಲಿಂ ಸಂಘಟನೆಯ ವೀರೇಶಗೌಡ್ರು, ಟೌನ್ ವೀರಶೈವ ಸಮಾಜದ ಅಧ್ಯಕ್ಷ ಹೆಚ್. ಮಲ್ಲಿಕಾರ್ಜುನಪ್ಪ, ರಾಜುಗೌಡ್ರು, ಬಾಸೂರು ಗುರುಪ್ರಸನ್ನಗೌಡ್ರು, ಅಂಡಿಗೆ ಅಶೋಕನಾಯಕ, ಜಿ.ಪಂ. ಮಾಜಿ ಸದಸ್ಯ ಶಿವಲಿಂಗೇಗೌಡ್ರು, ಸುಧಾ ಶಿವಪ್ರಸಾದ, ತಾಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ ತಲಕಾಲುಕೊಪ್ಪ ಮುಂತಾದವರು ಉಪಸ್ಥಿತರಿದ್ದರು.