- ರೋಟರಿ ಬಾಲಭವನದಲ್ಲಿ ಚಿಂತನ-ಮಂಥನ ಕಾರ್ಯಕ್ರಮ
ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜ ವರದಿ ಸಾರ್ವಜನಿಕ ಚರ್ಚೆಗೆ ಬರಬೇಕು. ವರದಿ ಜಾರಿ ಮಾಡುವುದು, ಬಿಡುವುದು ಆನಂತರ ಮುಖ್ಯವಾಗುವುದು ಎಂದು ಅಂಕಣಕಾರ ಶಿವಸುಂದರ ಅಭಿಪ್ರಾಯಪಟ್ಟರು.
ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಜಾಗೃತ ವೇದಿಕೆ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜ ವರದಿ ಕುರಿತ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಾಂತರಾಜ ವರದಿ ಜಾರಿ ಹೋರಾಟದ ಜೊತೆಗೆ ಮೇಲ್ವರ್ಗದವರಿಗೆ ನೀಡಿರುವ ಮೀಸಲಾತಿ ವಿರುದ್ಧವೂ ಹೋರಾಟ ನಡೆಸಬೇಕಾಗಿದೆ. ಮೀಸಲಾತಿ ಜೊತೆಗೆ ಭದ್ರತೆ, ಆರೋಗ್ಯ, ಉದ್ಯೋಗ ಎಲ್ಲರಿಗೂ ಸಿಗಬೇಕು. ಮೀಸಲಾತಿಯಲ್ಲಿ ಸಮಾನತೆ ಕಲ್ಪಿಸುವ ಜೊತೆಗೆ ಭದ್ರತೆ, ಆರೋಗ್ಯ, ಉದ್ಯೋಗವು ಎಲ್ಲರಿಗೂ ಸಿಗಬೇಕು. ಮೀಸಲಾತಿಯಲ್ಲಿ ಸಮಾನತೆ ಕಲ್ಪಿಸುವ ಜೊತೆಗೆ ಸಂಪತ್ತಿನಲ್ಲಿ ಸಮಾನ ಕಲ್ಪಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ಸಂವಿಧಾನ ಪೀಠಿಕೆ ಓದುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ವಿಪ ಸದಸ್ಯ ಕೆ.ಅಬ್ದುಲ್ ಜಬ್ಬಾರ್ ಮಾತನಾಡಿ, ಕಾಂತರಾಜ ಆಯೋಗದ ವರದಿ ಜಾರಿಗೆ ಸಿದ್ದರಾಮಯ್ಯಗೆ ಒಲವಿದೆ. ಅದರೆ, ಬಲಿಷ್ಠ ಸಮುದಾಯಗಳಿಂದ ತೀವ್ರ ಒತ್ತಡವಿದೆ. ನಮಗೆ ನ್ಯಾಯ ಸಿಗಬೇಕಾದರೆ ಮೊದಲು ಜಾಗೃತರಾಗಬೇಕು. ದೊಡ್ಡಮಟ್ಟದಲ್ಲಿ ಸಭೆ ನಡೆಯಬೇಕು. ತಾಲೂಕು, ಜಿಲ್ಲಾ ಮಟ್ಟದಲ್ಲಿಯೂ ಸಭೆ ನಡೆಸಲಾಗುವುದು ಎಂದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸ ನ್ಮಾನಿಸಲಾಯಿತು. ನೆರಳು ಬೀಡಿ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ, ಬಿ.ಎಚ್.ಪರಶುರಾಮಪ್ಪ, ಎಂ.ಜಯಣ್ಣ, ವಕೀಲರಾದ ರಜ್ವಿ ಖಾನ್, ಅನೀಸ್ ಪಾಶ, ಕೆ.ಎಚ್.ಹನೀಫ್, ಲಿಯಾಖತ್ ಆಲಿ, ಬಾಷಾ ಸಾಬ್, ಆಯೂಬ್ ಖಾನ್, ಶಕೀಲ್ ಆಹಮ್ಮದ್, ಮೈನುದ್ದೀನ್, ಅಬ್ದುಲ್ ಸಮದ್, ಕರಿಬಸಪ್ಪ ಸೇರಿದಂತೆ ಇತರರು ಇದ್ದರು.
- - --15ಕೆಡಿವಿಜಿ16: