ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಪಿಕಾರ್ಡ್ ಬ್ಯಾಂಕ್ ಕಚೇರಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 140ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ಇಂದಿಗೂ ರಾಜರ ಆಶಯದಂತೆ ಭೂ ಬ್ಯಾಂಕ್ಗಳು, ಪಿಕಾರ್ಡ್ ಬ್ಯಾಂಕ್ ಹೆಸರಿನಲ್ಲಿ ಕೃಷಿ ಚಟುವಟಿಕೆಗಳಿಗೆ ನೆರವಾಗುವ ಕೆಲಸ ನಿರ್ವಹಿಸುತ್ತಿವೆ ಎಂದರು
ರೈತರು ಸಾಲದ ಸುಳಿಗೆ ಸಿಲುಕಿದ ವೇಳೆ ಅವರನ್ನು ರಕ್ಷಿಸಲು ಅಗ್ರಿಕಲ್ಚರಿಸ್ಟ್ ಡಿಬೇಟ್ ರಿಲೀಪ್ ಆಕ್ಟ್ ಜಾರಿಗೆ ತರುವ ಮೂಲಕ ತಮ್ಮೊಳಗಿನ ರೈತಪರ ನಿಲುವು ವ್ಯಕ್ತಪಡಿಸಿದ್ದರು. ಹಳೆ ಮೈಸೂರು ಭಾಗದ ಅಭಿವೃದ್ಧಿಯಲ್ಲಿ ನಾಲ್ವಡಿ ಒಡೆಯರ್ ಪಾತ್ರ ದೂರದೃಷ್ಟಿತ್ವದ್ದು ಮತ್ತು ಇಂದಿನ ಪ್ರಜಾಪ್ರಭುತ್ವ ಕ್ಕೆ ಅವರ ಆಡಳಿತ ಮಾದರಿಯಾದದ್ದು ಎಂದರು.ಈ ವೇಳೆ ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ನ.ಲಿ.ಕೃಷ್ಣ, ಪ್ರಭಾರ ವ್ಯವಸ್ಥಾಪಕಿ ಭಾಗ್ಯ, ಸಿಬ್ಬಂದಿ ಆಶಾ, ಸುನಿಲ್ .ಸಿದ್ದು ಇದ್ದರು.
ಕಿಕ್ಕೇರಿ:ಬರಡು ನೆಲವಾಗಿದ್ದ ಮೈಸೂರು ಪ್ರಾಂತ್ಯವನ್ನು ಹಸಿರುಮಯವಾಗಿಸಿದ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಭಗೀರಥರು ಎಂದು ಸ್ಪಂದನಾ ಫೌಂಡೇಷನ್ ತ್ರಿವೇಣಿ ಹೇಳಿದರು.
ರಾಜರ್ಷಿಯವರ ದೂರದೃಷ್ಟಿಯಿಂದ ಶರಾವತಿ ನದಿಗೆ ಹಿರೇಭಾಸ್ಕರ ಅಣೆಕಟ್ಟು, ವಾಣಿವಿಲಾಸ ಅಣೆಕಟ್ಟು, ಸಹಕಾರಿ ಕಾರ್ಮಿಕ ಪರಿಹಾರ ಕಾಯ್ದೆ, ಉದ್ಯೋಗದಲ್ಲಿ ಮೀಸಲಾತಿ, ಗ್ರಾಮ ನ್ಯಾಯಾಲಯ ಸ್ಥಾಪನೆ, ಮೈಸೂರು ರಾಜ್ಯದ ಹಲವು ರೈಲು ದಾರಿಗಳ ನಿರ್ಮಾಣಗಳು ನಿರ್ಮಾಣವಾಗಿವೆ. ಇವರ ಬದುಕು ಮಕ್ಕಳಿಗೆ ಆದರ್ಶವಾಗಲು ತಿಳಿಹೇಳುವ ಕೆಲಸ ಸಮುದಾಯದಿಂದ ಮೊದಲು ಆಗಬೇಕಿದೆ ಎಂದರು.ಇದೇ ವೇಳೆ ನಾಲ್ವಡಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ಗಿಡಕ್ಕೆ ನೀರೆರೆಯಲಾಯಿತು. ಕವಿತಾ, ಸವಿತಾ ಉಪಸ್ಥಿತರಿದ್ದರು.