ವಕೀಲರು ಸಂವಿಧಾನ ನಿಜವಾರ ಸೈನಿಕರು: ಸಚಿವ ಎಚ್‌.ಕೆ. ಪಾಟೀಲ

KannadaprabhaNewsNetwork |  
Published : Dec 08, 2024, 01:15 AM IST
3ಎಚ್‌ಕೆಪಿ | Kannada Prabha

ಸಾರಾಂಶ

ದಿ​ನ​ದಿಂದ ದಿ​ನಕ್ಕೆ ವ್ಯಾ​ಜ್ಯ​ಗಳ ಸಂಖ್ಯೆ​ ಅ​ಧಿ​ಕ​ವಾ​ಗು​ತ್ತಿದ್ದು, ಸಮಾಜದಲ್ಲಿ ವಕೀಲರ ಪಾತ್ರ ಬಹಳಷ್ಟು ಪ್ರ​ಮು​ಖ​ವಾ​ಗಿದೆ. ಬ​ಡ​ವರು, ನಿ​ರ್ಗ​ತಿ​ಕರು ಹಾಗೂ ಅ​ನ್ಯಾ​ಯಕ್ಕೆ ಒ​ಳ​ಗಾ​ದ​ವ​ರನ್ನು ಗು​ರು​ತಿಸಿ, ನ್ಯಾಯ ಒ​ದ​ಗಿ​ಸುವ ಕೆ​ಲ​ಸ​ವನ್ನು ಯುವ ವ​ಕೀ​ಲರು ಮಾ​ಡ​ಬೇಕು.

ಹುಬ್ಬಳ್ಳಿ:

ಸಂವಿಧಾನದ ನಿ​ಜ​ವಾದ ಸೈನಿಕರು ವಕೀಲರು. ದೇಶ ಹಾಗೂ ಸಂವಿಧಾನ ರಕ್ಷಣೆಯಲ್ಲಿ ಅವರ ಪಾತ್ರ ಹೆಚ್ಚಾ​ಗಿದೆ. ಸಂವಿಧಾನದ ಆಶಯಗಳನ್ನು ಉಳಿಸುವುದು ಕಿರಿಯ ವಕೀಲರ ಪ್ರ​ಮುಖ ಜ​ವಾ​ಬ್ದಾ​ರಿ​ಯಾ​ಗಿದೆ ಎಂದು ಕಾ​ನೂನು ಮತ್ತು ಸಂಸ​ದೀಯ ವ್ಯ​ವ​ಹಾ​ರ​ಗಳ ಸ​ಚಿವ ಎ​ಚ್‌.​ಕೆ. ​ಪಾ​ಟೀಲ ಹೇ​ಳಿ​ದ​ರು.

ನ​ಗ​ರದ ಬಿ​ವಿಬಿ ಕ್ಯಾಂಪಸ್‌ನ ದೇ​ಶ​ಪಾಂಡೆ ಸ​ಭಾ​ಭ​ವ​ನ​ದಲ್ಲಿ ಕಾ​ನೂನು ವಿ​ದ್ಯಾ​ರ್ಥಿ​ಗ​ಳಿಗೆ ಶ​ನಿ​ವಾರ ಸಂಜೆ ನ​ಡೆದ ರಾ​ಷ್ಟ್ರ​ಮ​ಟ್ಟದ ಅ​ಣುಕು ನ್ಯಾ​ಯಾ​ಲಯದ ಫೈ​ನ​ಲ್‌ ಸ್ಪ​ರ್ಧೆಯ ಸ​ಮಾ​ರೋಪ ಸ​ಮಾ​ರಂಭ​ದಲ್ಲಿ ಅ​ವರು ಮಾ​ತ​ನಾ​ಡಿ​ದ​ರು.

ದಿ​ನ​ದಿಂದ ದಿ​ನಕ್ಕೆ ವ್ಯಾ​ಜ್ಯ​ಗಳ ಸಂಖ್ಯೆ​ ಅ​ಧಿ​ಕ​ವಾ​ಗು​ತ್ತಿದ್ದು, ಸಮಾಜದಲ್ಲಿ ವಕೀಲರ ಪಾತ್ರ ಬಹಳಷ್ಟು ಪ್ರ​ಮು​ಖ​ವಾ​ಗಿದೆ. ಬ​ಡ​ವರು, ನಿ​ರ್ಗ​ತಿ​ಕರು ಹಾಗೂ ಅ​ನ್ಯಾ​ಯಕ್ಕೆ ಒ​ಳ​ಗಾ​ದ​ವ​ರನ್ನು ಗು​ರು​ತಿಸಿ, ನ್ಯಾಯ ಒ​ದ​ಗಿ​ಸುವ ಕೆ​ಲ​ಸ​ವನ್ನು ಯುವ ವ​ಕೀ​ಲರು ಮಾ​ಡ​ಬೇಕು ಎಂದ​ರು.

ಕಾನೂನಿನ ಬಗ್ಗೆ ಸಂಪೂರ್ಣ ಜ್ಞಾನ, ಉ​ತ್ತಮ ವಾಕ್‌ ಚಾ​ತುರ್ಯ ಹಾಗೂ ಸಂವ​ಹ​ನ ಕೌ​ಶಲ್ಯ ಹೊಂದಿ​ದಾಗ ಮಾತ್ರ ಯ​ಶಸ್ವಿ ವ​ಕೀ​ಲ​ರಾ​ಗಬ​ಹು​ದು ಎಂದರು.

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮಾ​ತ​ನಾ​ಡಿ, ಶ್ರೀಸಾಮಾನ್ಯನಿಗೂ ನ್ಯಾಯದಾನದ ವ್ಯವಸ್ಥೆ ಪರಿಪೂರ್ಣವಾಗಿ ಆಗಿಲ್ಲ. ಪ್ರಕಟವಾದ ನ್ಯಾಯಾಲಯದ ಆದೇಶವನ್ನೂ ಕಾನೂನುಬದ್ಧವಾಗಿ ವಿಮರ್ಶೆಗಳಾಗಬೇಕು. ಸರಕಾರಗಳು ಕೂಡ ಕೋರ್ಟ್‌ಗಳಿಗೆ ಸವಲತ್ತು ಮತ್ತು ನ್ಯಾಯಾಧೀಶರ ನೇಮಕ ಮಾಡಬೇಕು. ಇದರಿಂದ ತ್ವರಿತವಾಗಿ ನ್ಯಾಯದಾನ ಸಾಧ್ಯವಾಗು​ತ್ತದೆ ಎಂದು ಹೇಳಿದರು.

ಹೈಕೋರ್ಟ್‌ ನ್ಯಾಯಮೂರ್ತಿ ವೇದವ್ಯಾಸಾಚಾರ ​ಶ್ರೀಶಾನಂದ, ಸ​ಮಾ​ಜದ ಅಂಕು-ಡೊಂಕು​ಗ​ಳನ್ನು ತಿ​ದ್ದು​ವಲ್ಲಿ ವ​ಕೀ​ಲರ ಪಾತ್ರ ಪ್ರ​ಮು​ಖ​ವಾ​ಗಿದೆ. ವಾದ ಮಂಡಿ​ಸು​ವಾಗ ಎ​ದು​ರಿನ ವ್ಯ​ಕ್ತಿ​ಯನ್ನು ಖಂಡಿ​ಸು​ವುದು, ವಿ​ರೋ​ಧಿ​ಸು​ವು​ದು ನಿ​ಜ​ವಾದ ವ​ಕೀ​ಲರ ಲ​ಕ್ಷ​ಣ​ವಲ್ಲ. ನ್ಯಾ​ಯಾ​ಲ​ಯದ ಕ​ಲಾ​ಪ​ದಲ್ಲಿ ಭಾಷೆ ಹಾಗೂ ಪ​ದ​ಗಳ ಬ​ಳ​ಕೆಯ ಮೇಲೆ ಬ​ಹ​ಳಷ್ಟು ಎ​ಚ್ಚ​ರ​ವಿ​ರ​ಬೇಕು ಎಂದು ವ​ಕೀ​ಲ​ರಿಗೆ ಸ​ಲಹೆ ನೀ​ಡಿ​ದ​ರು.

ಪ್ರ​ಶಸ್ತಿ ಪ್ರ​ದಾನ..ರಾ​ಷ್ಟ್ರೀಯ ಮ​ಟ್ಟದ ಅ​ಣಕು ಸ್ಪ​ರ್ಧೆ​ಯಲ್ಲಿ ಭಾ​ಗ​ವ​ಹಿ​ಸಿದ್ದ ಬೆ​ಳ​ಗಾ​ವಿಯ ಕೆಎಲ್‌ಇ ಬಿ.ವಿ. ಬೆಲ್ಲದ ಕಾನೂನು ಕಾಲೇಜ್‌ ಪ್ರಥಮ ಸ್ಥಾನ ಪಡೆಯಿತು. ರನ್ನರ್‌ ಅಪ್‌ ಆಗಿ ತಮಿಳುನಾಡಿನ ಸವಿತಾ ಸ್ಕೂಲ್‌ ಆಫ್‌ ಲಾ ಕಾಲೇಜ್‌ ಹೊರಹೊಮ್ಮಿತು. ಅ​ದ​ರಂತೆ ಬೆಸ್ಟ್‌ ಮೆಮೋರಿಯಲ್‌ ಪ್ರಶಸ್ತಿಯನ್ನು ಬೆಂಗಳೂರಿನ ಕ್ರೈಸ್ಟ್‌ ವಿಶ್ವವಿದ್ಯಾಲಯ, ಬೆಸ್ಟ್‌ ಮೇಲ್‌ ಅವಾರ್ಡ್‌ ಸಾಯಿರಾಜ್‌, ಬೆಸ್ಟ್‌ ಫಿಮೇಲ್‌ ಅವಾರ್ಡ್‌ ಕೀರ್ತನಾ ಪಡೆದರು. ವಿ​ವಿಧ ಕಾ​ಲೇ​ಜು​ಗ​ಳಿಂದ ಒಟ್ಟು 16 ತಂಡ​ಗಳು ಭಾ​ಗ​ವ​ಹಿ​ಸಿ​ದ್ದ​ರು.

ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಎಂ.ಜಿ. ಉಮಾ, ಉಮೇಶ ಎಂ.ಅಡಿಗ, ವಿಜಯಕುಮಾರ ಪಾಟೀಲ, ಕೆಎಲ್‌ಇ ನಿರ್ದೇಶಕ ಶ್ರೀಶೈಲಪ್ಪ ಮೆಟಗುಡ್ಡ, ಶಂಕ್ರಣ್ಣ ಮು​ನ​ವಳ್ಳಿ ​ಇ​ದ್ದ​ರು.

ಇಂದು ದುಬಾರಿ ವಕೀಲರನ್ನು ನೇ​ಮಿ​ಸಿ​ದಲ್ಲಿ ತೀರ್ಪು ಬೇಗ ಬರುತ್ತದೆ ಎಂಬ ಮ​ನೋ​ಭಾ​ವನೆ ಕೆಲ ಕ​ಕ್ಷಿ​ದಾ​ರ​ರಲ್ಲಿದೆ, ಅ​ದು ಸ​ರಿ​ಯಲ್ಲ. ಯಾವುದೇ ಪ್ರಕರಣ ಇರಲಿ ಶ್ರೀಸಾಮಾನ್ಯನಿಗೂ ನ್ಯಾಯ ಸಿಗಬೇಕು. ಅಂಥದ್ದನ್ನು ಜಾರಿಗೆ ತರಲು ರಾಜ್ಯ ಸರಕಾರ ಉತ್ಸುಕವಾಗಿದೆ ಎಂದು ಕಾನೂನು ಸಚಿವ ಎ​ಚ್‌.​ಕೆ. ​ಪಾ​ಟೀಲ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌